ಹಳಿಯಾಳ:- ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಉದ್ಯೋಗವಕಾಶವನ್ನು ಕಲ್ಪಿಸುವ ಔದ್ಯೋಗಿಕ ತರಬೇತಿಗಳ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸ ಬೇಕು. ತಾಂತ್ರಿಕ, ಕೌಶಲ್ಯಭರಿತ ಕುಶಲಕರ್ಮಿಗಳ ಅವಶ್ಯಕತೆ ದೇಶಕ್ಕಿದೆ ಎಂದು ಹುಬ್ಬಳ್ಳಿ ದೇಶಪಾಂಡೆ ಪೌಂಡೆಶನ ಖರಗಪೂರ ಐಐಟಿ ಪದವಿಧರೆ ಸೌಮ್ಯಾ ಪಾಶುಮಾರ್ತಿ ಅಭಿಪ್ರಾಯಪಟ್ಟರು.
ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪದವಿ ದಿನದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಕ್ಷಣ, ಶಿಕ್ಷಣದ ಮಾನ್ಯತೆ, ನೈಪುಣ್ಯತೆ ಹಾಗೂ ಶಿಕ್ಷಣದ ಸರಿಯಾದ ಉಪಯುಕ್ತತೆಯ ಅರಿವು ನಮ್ಮಿಲ್ಲಿರಬೇಕೆಂದರು.
ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯು ಈ ನಿಟ್ಟಿನಲ್ಲಿ ಅತ್ಯಂತ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರದ ಕೆಲವೇ ಸಂಸ್ಥೆಗಳಲ್ಲಿ ಒಂದಾಗಿರುವುದು ಹೆಮ್ಮಯ ವಿಷಯವಾಗಿದೆ ಎಂದ ಅವರು ಐಐಟಿ ಯಲ್ಲೂ ಇಲ್ಲದೆ ಇರುವ ಸೌಲಭ್ಯ ಹಳಿಯಾಳದ ಈ ಐಟಿಐ ನಲ್ಲಿರುವುದು ವಿಶೇಷ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಂಸ್ಥೆಯಲ್ಲಿ ತರಬೇತಿ ಪೂರೈಸಿದ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪತ್ರಗಳನ್ನು ಅತಿಥಿಗಳಿಂದ ವಿತರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ದಿನೇಶ ನಾಯ್ಕ ವಾರ್ಷಿಕ ವರದಿಯನ್ನು ವಾಚಿಸಿದರು.
ವೇದಿಕೆಯಲ್ಲಿ ಆನಂದ ಅಂಗ್ರೋಳ್ಳಿ, ತರಬೇತಿ ಅಧಿಕಾರಿ ನಂದಕುಮಾರ ತೋರಸ್ಕರ, ವೇಣುಗೋಪಲ ಜೋಶಿ, ಮಹ್ಮದ ಹನಿಫ್, ಪೂಜಾ ಜಾಧವ ಇದ್ದರು.
Leave a Comment