ಹಳಿಯಾಳ: ಶ್ರೀ ಛತ್ರಪತಿ ಶಿವಾಜಿ ವಿವಿಧ್ಧೋಶಗಳ ಸಹಕಾರಿ ಸಂಘ ನಿಯಮಿತ ಹಳಿಯಾಳ ಶಾಖೆ ಸೇರಿದಂತೆ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿರುವ ನಮ್ಮ ಬ್ಯಾಂಕಿನ ವಹಿವಾಟ ಪ್ರತಿ ವರ್ಷ ಲಾಭದಲ್ಲಿ ನಡೆಯುತ್ತಿದ್ದು, ಗ್ರಾಹಕರ ವಿಶ್ವಾಸವನ್ನು ಗಳಿಸಿರುವ ಸಂಸ್ಥೆಯು ಲಾಭದ ಹಣದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ತೀರ್ಮಾನಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಆಗಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.
ಶಿವಾಜಿ ಬ್ಯಾಂಕ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2018-19ನೇ ಸಾಲಿನ ಅಡಾವೆ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಳೆದ 4 ವರ್ಷಗಳಿಂದ ನಮ್ಮ ಬ್ಯಾಂಕಿನ ವಹಿವಾಟ ಪ್ರಗತಿ ಹಂತದಲ್ಲಿದ್ದು, ಮುಂದಿನ ವರ್ಷದೊಳಗೆ ಸಾಲ ಮುಕ್ತ ಸಂಸ್ಥೆಯನ್ನಾಗಿ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ಈ ವರ್ಷ ಒಟ್ಟು 66 ಲಕ್ಷ ಲಾಭದಲ್ಲಿದೆ ಎಂದ ಅವರು ಬೇರೆ ಬ್ಯಾಂಕಿನಿಂದ ಒಟ್ಟು 3.40ಕೋಟಿ ಸಾಲ ಪಡೆಯಲಾಗಿದೆ. ಒಟ್ಟು 13590 ಸದಸ್ಯರನ್ನು ಹೊಂದಿದ್ದು 226.96 ಲಕ್ಷ ಷೇರು ರಖಂ, ಬಂಡವಾಳ ರಖಂ 21.13ಕೋಟಿ, ಸವತ ಬಂಡವಾಳ 367.90ಲಕ್ಷ ಹಾಗೂ ಕಳೆದ ವರ್ಷ ಡಿವಿಡೆಂಡ 3% ನೀಡಲಾಗಿದ್ದು, ನಮ್ಮ ಬ್ಯಾಂಕಿನಿಂದ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಸಹಾಯ ಸೌಲಭ್ಯ ನೀಡಲಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಮಾಜಿಕ ಚಟುವಟಿಕೆಗಳಲ್ಲಿ ಸಹಾಯ-ಸಹಕಾರ ನೀಡುವುದಾಗಿ ಘೋಟ್ನೇಕರ ಘೋಷಿಸಿದರು.
ಸುದ್ದಿಗೊಷ್ಠಿಯಲ್ಲಿ ನಿರ್ದೇಶಕರಾದ ಎಂ.ವಿ.ಘಾಡಿ, ಶಂಕರ ಬೆಳಗಾಂವಕರ, ಅಶೋಕ ಘೋಟ್ನೇಕರ, ವೈ.ಪಿ.ಬೋಬಾಟಿ, ಸುನೀಲ್ ಬೋಬಾಟಿ, ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಮಾಳಗಾಂವಕರ ಇದ್ದರು.
Leave a Comment