ಹಳಿಯಾಳ:- ಚುನಾವಣೆಗೆ ಮತದಾರರಿಗೆ ಆಮಿಷವೊಡ್ಡಲು ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿದ್ದಾರೆಂಬ ದೂರಿನ ಮೆರೆಗೆ ಹಳಿಯಾಳ ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಆಪ್ತರೊಬ್ಬರ ಮನೆಯ ಮೇಲೆ ಚುನಾವಣಾಧಿಕಾರಿಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ವಿದ್ಯಮಾನ ಶನಿವಾರ ನಡೆದಿದೆ.
ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ರಾಜಕೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆದಿರುವುದು ಹಳಿಯಾಳದಲ್ಲಿ ಇದೆ ಮೊದಲಾಗಿದೆ.
ಪುರಸಭೆ ಮಾಜಿ ಸದಸ್ಯರು ಆಗಿರುವ ಹಿರಿಯ ರಾಜಕೀಯ ಮುಖಂಡ ಎಸ್.ಎ.ಶೇಟವಣ್ಣವರ ಅವರ ಆನೆಗುಂದಿ ಬಡಾವಣೆಯಲ್ಲಿರುವ ಮನೆಯ ಮೇಲೆ ದಾಳಿ ನಡೆದಿದ್ದು. ತಹಶೀಲ್ದಾರ್ ಶಿವಾನಂದ ಉಳ್ಳೆಗಡ್ಡಿ, ಫ್ಲಾಯಿಂಗ್ ಸ್ಕ್ವಾಡ್ ಅಧಿಕಾರಿ ರವೀಂದ್ರ ಮೆಟಗುಡ್ಡ ಸೇರಿದಂತೆ 7 ಕ್ಕೂ ಅಧಿಕ ಅಧಿಕಾರಿ ಹಾಗೂ ಸಿಬ್ಬಂದಿಗಳು ಶೇಟವಣ್ಣವರ ಅವರ ಮನೆಯಲ್ಲಿ ಸಮಗ್ರ ಪರಿಶೀಲನೆ ನಡೆಸಿದರು.
ಯಾವೊಂದು ಸ್ಥಳವನ್ನು ಬೀಡದೆ ಇಂಚಿಂಚೂ ಹುಡುಕಾಟ ನಡೆಸಿದ ಅಧಿಕಾರಿಗಳಿಗೆ ಯಾವ ಅಕ್ರಮ ಹಣ ಅಥವಾ ಯಾವುದೇ ವಸ್ತುಗಳು ಸಿಗದೆ ವಾಪಸ್ಸಾಗಿದ್ದಾರೆ. ದಾಳಿಯ ಸುದ್ದಿಯ ಬಗ್ಗೆ ಉಹಾಪೊಹಗಳು ಹರಡುತ್ತಿದ್ದಂತೆ ಪಟ್ಟಣದಲ್ಲಿ ಐಟಿ ಇಲಾಖೆ ರೇಡ್ ನಡೆದಿದೆ, ಅಪಾರ ಪ್ರಮಾಣದ ಹಣ ವಶಪಡಿಸಿಕೊಳ್ಳಲಾಗಿದೆ ಎಂಬ ಸುಳ್ಳು ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆ ಕೆಲ ಕಾಲ ಸಂಚಲನವನ್ನುಂಟು ಮಾಡಿದ್ದಂತು ಸತ್ಯ.
ದಾಳಿಯ ಕುರಿತು ಮಾಧ್ಯಮದವರಿಗೆ ಪ್ರತಿಕ್ರೀಯೆ ನೀಡಿದ ಶೇಟವಣ್ಣವರ ಅವರು ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ವಿರೋಧ ಪಕ್ಷದವರಿಗೆ ಸೋಲು ಅನುಭವಿಸುವ ಭಿತಿ ಕಾಡುತ್ತಿದ್ದು ಇದಕ್ಕಾಗಿ ಈ ರೀತಿಯ ಸುಳ್ಳು ದೂರುಗಳನ್ನು ನೀಡಿ ದಾಳಿ ನಡೆಸುವ ಹೇಡಿ ಕೈತ್ಯಕ್ಕೆ ಮುಂದಾಗಿದ್ದಾರೆಂದು ಕಿಡಿ ಕಾರಿದರು.
ದಾಳಿ ನಡೆಸಿ ಪರಿಶೀಲನೆ ನಡೆಸಿದ ಅಧೀಕಾರಿಗಳಿಗೆ ತಾವು ಸಹಕಾರ ನೀಡಿದ್ದು ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಅವರ ಬಗ್ಗೆ ತಮಗೆ ಬೇಸರವಿಲ್ಲ ಆದರೇ ಹಳಿಯಾಳದಲ್ಲಿ ವ್ಯಕ್ತಿಗತವಾಗಿ ದಾಳಿಗಳನ್ನು ಮಾಡಿಸಿ ಬೆದರಿಕೆ ಹಾಕುವ ತಂತ್ರಕ್ಕೆ ತಾವು ಹೆದರುವುದಿಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದ ಸಣ್ಣನಿಂಗಪ್ಪಾ ಶೆಟವಣ್ಣವರ್ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ದ ಅವರ ಪಕ್ಷದಲ್ಲೇ ವಿರೋಧಿ ಅಲೆ ಇದ್ದು ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗೆಲುವು ನಿಶ್ಚಿತವಾಗಿದೆ. ಅಸ್ನೋಟಿಕರ್ ಆಯ್ಕೆಯಾದ ಬಳಿಕ ನಮ್ಮ ನಡೆಗಳನ್ನು ಎದುರಿಸಲು ಈಗ ದಾಳಿ ನಡೆಸಲು ಪಿತೂರಿ ಮಾಡಿದ ಹೇಡಿಗಳು ಸಿದ್ದರಾಗಲಿ ಎಂದು ಎಚ್ಚರಿಕೆ ನೀಡಿದರು.
ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರಾದ್ಯಂತ ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಭರದಿಂದ ಸಾಗಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಕಾರಣ ಮೈತ್ರಿ ಅಭ್ಯರ್ಥಿ ಗೆಲುವು ಶತಸಿದ್ದ ಎಂದು ಶೆಟವಣ್ಣವರ್ ಭವಿಷ್ಯ ನುಡಿದರು.
Leave a Comment