ಹೊನ್ನಾವರ:ಗುತ್ತಿಗೆದಾರ ಶ್ರೀಕಾಂತ ಆರ್.ಹೆಗಡೇಕರ ಲಯನ್ಸ್ ಕ್ಲಬ್ ಆಪ್ ಹೊನ್ನಾವರ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
2019-20ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನಿವೃತ್ತ ಪ್ರಾಚಾರ್ಯ ಡಾ.ಎ.ವಿ.ಶಾನಭಾಗ ಕಾರ್ಯದರ್ಶಿಯಾಗಿ ಹಾಗೂ ಉದ್ಯಮಿ ಸಂತೋಷ ವಿ.ನಾಯ್ಕ ಖಜಾಂಚಿಯಾಗಿ ಆಯ್ಕೆಯಾದರು.
ಪದಗ್ರಹಣ ಸಮಾರಂಭ 3ರಂದು-ಲಯನ್ಸ್ ಕ್ಲಬ್ ಆಪ್ ಹೊನ್ನಾವರ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಫಾರೆಸ್ಟ್ ಕಾಲನಿಯಲ್ಲಿರುವ ಲಯನ್ಸ್ ಸಭಾಭವನದಲ್ಲಿ ಜುಲೈ 3ರಂದು ಸಂಜೆ 6-30ಕ್ಕೆ ನಡೆಯಲಿದೆ.
ಲಯನ್ ಎಂಜೆಎಫ್ ಎಂ.ಕೆ.ಭಟ್ ಪದಗ್ರಹಣ ನೆರವೇರಿಸಲಿದ್ದು ಪ್ರಾಧ್ಯಾಪಕ ಡಾ.ಎಂ.ಆರ್.ನಾಯ್ಕ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದು ಲಯನ್ಸ್ ಕ್ಲಬ್ನ ಹಾಲಿ ಅಧ್ಯಕ್ಷ ರಾಜೇಶ ಸಾಳೆಹಿತ್ತಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Leave a Comment