• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಿಂದೂ ಹೋರಾಟಗಾರ ಎಂದು ಬೊಬ್ಬೆ ಹಾಕುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮರಾಠಾ ಸಮುದಾಯದ ಮೀಸಲಾತಿ ಬೇಡಿಕೆಗೆ ಸ್ಪಂದಿಸಿಲ್ಲ – ವಿಪ‌ ಸದಸ್ಯ ಎಸ್.ಎಲ‌್.ಘೊಟ್ನೇಕರ

April 13, 2019 by Yogaraj SK Leave a Comment

IMG 20190413 WA0110

ಹಳಿಯಾಳ:- ಹಿಂದೂ ಹೋರಾಟಗಾರ-ಹಿಂದೂ ರಕ್ಷಕ ಎಂದು ಹೇಳಿಕೊಳ್ಳುವ ಅನಂತಕುಮಾರ ಹೆಗಡೆ 5 ಬಾರಿ ಸಂಸದರಾದರು ಮರಾಠಾ ಸಮುದಾಯವನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎ ಗೆ ಸೇರಿಸಲು ಪ್ರಯತ್ನಿಸಿಲ್ಲಾ ಇವರು ಡೊಂಗಿ ಹಿಂದೂ ನಾಯಕರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕೇಂದ್ರ ಸಚಿವ ಅನಂತಕುಮಾರ ವಿರುದ್ದ ಹಳಿಯಾಳದಲ್ಲಿ ತಿವೃ ವಾಗ್ದಾಳಿ ನಡೆಸಿದರು.
ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪರ ಚುನಾವಣಾ ಪ್ರಚಾರಾರ್ಥ ನಡೆದ ಪಕ್ಷದ ಕಾರ್ಯಕರ್ತರ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮತದಾನದ ಸಮಯದಲ್ಲಿ ಮಾತ್ರ ಮರಾಠರು ನೆನಪಾಗುತ್ತಾರೆ. ಆದರೇ ಮರಾಠರ ಬಹು ವರ್ಷದ ಬೇಡಿಕೆಯಾದ ಪ್ರವರ್ಗ 2ಎ ಗೆ ಮೀಸಲಾತಿ ಸೌಲಭ್ಯ ಒದಗಿಸುವ ಬಗ್ಗೆ ಚುನಾವಣೆ ಬಿಟ್ಟು ಬೇರೆ ಸಂದರ್ಭದಲ್ಲಿ ಚಕಾರವೆತ್ತದ ಸಂಸದರು ಕಿತ್ತೂರು, ಖಾನಾಪುರ-ಹಳಿಯಾಳ ಭಾಗದಲ್ಲಿ ಮರಾಠರ ಮತಗಳನ್ನು ಪಡೆಯದೆ ಗೆದ್ದು ತೊರಿಸಲಿ ಎಂದು ಸವಾಲ್ ಹಾಕಿದರು.
ಅನಂತಕುಮಾರ ಹೆಗಡೆಗೆ ಹೊಡಿಬಡಿ ಖಾತೆ ನೀಡಬೇಕಿತ್ತು ಎಂದು ಲೇವಡಿ ಮಾಡಿದ ಘೋಟ್ನೇಕರ ನೋಟ್ ಬ್ಯಾನನಿಂದ ಸಾಕಷ್ಟು ತೊಂದರೆ ಆಗಿದೆ. ಸಣ್ಣ ಉದ್ದಿಮೆಗಳು ಮುಚ್ಚಿ ಹೊದವು. ಇವರ ಅಚ್ಚೇ ದಿನ್‍ಗಳು ಎಲ್ಲಿ ಹೋದವು ಎಂದು ಪ್ರಶ್ನೇಗಳ ಸುರಿಮಳೆಗೈದ ಘೊಟ್ನೇಕರ ಅವರು ಈ ಬಾರಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು ಆನಂದ ಅಸ್ನೋಟಿಕರ ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿದರು.
