ಹಳಿಯಾಳ:- ತಾಲೂಕಿನ ಯಡೋಗಾ ಗ್ರಾಮದ ಅಂಬೆಡ್ಕರ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮೀತಿ ಕೇಂಪು ಸೇನೆಯಿಂದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 128 ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು.
ಅಂಬೇಡ್ಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷ ವಿ.ಬಿ.ರಾಮಚಂದ್ರ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಶೋಷಿತ ಸಮುದಾಯಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಕೆಲಸಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಶಿವಾಜಿ ಮಂಗೇಶ್ಕರ, ಉಪಾಧ್ಯಕ್ಷ ಪರಶುರಾಮ ವಡ್ಡರ, ಕುರುಬರ, ಪರಶುರಾಮ ಹನುಮಂತ ವಡ್ಡರ, ಅಬ್ದುಲ ಸತ್ತಾರ ಬೆಟಗೇರಿ, ಅಶೋಕ ಕೇಸರೇಕರ, ಮುಕುಂದ ಕಿನಗೇಕರ, ಹನುಮಂತ ಭಜಂತ್ರಿ, ಶಖೀಲ ಜೋಗನಕೊಪ್ಪ, ಮೀನಾಕ್ಷಿ ಇರ್ಲಾ, ನಾಗೇಂದ್ರ ಗೌಡಾ ಇದ್ದರು.
Leave a Comment