ಹಳಿಯಾಳ:- ಹಿಂದೂ ಹೋರಾಟಗಾರ-ಹಿಂದೂ ರಕ್ಷಕ ಎಂದು ಹೇಳಿಕೊಳ್ಳುವ ಅನಂತಕುಮಾರ ಹೆಗಡೆ 5 ಬಾರಿ ಸಂಸದರಾದರು ಮರಾಠಾ ಸಮುದಾಯವನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎ ಗೆ ಸೇರಿಸಲು ಪ್ರಯತ್ನಿಸಿಲ್ಲಾ ಇವರು ಡೊಂಗಿ ಹಿಂದೂ ನಾಯಕರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕೇಂದ್ರ ಸಚಿವ ಅನಂತಕುಮಾರ ವಿರುದ್ದ ಹಳಿಯಾಳದಲ್ಲಿ ತಿವೃ ವಾಗ್ದಾಳಿ ನಡೆಸಿದರು.
ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪರ ಚುನಾವಣಾ ಪ್ರಚಾರಾರ್ಥ ನಡೆದ ಪಕ್ಷದ ಕಾರ್ಯಕರ್ತರ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮತದಾನದ ಸಮಯದಲ್ಲಿ ಮಾತ್ರ ಮರಾಠರು ನೆನಪಾಗುತ್ತಾರೆ. ಆದರೇ ಮರಾಠರ ಬಹು ವರ್ಷದ ಬೇಡಿಕೆಯಾದ ಪ್ರವರ್ಗ 2ಎ ಗೆ ಮೀಸಲಾತಿ ಸೌಲಭ್ಯ ಒದಗಿಸುವ ಬಗ್ಗೆ ಚುನಾವಣೆ ಬಿಟ್ಟು ಬೇರೆ ಸಂದರ್ಭದಲ್ಲಿ ಚಕಾರವೆತ್ತದ ಸಂಸದರು ಕಿತ್ತೂರು, ಖಾನಾಪುರ-ಹಳಿಯಾಳ ಭಾಗದಲ್ಲಿ ಮರಾಠರ ಮತಗಳನ್ನು ಪಡೆಯದೆ ಗೆದ್ದು ತೊರಿಸಲಿ ಎಂದು ಸವಾಲ್ ಹಾಕಿದರು.
ಅನಂತಕುಮಾರ ಹೆಗಡೆಗೆ ಹೊಡಿಬಡಿ ಖಾತೆ ನೀಡಬೇಕಿತ್ತು ಎಂದು ಲೇವಡಿ ಮಾಡಿದ ಘೋಟ್ನೇಕರ ನೋಟ್ ಬ್ಯಾನನಿಂದ ಸಾಕಷ್ಟು ತೊಂದರೆ ಆಗಿದೆ. ಸಣ್ಣ ಉದ್ದಿಮೆಗಳು ಮುಚ್ಚಿ ಹೊದವು. ಇವರ ಅಚ್ಚೇ ದಿನ್ಗಳು ಎಲ್ಲಿ ಹೋದವು ಎಂದು ಪ್ರಶ್ನೇಗಳ ಸುರಿಮಳೆಗೈದ ಘೊಟ್ನೇಕರ ಅವರು ಈ ಬಾರಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು ಆನಂದ ಅಸ್ನೋಟಿಕರ ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿದರು.
