
ಹಳಿಯಾಳ :- ಗುಟ್ಕಾ, ತಂಬಾಕು ಮಾರಾಟ ಮಾಡುವ ಹಾಗೂ ಪ್ಲಾಸ್ಟಿಕ್ ಬಳಕೆ-ಮಾರಾಟ ಮಾಡುವವರ ವಿರುದ್ದ ಪುರಸಭೆಯವರು ಹಾಗೂ ವಿವಿಧ ಇಲಾಖೆಗಳ ತಂಡ ಜಂಟಿ ಆಶ್ರಯದಲ್ಲಿ ದಾಳಿ 21 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 9 ಸಾವಿರಕ್ಕೂ ಅಧಿಕ ದಂಡ ವಿಧಿಸಿದೆ.
ಪ್ಲಾಸ್ಟಿಕ್ ಮುಕ್ತ ಹಳಿಯಾಳ ಮಾಡಲು ಪುರಸಭೆಯವರು ನಿರ್ಧರಿಸಿರುವ ಕಾರಣ ಪುರಸಭೆಯ ಅಧಿಕಾರಿಗಳು, ತಹಶೀಲ್ದಾರ್ರು ಹಾಗೂ ಆರೋಗ್ಯ, ಇಲಾಖೆ, ಸಿಡಿಪಿಓ ಇಲಾಖೆಯವರು ಮೇಲಿಂದ ಮೇಲೆ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಅಂಗಡಿಕಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ನಿರಂತರ ದಾಳಿ ನಡೆಸಲಾಗುತ್ತಿದ್ದು ಡೆಂಗ್ಯೂ ಜಾಥಾ ಬಳಿಕ ಪಟ್ಟಣದ ಪೋಸ್ಟ್ ಆಪೀಸ್ ರಸ್ತೆ, ಗಣಪತಿ ಗಲ್ಲಿ, ಫೀಶ್ ಸರ್ಕಲ್, ಬಜಾರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಿಂಚಿನ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ಗಳನ್ನು ದಾಸ್ತಾನು ಮಾಡಿದ ಹಾಗೂ ಮಾರಾಟ ಮಾಡುತ್ತಿದ್ದ ಅಂಗಡಿ ಮುಗ್ಗಟ್ಟುಗಳಲ್ಲಿಯ 19 ಕೆಜಿ ಪ್ಲಾಸ್ಟಿಕ್ಗಳನ್ನು ವಶಕ್ಕೆ ಪಡೆದು 3200 ರೂ ದಂಡ ವಿಧಿಸಲಾಯಿತು. ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳಿಂದ 1.5 ಕೆಜಿ ತಂಬಾಕು ವಶಕ್ಕೆ ಪಡೆದು ಸರ್ಕಾರದ ನಿಯಮಗಳನ್ನು ಮೀರಿ ಗುಟಕಾಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡವು 4.300 ರೂಗಳನ್ನು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಭಾನುವಾರ ಸಂತೆಯ ದಿನ ಕೂಡ ಕಾರ್ಯಾಚರಣೆ ನಡೆಸಿರುವ ಹಳಿಯಾಳ ಪುರಸಭೆಯವರು 2 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 2750 ರೂ. ದಂಡ ವಿಧಿಸಿದ್ದಾರೆ.
ಈ ಸಂದರ್ಭದಲ್ಲಿ ತಾ.ಪಂ ಇಒ ಡಾ.ಮಹೇಶ ಕುರಿಯವರ, ತಹಸೀಲ್ದಾರ ವಿದ್ಯಾಧರ ಗುಳಗುಳೆ, ತಾಲೂಕ ವೈದ್ಯಾಧಿಕಾರಿ ಡಾ.ಮಹೇಶ ಕದಂ, ಮುಖ್ಯಾಧಿಕಾರಿ ಕೇಶವ ಚೌಗುಲೆ, ಪರಿಸರ ಅಭಿಯಂತರರಾದ ಬಿ.ಎಸ್.ದರ್ಶಿತಾ, ಇಂಜಿನಿಯರ್ ಹರಿಶಗೌಡ, ಅಶೋಕ ಸಾಳೆನ್ನವರ, ಸಿ.ಡಿ.ಪಿ.ಒ ಅಂಬಿಕಾ ಕಟಕೆ, ರಾಜೇಶ್ವರಿ ಗವಿಮಠ, ಪೋಲಿಸ್ ಇಲಾಖೆ ಎಎಸ್ಐ ಸುರೇಶ ಮುಳೆ, ಆರೋಗ್ಯ ಇಲಾಖೆಯ ಪ್ರಕಾಶ ಮಾನೆ ಇತರರು ಇದ್ದರು.
Leave a Comment