ಹಳಿಯಾಳ :- 2019 ನೇ ಸಾಲಿನ “ಸಮಗ್ರ ಕೃಷಿ ಅಭಿಯಾನ – ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು.
ಇಂದಿನಿಂದ ಪ್ರಾರಂಭವಾಗಿ ಜುಲೈ 3ರ ವರೆಗೆ ನಡೆಯಲಿರುವ ಈ ಅಭಿಯಾನವು ತಾಲೂಕಿನ 4 ದಾಂಡೇಲಿ, ಹಳಿಯಾಳ, ಸಾಂಬ್ರಾಣಿ ಮತ್ತು ಮುರ್ಕವಾಡ ಹೋಬಳಿಗಳಲ್ಲಿ ಪ್ರತಿ ಹೋಬಳಿಯಲ್ಲಿ 3 ದಿನಗಳ ಕಾಲ ಅಂದರೇ ಒಟ್ಟೂ 12 ದಿನಗಳ ಕಾಲ ತಾಲೂಕಿನಲ್ಲಿ ಸಂಚರಿಸಲಿದೆ.
Leave a Comment