ಹಳಿಯಾಳ:- ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ, ಯುವಕರು ವ್ಯವಸಾಯದಲ್ಲಿ ನಿರಾಸಕ್ತಿ ತೊರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಕರು ಕೃಷಿ-ವ್ಯವಸಾಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಈ ಕ್ಷೇತ್ರಕ್ಕೆ ಹೆಚ್ಚಿನ ಗೌರವವು ಸಿಗಬೇಕಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಟ್ಟರು.
ಕಂದಾಯ, ಕೃಷಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಮಿನಿವಿಧಾನಸೌಧದ ಸಭಾ ಭವನದಲ್ಲಿ ನಡೆದ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ, ಕೃಷಿ ಯಂತ್ರೋಪಕರಣಗಳ ವಿತರಣೆ, ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನಗಳ ಜೀರ್ಣೋಧ್ದಾರಕ್ಕಾಗಿ 2018-19ನೇ ಸಾಲಿಗೆ ಮಂಜೂರಾದ 10 ದೇವಸ್ಥಾನಗಳಿಗೆ ಚೆಕ್ ವಿತರಣೆ ಮತ್ತು ತರಬೇತಿ ಪಡೆದು ಉತ್ತೀರ್ಣರಾದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಸಮಾರಂಭವನ್ನು ಉಧ್ಘಾಟಿಸಿ ಸಚಿವರು ಮಾತನಾಡಿದರು.
18 ವರ್ಷದಲ್ಲಿ 4 ವರ್ಷ ಮಾತ್ರ ಮಳೆಗಾಲವಿದ್ದರೇ 14 ವರ್ಷ ಬರಗಾಲವನ್ನು ಅನುಭವಿಸಲಾಗಿದೆ. ಸದ್ಯ ಬರಗಾಲ, ಅತಿವೃಷ್ಠಿಯ ಪರಿಣಾಮ ದೇಶದ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತಿದೆ. ಗ್ರಾಮಗಳನ್ನು ಬಿಟ್ಟು ನಗರಗಳತ್ತ ಮುಖ ಮಾಡಿರುವ ಯುವ ಜನಾಂಗವನ್ನು ಮತ್ತೇ ಕೃಷಿಯತ್ತ ಆಕರ್ಷಿಸಲು ನೂತನ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರತವಾಗಿದೆ ಎಂದರು.
ಸಂಪ್ರದಾಯಿಕ ಕೃಷಿಯ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅತ್ಯಂತ ಕಡಿಮೇ ಸಮಯ ಹಾಗೂ ಶ್ರಮದಲ್ಲಿ ಹೆಚ್ಚು ಇಳುವರಿಗಳನ್ನು ಪಡೆದು ರೈತರು ಆರ್ಥಿಕವಾಗಿ ಸದೃಢರಾಗಲು ಕೃಷಿಯನ್ನು ಇನ್ನಷ್ಟು ಲಾಭದಾಯಕವನ್ನಾಗಿ ಮಾಡಲು ಸರ್ಕಾರವು ಚಿಂತನೆ ನಡೆಸಿದೆ ಎಂದ ದೇಶಪಾಂಡೆ ಕೃಷಿ ಭೂಮಿಗಳು ಇತ್ತೀಚಿನ ದಿನಗಳಲ್ಲಿ ಕಾಣೆಯಾಗುವುದರ ಮೂಲಕ ನಿವೇಶನಗಳಾಗಿ ಮಾರ್ಪಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಗ್ರೀನ್ ಬೆಲ್ಟ್ ಅಡಿಯಲ್ಲಿ ಬರುವ ಜಮೀನುಗಳು ಸಹ ಬಡಾವಣೆಗಳಾಗಿ ಮಾರಾಟವಾಗುತ್ತಿವೆ.
ರೈತರಿಗೆ ಕೃಷಿ ಹೊಂಡಗಳ ನಿರ್ಮಾಣ ಮತ್ತು ಕೆರೆಗಳನ್ನು ಹೊಳೆತ್ತೆವುದರ ಮೂಲಕ ಅಂತÀರ್ಜಲದ ಪ್ರಮಾಣ ಹೆಚ್ಚಳಕ್ಕೆ ಸಹಾಯಧನ ನೀಡಲಾಗುತ್ತಿದೆ. ಮಾನವನು ದಿನಗಳು ಕಳೆದಂತೆ ಸ್ವಾರ್ಥಿಯಾಗಿದ್ದರಿಂದ ಪರಿಸರವು ಸಹ ತನ್ನ ಸಮತೋಲನ ಕಳೆದುಕೊಂಡ ಪರಿಣಾಮ ನೇರವಾಗಿ ಕೃಷಿ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಹಸ್ತ ಪ್ರತಿಯನ್ನು ಸಹ ಅನಾವರಣಗೊಳಿಸಲಾಯಿತು.ಅಲ್ಲದೇ ಅರ್ಹ ರೈತರಿಗೆ ಸಹಾಯಧನದ ರೂಪದಲ್ಲಿ ಕಲ್ಟಿವೇಟರ್ ಹಾಗೂ ರೋಟೆವೇಟರ್ಗಳನ್ನು ಹಸ್ತಾಂತರಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ತರಬೇತಿ ಪಡೆದ 12 ಮಹಿಳೆಯರಿಗೆ ಹೂಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನಗಳ ಜೀಣೋದ್ದಾರಕ್ಕೆ 2018-19 ಸಾಲಿಗೆ ಮಂಜೂರಾದ 10 ಚೆಕ್ಗಳನ್ನು ದೇವಸ್ಥಾನದ ಟ್ರಸ್ಟ್ ಕಮಿಟಿಗಳಿಗೆ ಹಸ್ತಾಂತರಿಸಲಾಯಿತು.
ವೇದಿಕೆ ಮೇಲೆ ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೋರ್ವೆಕರ, ಮಹೇಶ್ರೀ ಮಿಶ್ಯಾಳಿ, ತಹಶೀಲದಾರ ವಿದ್ಯಾಧರ ಗುಳಗುಳಿ,ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಅಕ್ರಮ ಸಕ್ರಮ ಸಮಿತಿಯ ಸುಭಾಸ ಕೋರ್ವೆಕರ, ತಾಪಂ ಸದಸ್ಯ ದೇಮಾಣಿ ಶಿರೋಜಿ, ಬಾಳು ಪಾಟೀಲ್, ಪುರಸಭೆ ಸದಸ್ಯರಾದ ಶಂಕರ ಬೆಳಗಾಂವಕರ, ಸಮೀನಾಬಾನು, ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ಇದ್ದರು.
Leave a Comment