ಹಳಿಯಾಳ:- ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ ತೆಗೆದುಕೊಂಡ ನಿರ್ಣಯ ಮನಸ್ಸಿಗೆ ನೋವಾಗಿದೆ, ಮೊನ್ನೆವರೆಗೂ ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪ್ರಯತ್ನ ಮಾಡಲಾಗಿದ್ದು ಹೈಕಮಾಂಡ ತನ್ನ ನಿರ್ಣಯ ಬದಲಿಸಲಿಲ್ಲ ಹೀಗಿದ್ದರೂ ಸಹ ತಾವು ಹೈಕಮಾಂಡ ನಿರ್ಣಯಕ್ಕೆ ಬದ್ದರಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ತುರ್ತು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಕೆನರಾ ಕ್ಷೇತ್ರದಲ್ಲಿ ಬಿಜೆಪಿಗೆ ಸ್ಪರ್ದೆಯೊಡ್ಡಲು ಕಾಂಗ್ರೇಸ್ ಪಕ್ಷ ಮಾತ್ರ ಶಕ್ತವಾಗಿದೆ ಎಂದು ಹೈಕಮಾಂಡಗೆ ತಿಳಿಸಲಾಗಿತ್ತು. ಅಲ್ಲದೇ ಕಳೆದ ಬಾರಿ ಕಾಂಗ್ರೇಸ್ ಅಭ್ಯರ್ಥಿ ಬಿಜೆಪಿಗೆ ಪ್ರಭಲ ಸ್ಪರ್ದೆ ಒಡ್ಡಿದ್ದರು. ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಇಲ್ಲ ಪ್ರಾಕ್ಟಿಕಲ್ ಆಗಿ ಯೋಚಿಸಿ ನಿರ್ಣಯ ತೆಗೆದುಕೊಳ್ಳಿ ಕಾಂಗ್ರೇಸ್ ಅಭ್ಯರ್ಥಿಗೆ ಮಾತ್ರ ಬಿಜೆಪಿಗೆ ಸ್ಪರ್ದೆ ನೀಡಲು ಸಾಧ್ಯವಿದೆ ಎಂದು ಹಾಗೂ ಇತರ ಎಲ್ಲ ವಿಷಯಗಳ ಕುರಿತು ರಾಹುಲ್ಗಾಂಧಿ ಅವರಿಗೂ ತಿಳಿಸಲಾಗಿತ್ತು ಆದರೇ ಯಾವ ಮಾತು ಫಲ ನೀಡಲಿಲ್ಲ ಎಂದು ದೇಶಪಾಂಡೆ ಬೇಸರದಿಂದ ನುಡಿದರು.
ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ನೀಡಿರುವುದಕ್ಕೆ ನನ್ನ ವಿರೋಧವಿಲ್ಲ ಮೈತ್ರಿ ಪಕ್ಷಗಳ ಸರ್ಕಾರವಿದ್ದು ಮೈತ್ರಿ ಪಕ್ಷದ ಹೈಕಮಾಂಡಗಳು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ದರಿರಬೇಕಾದ ಹಾಗೂ ಮೈತ್ರಿ ಧರ್ಮ ಪಾಲಿಸಬೇಕಾದ ಅನಿವಾರ್ಯತೆ ಇದೆ ಎಂದ ದೇಶಪಾಂಡೆ ಮಾಜಿ ಪ್ರಧಾನಿ ದೇವೆಗೌಡ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಮಗೆ ಕೊಟ್ಟ ಕ್ಷೇತ್ರವನ್ನು ನಾವು ಸ್ವೀಕರಿಸಿದ್ದೇವೆ. ಪ್ರಶಾಂತ ದೇಶಪಾಂಡೆ ಅವರನ್ನು ಜೆಡಿಎಸ್ ಪಕ್ಷದ ಚಿಹ್ನೆಯ ಅಡಿ ನಿಲ್ಲಿಸುವಂತೆ ಕೊರಿದರು ಆದರೇ ತಾವು ಪ್ರಶಾಂತ ಕಾಂಗ್ರೇಸ್ ನಿಂದಲೇ ಟಿಕೆಟ್ ಕೇಳಿಲ್ಲ ಹೀಗಾಗಿ ಜೆಡಿಎಸ್ ಚಿಹ್ನೆಯಡಿ ಸ್ಪರ್ದೆ ಮಾಡುವ ಮಾತೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ಈಗಾಗಲೇ ಬೆಂಗಳೂರಿನಲ್ಲಿ ಮೈತ್ರಿ ಪಕ್ಷಗಳ ಹೈಕಮಾಂಡ ನಡೆಸಿದ ಸಭೆಯಲ್ಲಿ ನಮ್ಮಲ್ಲಿರುವ ಭೀನ್ನಾಭಿಪ್ರಾಯಗಳನ್ನು ಮರೆತು ಟಿಕೆಟ್ ನೀಡಿರುವ ಅಭ್ಯರ್ಥಿಗಳ ಆಯ್ಕೆಗೆ ಒಂದಾಗಿ ಕೆಲಸ ಮಾಡುವಂತೆ ದೇವೆಗೌಡರು ಹಾಗೂ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಹೀಗಾಗಿ ನಾವು ಹೈಕಮಾಂಡ ನಿರ್ಣಯವನ್ನು ಪಾಲಿಸಬೇಕಾಗಿದೆ ಎಂದ ದೇಶಪಾಂಡೆ ಕೆಲವೊಮ್ಮೆ ನಿರ್ಣಯಗಳು ನಮ್ಮ ಮನಸ್ಸಿನಂತೆ ಆಗುವುದಿಲ್ಲ ಆದರೂ ಪಕ್ಷಕ್ಕಾಗಿ ಪ್ರಾಮಾಣ ಕವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಇನ್ನೊಮ್ಮೆ ತಮ್ಮ ಬೇಸವರನ್ನು ಸಚಿವ ದೇಶಪಾಂಡೆ ಹೊರಹಾಕಿದರು.
ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಶಿರಸಿಯಲ್ಲಿ ದಿ.2 ಮಂಗಳವಾರದಂದು ಜೆಡಿಎಸ್- ಕಾಂಗ್ರೇಸ್ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಸಭೆಯನ್ನು ಕರೆಯಲಾಗಿದೆ. ತಾವು ಕೂಡ ಸಭೆಯಲ್ಲಿ ಭಾಗವಹಿಸಲಿದ್ದು ಅಲ್ಲಿ ಮುಂದಿನ ನಡೆಯ ಬಗ್ಗೆ ತೀರ್ಮಾಣ ಪ್ರಕಟಿಸಲಾಗುವುದು ಎಂದು ಸಚಿವ ದೇಶಪಾಂಡೆ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟೀಲ್ ಮೊದಲಾದವರು ಇದ್ದರು.
Leave a Comment