• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಡಿನಬಾಳದಲ್ಲಿ ಸಂಪನ್ನಗೊಂಡ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ

April 17, 2019 by Gaju Gokarna Leave a Comment

watermarked hnr 17 Paper Published h.02

ಹೊನ್ನಾವರ : ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆ, ಹಡಿನಬಾಳ ಇದರ 16 ನೇ ವರ್ಷದ ವಾರ್ಷಿಕೋತ್ಸವ, ಸಂಸ್ಮರಣೆ, ಸನ್ಮಾನ, ಪುರಸ್ಕಾರ ಹಾಗೂ ರಾಗಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮವು ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರ ಹಡಿನಬಾಳದಲ್ಲಿ ನಡೆಯಿತು.
ರಾಷ್ಟ್ರಪ್ರಶಸ್ತಿ ಪುರಸ್ಕøತ ವೇ|| ಮೂ|| ಶಿವರಾಮ ಭಟ್ಟ ಅಲೇಖ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಲಾ ಸಂಘಟನೆ ಕಲಾವಿದನನ್ನು ಬೆಳೆಸುತ್ತದೆ. ಅಂತಹ ಎಷ್ಟೋ ಹಿರಿ-ಕಿರಿಯ ಕಲಾವಿದರಿಗೆ ರಾಗಶ್ರೀ ವೇದಿಕೆ ಕಲ್ಪಿಸಿದೆ. ಹದಿನಾರು ವರ್ಷಗಳಿಂದ ರಾಗಶ್ರೀ ಗ್ರಾಮೀಣ ಭಾಗದಲ್ಲಿದ್ದು, ಅಂತರಾಷ್ಟ್ರೀಯ ಕಲಾವಿದರನ್ನು ಕರೆಸಿ ಸಂಗೀತದ ಕಂಪನ್ನು ಬೀರಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
À ಕೇಂದ್ರ ಸಂಗೀತ ನಾಟಕ ಅಕಾಡೆಮಿ ದೆಹಲಿ ಇದರ ಸದಸ್ಯರಾದ ಖ್ಯಾತ ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮ£ ಮಾತನಾಡಿÉ ಕಲೆ ಉಳಿಸುವುದು, ಕಲಾವಿದನ ಜವಾಬ್ದಾರಿ, ಕಲೆ ಅರಳಿ ಬೆಳೆಯಲು ಸಂಘಟಕರು ಅವಶ್ಯ ಒಂದಿಷ್ಟು ವರ್ಷ ಮಾಡಿದ ಸಂಘಟಕರ ಸಂಘಟನೆಯ ಜವಾಬ್ದಾರಿಯನ್ನು ಪ್ರಜ್ಞಾವಂತ ಸಮಾಜವೇ ಮುಂದುವರಿಸಿಕೊಂಡು ಹೋದಾಗ ಮಾತ್ರ ಕಲೆ ಸಮಾಜದಲ್ಲಿ ಬದುಕಿ ವಿಜೃಂಭಿಸಲು ಸಾಧ್ಯ ಎಂದು ರಾಗಶ್ರೀ ಸಮಾಜಮುಖಿ ಸಾಂಸ್ಕøತಿಕ ಕಾರ್ಯವನ್ನು ರಾಗಶ್ರೀಯ ಶಿಸ್ತ ಬದ್ಧ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪಂ| ವೆಂಕಟೇಶ ಕುಮಾರ ಧಾರವಾಡ ಇವರಿಗೆ ದಿ. ಪಂ| ಜಿ. ಆರ್. ಭಟ್ಟ, ಬಾಳೆಗದ್ದೆ ಹೆಸರಿನಲ್ಲಿ ನೀಡುವ ರಾಗಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿ ಈ ಪ್ರಶಸ್ತಿ ನನಗೆ ದೇವರ ಸನ್ನಿದಿಯಲ್ಲಿ ನೀಡಿದ್ದು ಸಂತಸ ತಂದಿದೆ ಸಂಘಟನೆ ಕಷ್ಟವಾದರು ಗ್ರಾಮೀಣ ಭಾಗದಲ್ಲಿ ಈ ರೀತಿ ಕಾರ್ಯಕ್ರಮದ ಆಯೋಜನೆ ಸಂಗೀತ ಸರಸ್ವತಿಯ ಸೇವೆ ಎಂದು ಬಣ್ಣಿಸಿದರು. ಅದೇ ರೀತಿಯಾಗಿ ಖ್ಯಾತ ಭಜನಾ ಕಲಾವಿದರಾದ ವಸಂತ ಭಟ್ಟ ಗುಂಡಿಬೈಲ್ ಇವರನ್ನು ಅವರ ಜೀವಮಾನದ ಕಲಾ ಸೇವೆಗಾಗಿ ಸನ್ಮಾನಿಸಲಾಯಿತು.