ಕೆನರಾ ಲೋಕಸಭಾ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಮಾತನಾಡಿ 5 ಬಾರಿ ಜಿಲ್ಲೆ ಕಂಡ ವಿಚಿತ್ರ ಸಂಸದ ಅನಂತಕುಮಾರ ಹೆಗಡೆ ಆಗಿದ್ದಾರೆ. ಜಿಲ್ಲೆಗೆ ಅವರ ಕೋಡುಗೆ ಶೂನ್ಯವಾಗಿದೆ. ಆದರೇ ಪ್ರಚೋದನಾಕಾರಿ ಭಾಷಣಗಳ ಮೂಲಕ ಗಲಾಟೆಗಳು ನಡೆದು ಬಳಿಕ ಯುವಕರ ಮೇಲೆ ಸಾಕಷ್ಟು ಕೇಸಗಳನ್ನು ಹಾಕಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪರೇಶ ಮೆಸ್ತ್ ಪ್ರಕರಣ ಸಿಬಿಐಗೆ ವಹಿಸಿದ್ದರೂ ಇವತ್ತಿಗೂ ಆರೋಪಿಗಳನ್ನು ಪತ್ತೆ ಹಚ್ಚಲು ಆಗುತ್ತಿಲ್ಲ ಏಕೆ ಎಂದು ಪ್ರಶ್ನೀಸಿದ ಅಸ್ನೋಟಿಕರ ತಾಕತ್ತಿದ್ದರೇ ಪರೇಶ್ ಮೇಸ್ತ್ ಪ್ರಕರಣದ ಮಾಹಿತಿ ಬಹಿರಂಗ ಪಡಿಸಲಿ ಎಂದು ಸವಾಲ್ ಹಾಕಿದರು.
ಅನಂತಕುಮಾರ ಹೆಗಡೆ ಭಾಷಣದಿಂದ ಜನರನ್ನು ಮರಳು ಮಾಡದೇ ಅಭಿವೃದ್ದಿ ಮಾಡಬೇಕಿತ್ತು. ನಾಮ ಹಾಕಿ ಕೇಸರಿ ಶಾಲು ಹೊದಿಸಿದರೇ ಮಾತ್ರ ಹಿಂದೂ ಆಗಲಾರ ಕೇಸರಿ ಎಂದರೇ ಶಾಂತಿಯ ಸಂಕೇತವಾಗಿದ್ದು ಸಹೋದರತ್ವದಿಂದ ಸಮಾಜದಲ್ಲಿ ಬಾಳಬೇಕಿದೆ ಎಂದ ಅಸ್ನೋಟಿಕರ ಎಲ್ಲೆಡೆ ತಮಗೆ ಉತ್ತಮ ಪ್ರತಿಕ್ರಿಯೇ ದೊರೆಯುತ್ತಿದ್ದು ದಾಖಲೆಯ ಗೆಲುವು ದಾಖಲಿಸುವುದಾಗಿ ಹೇಳಿದರು.
ಹಳಿಯಾಳ ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಜೆಡಿಎಸ್ ಮುಖಂಡ ಎಸ್.ಎ.ಶೇಟವಣ್ಣವರ, ಉಮೇಶ ಬೊಳಶೇಟ್ಟಿ, ಕಾಂಗ್ರೇಸ್ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಮಹೇಶ್ರಿ ಸಂಜು ಮಿಶ್ಯಾಳೆ, ಖಯ್ಯಾಮ ಮುಗದ, ಸೈಯದಲಿ ಅಂಕೋಲೆಕರ, ಅನಿಲ ಚವ್ವಾಣ, ರೀಟಾ ಸಿದ್ದಿ, ನಸ್ರುಲ್ಲಾಖಾನ್, ಮಾಲಾ ಬ್ರಗಾಂಜಾ ಸೇರಿದಂತೆ ಮೊದಲಾದ ಕಾಂಗ್ರೇಸ್ ಹಾಗೂ ಜೆಡಿಎಸ್ ಮುಖಂಡರು ಇದ್ದರು.
ಪ್ರಮುಖರೇ ಗೈರು :- ಆದರೇ ಜೆಡಿಎಸ್ ಪಕ್ಷದ ಹಳಿಯಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಎನ್.ಎಸ್.ಜಿವೋಜಿ, ಈ ಹಿಂದೆ ವಿಧಾನಸಭೆ ಚುನಾವಣೆಗೆ ಸ್ಪರ್ದಿಸಿ ಸೋಲನುಭವಿಸಿದ್ದ ಅಭ್ಯರ್ಥಿ ಕೆ.ಆರ್.ರಮೇಶ್ ಸೇರಿದಂತೆ ಮೊದಲಾದ ಜೆಡಿಎಸ್ ಮುಖಂಡರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು.

IMG 20190413 WA0109

IMG 20190413 WA0108 1

12 hly 1 1

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಬೊಬ್ಬೆ ಹಾಕುವ, ಮರಾಠಾ ಸಮುದಾಯದ, ಮೀಸಲಾತಿ ಬೇಡಿಕೆಗೆ ಸ್ಪಂದಿಸಿಲ್ಲ, ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ, ಸಂಗೋಳ್ಳಿ ರಾಯಣ್ಣ ವೃತ್ತ, ಹಿಂದೂ ಹೋರಾಟಗಾರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...