ಕೆನರಾ ಲೋಕಸಭಾ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಮಾತನಾಡಿ 5 ಬಾರಿ ಜಿಲ್ಲೆ ಕಂಡ ವಿಚಿತ್ರ ಸಂಸದ ಅನಂತಕುಮಾರ ಹೆಗಡೆ ಆಗಿದ್ದಾರೆ. ಜಿಲ್ಲೆಗೆ ಅವರ ಕೋಡುಗೆ ಶೂನ್ಯವಾಗಿದೆ. ಆದರೇ ಪ್ರಚೋದನಾಕಾರಿ ಭಾಷಣಗಳ ಮೂಲಕ ಗಲಾಟೆಗಳು ನಡೆದು ಬಳಿಕ ಯುವಕರ ಮೇಲೆ ಸಾಕಷ್ಟು ಕೇಸಗಳನ್ನು ಹಾಕಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪರೇಶ ಮೆಸ್ತ್ ಪ್ರಕರಣ ಸಿಬಿಐಗೆ ವಹಿಸಿದ್ದರೂ ಇವತ್ತಿಗೂ ಆರೋಪಿಗಳನ್ನು ಪತ್ತೆ ಹಚ್ಚಲು ಆಗುತ್ತಿಲ್ಲ ಏಕೆ ಎಂದು ಪ್ರಶ್ನೀಸಿದ ಅಸ್ನೋಟಿಕರ ತಾಕತ್ತಿದ್ದರೇ ಪರೇಶ್ ಮೇಸ್ತ್ ಪ್ರಕರಣದ ಮಾಹಿತಿ ಬಹಿರಂಗ ಪಡಿಸಲಿ ಎಂದು ಸವಾಲ್ ಹಾಕಿದರು.
ಅನಂತಕುಮಾರ ಹೆಗಡೆ ಭಾಷಣದಿಂದ ಜನರನ್ನು ಮರಳು ಮಾಡದೇ ಅಭಿವೃದ್ದಿ ಮಾಡಬೇಕಿತ್ತು. ನಾಮ ಹಾಕಿ ಕೇಸರಿ ಶಾಲು ಹೊದಿಸಿದರೇ ಮಾತ್ರ ಹಿಂದೂ ಆಗಲಾರ ಕೇಸರಿ ಎಂದರೇ ಶಾಂತಿಯ ಸಂಕೇತವಾಗಿದ್ದು ಸಹೋದರತ್ವದಿಂದ ಸಮಾಜದಲ್ಲಿ ಬಾಳಬೇಕಿದೆ ಎಂದ ಅಸ್ನೋಟಿಕರ ಎಲ್ಲೆಡೆ ತಮಗೆ ಉತ್ತಮ ಪ್ರತಿಕ್ರಿಯೇ ದೊರೆಯುತ್ತಿದ್ದು ದಾಖಲೆಯ ಗೆಲುವು ದಾಖಲಿಸುವುದಾಗಿ ಹೇಳಿದರು.
ಹಳಿಯಾಳ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಜೆಡಿಎಸ್ ಮುಖಂಡ ಎಸ್.ಎ.ಶೇಟವಣ್ಣವರ, ಉಮೇಶ ಬೊಳಶೇಟ್ಟಿ, ಕಾಂಗ್ರೇಸ್ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಮಹೇಶ್ರಿ ಸಂಜು ಮಿಶ್ಯಾಳೆ, ಖಯ್ಯಾಮ ಮುಗದ, ಸೈಯದಲಿ ಅಂಕೋಲೆಕರ, ಅನಿಲ ಚವ್ವಾಣ, ರೀಟಾ ಸಿದ್ದಿ, ನಸ್ರುಲ್ಲಾಖಾನ್, ಮಾಲಾ ಬ್ರಗಾಂಜಾ ಸೇರಿದಂತೆ ಮೊದಲಾದ ಕಾಂಗ್ರೇಸ್ ಹಾಗೂ ಜೆಡಿಎಸ್ ಮುಖಂಡರು ಇದ್ದರು.
ಪ್ರಮುಖರೇ ಗೈರು :- ಆದರೇ ಜೆಡಿಎಸ್ ಪಕ್ಷದ ಹಳಿಯಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಎನ್.ಎಸ್.ಜಿವೋಜಿ, ಈ ಹಿಂದೆ ವಿಧಾನಸಭೆ ಚುನಾವಣೆಗೆ ಸ್ಪರ್ದಿಸಿ ಸೋಲನುಭವಿಸಿದ್ದ ಅಭ್ಯರ್ಥಿ ಕೆ.ಆರ್.ರಮೇಶ್ ಸೇರಿದಂತೆ ಮೊದಲಾದ ಜೆಡಿಎಸ್ ಮುಖಂಡರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು.
Leave a Comment