ಅದೇ ರೀತಿ ಮೂರು ದಿನಗಳ ಸಂಗೀತ ಕಾರ್ಯಾಗಾರವನ್ನು ನಡೆಸಿಕೊಟ್ಟ ಪಂ| ಅಜೇಯ ಚಕ್ರವರ್ತಿ ಶಿಷ್ಯರಾದ ವಿದ್ವಾನ ಗುರುದತ್ತ ಎ.ಕೆ. ಅವರಿಗೆ ರಾಗಶ್ರೀ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇದರ ಸದಸ್ಯರಾದ ಡಾ. ಅಶೋಕ ಹುಗ್ಗಣ್ಣವರ ಅಂತರಾಷ್ಟ್ರೀಯ ಸಂಗೀತ ಕಲಾವಿದರು ಎಸ್.ಡಿ.ಎಂ. ಕಾಲೇಜ್ ಹೊನ್ನಾವರ. ಹಾಗೂ ಕಲಾಶ್ರೀ ಪುರಸ್ಕøತ ಪ್ರೋ. ಎಸ್. ಶಂಭು ಭಟ್ಟ ಕಡತೋಕಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡಿದರು.
ಇದಕ್ಕೂ ಪೂರ್ವದಲ್ಲಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಸಂಗೀತ ಪ್ರಸ್ತುತಪಡಿಸಿದರು. ನಂತರ ವಿದ್ವಾನ ಗುರುದತ್ತ ಏ.ಕೆ. ಕಲ್ಕತ್ತಾ ಅವರು ಶುದ್ಧ ಸಾರಂಗನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.
ನಂತರ ನಡೆದ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪಂ|| ಎಂ. ವೆಂಕಟೇಶ ಕುಮಾರ ಅವರು ರಾಗ ಶುದ್ಧ ಕಲ್ಯಾಣ, ಬಿಹಾಗ, ಬಸಂತ ಬಹಾರ, ರಾಗವನ್ನು ತಮ್ಮ ಸಿರಿಕಂಠದ ಮೂಲಕ ಪಾಂಡಿತ್ಯ ಪೂರ್ಣವಾಗಿ ಮಂಡಿಸಿದರು. ಅಷ್ಟೇ ಅಲ್ಲದೇ ತೊರೆದು ಜೀವಿಸಬಹುದೆ, ಅಕ್ಕ ಕೇಳವ್ವ, ಪ್ರಣತಿಯಿದೆ…, ಒಂದು ಬಾರಿ ಸ್ಮರಣೆ ಸಾಲದೆ, ದಾಸರ ಪದಗಳು ನೆರೆದ ಅಪಾರ ಸಂಗೀತ ಶೋತೃಗಳನ್ನು ಮಂತ್ರ ಮುಗ್ದಗೊಳಿಸಿತು. ಇವರಿಗೆ ಅಷ್ಟೇ ಉತ್ತಮವಾಗಿ ಡಾ|| ರವೀಂದ್ರ ಕಾಟೋ, ಬೆಂಗಳೂರು, ಸಂವಾದಿನಿ ಸಾಥ್ ನೀಡಿದರೆ ಪ್ರೋ. ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಅಷ್ಟೇ ಉತ್ತಮವಾಗಿ ತಬಲಾ ಸಾಥ್ ನೀಡಿ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು. ರಾಘವೇಂದ್ರ ಹೆಗಡೆ ಹಾಗೂ ಉಷಾಭಟ್ಟ ಕುಮಟಾ ತಾನಪುರ ಸಾಥನಲ್ಲಿ ಸಹಕರಿಸಿದರು.
ರಾಗಶ್ರೀ ಅಧ್ಯಕ್ಷ ವಿದ್ವಾನ ಶಿವಾನಂದ ಭಟ್ಟ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನು ಆಡಿದರೆ ವಿದ್ವಾನ ಎಸ್.ಜಿ. ಹೆಗಡೆ ಕಪ್ಪೆಕೇರಿ ಧನ್ಯವಾದ ಸಮರ್ಪಿಸಿದರು. ರಾಗಶ್ರೀಯ ಸೀತಾರಾಮ ಹೆಗಡೆ, ಪ್ರಾಚಾರ್ಯ ಎಸ್.ಜಿ. ಭಟ್ಟ, ಎಸ್.ವಿ. ಹೆಗಡೆ, ಹರಿಶ್ಚಂದ್ರ ನಾಯ್ಕ, ವಿದ್ವಾನ ರಾಮ ಭಟ್ಟ ಕಲಾವಿದರನ್ನು ಗೌರವಿಸಿದರು. ನೆರೆದ ಅಪಾರ ಶೋತುೃಗಳು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

watermarked hnr 17 Paper Published h.01

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: anniversary, Delhi, Hari-Junior Artists, Honorary, National Film Festival, Ragasree Forum, Raghashree Award Ceremony, Rangashree National Music Festival, Recall, Reception, Sangeet Natak Akademi

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...