ಜೋಯಿಡಾ :- ಜೋಯಿಡಾದ ಕುಳಗಿ ವನ್ಯಜೀವಿ ವಲಯದ ಕೇಗದಾಳ ಶಾಖೆಯ ವಿಚೋಳಿ ಬಳಿ ಗಂಡು ಕಾಡಾನೆಗಳ ದಾಳಿಯಿಂದ ತೀವೃವಾಗಿ ಗಾಯಗೊಂಡ ಕಾಡು ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಾವನ್ನಪ್ಪಿದ ಆನೆಯ ಮರಣೋತ್ತರ ಪರೀಕ್ಷೆಯನ್ನು ಪಶು ವೈಧ್ಯಾಧಿಕಾರಿ ಡಾ. ಕೆ,ಎಮ್, ನಧಾಪ್ ನಡೆಸಿದರು.
ಸ್ಥಳದಲ್ಲಿ ಕುಳಗಿ ಎ,ಸಿ,ಎಪ್, ಗೊರವರ್, ಕುಳಗಿ ವಲಯ ಅರಣ್ಯಾಧಿಕಾರಿ ಸಂತೋಷ ಚಹ್ಹಾಣ ಹಾಗೂ ಪಣಸೋಲಿ ವಲಯ ಅರಣ್ಯಾಧಿಕಾರಿ ಕೆ,ರಾಥೋಡ್, ಗುಂದ ವಲಯ ಅರಣ್ಯಾಧಿಕಾರಿ ಗಿರೀಶ ಚೌಗಲೆ ಇದ್ದು ಆನೆಯ ಅಂತ್ಯ ಸಂಸ್ಕಾರ ನೆರವೆರಿಸಿದರು.
Leave a Comment