ದಾಂಡೇಲಿ: ನಗರದಲ್ಲಿ ಅಸ್ತಿತ್ವದಲ್ಲಿದ್ದ ಮಾನವ ಹಕ್ಕು ಸಮಿತಿಯ ಪದಾಧಿಕಾರಿಗಳ ಅವಧಿ ಮುಗಿದ ಕಾರಣ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೀಯೊಜಿಸಿ ಪುನರ್ ರಚಿಸ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಮುಖ್ಯವಾಗಿ ಕುಡಿಯುವ ನೀರಿನ ವಿಷಯದ ಬಗ್ಗೆ ಚರ್ಚಿಸಲಾಯಿತಲ್ಲದೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಸಲ್ಲಿಸಿದ ಬೇಡಿಕೆಗೆ ಸ್ಪಂದಿಸಿ ಸರಕಾರ ಕೂಡಲೆ ಬೇಡಿಕೆಗಳ ಬಗ್ಗೆ ಚರ್ಚಿಸದೆ ಇದ್ದಲ್ಲಿ ಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬಗ್ಗೆ ವಿಚಾರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶನಿವಾರ ಎಸ್.ಎಂ ದಬಗಾರ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರು ನಡೆಸಿದ ಆಯ್ಕೆ ಪಕ್ರಿಯೆಯಲ್ಲಿ ಶ್ರೀ ಸಿ.ಎ.ಲೋಬೊ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶ್ರೀ ಗುರುದೀಪಸಿಂಗ್ ಸಂಧು, ಪ್ರಧಾನ ಕಾರ್ಯದರ್ಶಿಯಾಗಿ ಆರ್.ವಿ. ಗಡ್ಡಪ್ಪನವರ, ಕಾರ್ಯದರ್ಶಿಯಾಗಿ ವಸಂತಕುಮಾರ ಮನ್ನೇರಿ, ಖಜಾಂಜಿಯಾಗಿ ಸಬಾಸ್ಟೀನ್ ಡಿಮೆಲ್ಲೊ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಎಸ್.ಎಂ ದಬಗಾರ್, ಉಮೇಶ ನಾಯ್ಕ, ಸತ್ಯಪಾಲನ್ ನಟೇಶ್, ಮೋಜಿಸ್ ಗೊನ್ಸಾಲಿಸ್, ಉದಯ ನಾಯ್ಕ, ಶ್ರೀಪಾದ ಕನಿಟ್ಕರ್, ಸಂತೋಷ ಕಂಗ್ರಾಳಕರ, ನತಾನೆಲ್ ಗುಡ್ಡಿಟ್ಟಿ, ಕೆ.ಎನ್ ದಾನಮ, ರಂಗಸ್ವಾಮಿ.ಬಿ, ಆಯ್ಕೆಯಾದರು.
Leave a Comment