ಹಳಿಯಾಳ:- ಶಿವಾಜಿ ಮಹಾರಾಜರು ಒಂದೇ ಧರ್ಮ ಅಥವಾ ಜಾತಿಗೆ ಸೀಮಿತರಾಗಿಲ್ಲ ಅವರೊಬ್ಬ ರಾಷ್ಟ್ರಪುರುಷರು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹೇಳಿದರು.
ಶಿವಾಜಿ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ಪ್ರದೇಶ ಗರಡಿ ಮನೆಯ ಹತ್ತಿರದ ಸಂತಾಜಿ-ಧನಾಜಿ-ತಾನಾಜಿ ಯುವಕ ಮಂಡಳ ತಾಲಿಮಚೌಕ್ದವರಿಂದ ನಡೆದ ಶಿವಾಜಿ ಜಯಂತ್ಸೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಲ ಶಿವಾಜಿಯ ತೊಟ್ಟಿಲು ತೂಗಿ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಶಿವಾಜಿ ಮಹಾರಾಜರನ್ನು ಎಂದಿಗೂ ಒಂದೇ ಜಾತಿ ಹಾಗೂ ಧರ್ಮಕ್ಕೆ ಸೀಮಿತಗೊಳಿಸುವ ತಪ್ಪನ್ನು ಮಾಡಬೇಡಿ ಅವರು ಅಖಂಡ ಭಾರತ ದೇಶಕ್ಕಾಗಿ ಹೋರಾಡಿದ ಜಗತ್ತೇ ಮೆಚ್ಚುವಂತಹ ಆಡಳಿತ ನೀಡಿದ ಮಹಾನ್ ರಾಜರಾಗಿದ್ದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೇ ಸಮಾಜ ಸುಧಾರಣೆ ಸಾಧ್ಯವೆಂದರು.
ಹಳಿಯಾಳ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಪುರಸಭೆ ಸದಸ್ಯ ಅನಿಲ ಚವ್ವಾಣ, ಹಿರಿಯರಾದ ವೈಪಿ ಬೋಬಾಟಿ, ಯುವಕರಾದ ಮುಕುಂದ ಬೆಳಗಾಂವಕರ, ವಿಠ್ಠಲ, ಮಹಿಳೆಯರು ಮೊದಲಾದವರು ಇದ್ದರು.
Leave a Comment