ಹಳಿಯಾಳ:- ತಾಲೂಕಿನ ಗ್ರಾಮೀಣ ಭಾಗದ ಯುವ ಕುಸ್ತಿಪಟು ವಿದ್ಯಾರ್ಥಿ 17 ವರ್ಷ ಒಳಗಿನ ಬಾಲಕರ ಜೂನಿಯರ್ ಕುಸ್ತಿ ವಿಭಾಗದಲ್ಲಿ ಹರಿಯಾಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೇಯಲ್ಲಿ ಪ್ರಥಮ ಸ್ಥಾನ ಗಳಿಸಿ ಕಜಕಿಸ್ಥಾನ ದೇಶದಲ್ಲಿ ನಡೆಯುವ 2019ರ ಜೂನಿಯರ್ ಏಶಿಯನ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗುವ ಮೂಲಕ ಹಳಿಯಾದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ಹಳಿಯಾಳ ತಾಲೂಕಿನ ಅರ್ಲವಾಡ ಗ್ರಾಮದ ರಹವಾಸಿಯಾಗಿರುವ ಉದಯೋನ್ಮುಖ ಕುಸ್ತಿ ಪಟು ಸೂರಜ ಸಂಜು ಅನ್ನಿಕೇರಿಯೇ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಯಾಗಿದ್ದಾನೆ. ಪೋಲಿಸ್ ಇಲಾಖೆಯಲ್ಲಿ ಪೋಲಿಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಸಂಜು ಅನ್ನಿಕೇರಿ ಮಗನಾಗಿರುವ ಸೂರಜ ಪಟ್ಟಣದ ವಿಡಿ ಹೆಗಡೆ ವಿದ್ಯಾಲಯದಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಸದ್ಯ ಬಳ್ಳಾರಿಯ ಜೆಎಸ್ಡಬ್ಲೂ ತೊರಂಗಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಸೂರಜನಿಗೆ ತರಬೇತಿದಾರರಾದ ಟಿ ಮಂಜಪ್ಪ, ಎಸ್ ಶ್ರೀನಿವಾಸ ಹಾಗೂ ಶಂಕರಪ್ಪ ತರಬೇತಿ ನೀಡುತ್ತಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ವಿಡಿ ಹೆಗಡೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಆಗಿರುವ ಮಾಜಿ ಎಮ್.ಎಲ್.ಸಿ ವಿಡಿ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಶಿಕ್ಷಕರು ಹಾಗೂ ಹಳಿಯಾಳ ಪೋಲಿಸ್ ಇಲಾಖೆಯವರು ಅಭಿನಂದನೆ ಸಲ್ಲಿಸಿದ್ದಾರೆ.
Leave a Comment