ಮುಂಡಗೋಡ:ಬೆಳೆ ಸರಿಯಾಗಿ ಬರದಿರುವುದರಿಂದ ಮನನೊಂದ ರೈತನೊಬ್ಬ, ಬ್ಯಾಂಕಿನ ಸಾಲ ತುಂಬುವ ಬಗ್ಗೆ ಚಿಂತಿಸುತ್ತ ಹೊಲದ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.
ತಾಲ್ಲೂಕಿನ ನ್ಯಾಸರ್ಗಿಯ ರಾಮಣ್ಣ ಚಲವಾದಿ(65) ಆತ್ಮಹತ್ಯೆ ಮಾಡಿಕೊಂಡ ರೈತ.
ಬಾಳೆ ಬೆಳೆಗೆ 1.60ಲಕ್ಷ ಬೆಳೆ ಸಾಲ ಪಡೆದಿದ್ದು, ಫಸಲು ಸರಿಯಾಗಿ ಬರದೆ ಹಾನಿಯಾಗಿದೆ. ಬ್ಯಾಂಕಿನ ಸಾಲ ತುಂಬುವುದನ್ನೇ ಮನಸ್ಸಿಗೆ ಹಚ್ಚಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment