ಹಳಿಯಾಳ:- ನೀರು ಹಾಗೂ ಆಹಾರವನ್ನು ಅರಸಿ ಕಾಡಾಣೆಯೊಂದು ಗ್ರಾಮ ಹಾಗೂ ಪಟ್ಟಣದತ್ತ ಆಗಮಿಸುತ್ತಿರುವ ಘಟನೆಗಳು ಹಳಿಯಾಳ ಭಾಗದಲ್ಲಿ ಆಗಾಗ ಕೆಳಿ ಬರುತ್ತಿದೆ.
ಮೊನ್ನೆ ಹಳಿಯಾಳ ದಾಂಡೇಲಿ ರಾಜ್ಯ ಹೆದ್ದಾರಿಯ ಆಲೂರು ಸಮೀಪ ಆನೆಯೊಂದು ಹೊಲಗಳಲ್ಲಿ ಸುತ್ತಾಡಿ ರಸ್ತೆಯ ಮೇಲೆ ಬಂದಿದೆ. ಸ್ವಲ್ಪ ಹೊತ್ತು ನಿಂತ ಆನೆ ಯಾರಿಗೂ ತೊಂದರೆ ನೀಡದೆ ಕಾಡಿಗೆ ಎಂಟ್ರಿ ನೀಡಿದೆ.
ಇದನ್ನು ದಾರಿಯಲ್ಲಿ ಹೋಗುವ ಪ್ರಯಾಣಿಕರು ವಿಡಿಯೋ ಮಾಡಿದ್ದು ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಎಂದು ಕಂಡು ಕೆಳರಿಯದ ಭೀಕರ ಸುಡು ಬಿಸಿಲಿನ ತಾಪಕ್ಕೆ ಬರಗಾಲಕ್ಕೆ ತುತ್ತಾಗಿರುವ ಹಳಿಯಾಳದಲ್ಲಿ ಕಾಡುಗಳಲ್ಲಿ ನೀರಿನ ಮೂಲ ಬತ್ತಿವೆ ಅಲ್ಲದೇ ಆಹಾರವು ದೊರಕದೆ ಕಾಡು ಪ್ರಾಣಿಗಳು ತತ್ತರಿಸುತ್ತಿವೆ.
ಇನ್ನೂ ಇತ್ತೀಚೆಗಷ್ಟೇ ಕಾಡಾನೆಯೊಂದು ಹಳಿಯಾಳ ಪಟ್ಟಣದಲ್ಲಿ ರಾಜಾರೋಷವಾಗಿ ಸುತ್ತಾಡಿತ್ತು.
ಬಳಿಕ ಅರಣ್ಯ, ಪೋಲಿಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಆನೆಯನ್ನು ಕಾಡಿಗೆ ಅಟ್ಟಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Leave a Comment