ಜೋಯಿಡಾ –
ತಾಲೂಕಿನ ದಂಡಾಧಿಕಾರಿಗಳಿಗೆ ಕರ್ತವ್ಯದಲ್ಲಿ ಓಡಾಡಲು ವಾಹನವಿಲ್ಲದೇ ತುಂಬಾ ತೊಂದರೆಯಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ( ಸರ್ಕಾರ) ವಾಹನ ವ್ಯವಸ್ಥೆ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ,
ಜೋಯಿಡಾ ತಾಲೂಕಾ ದಂಡಾಧಿಕಾರಿಯವರ ವಾಹನ ಕಳೆದ 1 ವರ್ಷದಿಂದ ನಿಂತಲ್ಲಿಂದ ಅಲುಗಾಡದಂತಾಗಿದ್ದು, ಈ ವಾಹನಕ್ಕೆ ಕಳೆದ ಹಲವಾರು ವರ್ಷಗಳಿಂದ ರಿಪೇರಿ ಮಾಡಿ ಓಡಿಸುವುದೇ ಸಾಹಸ ಕೆಲಸವಾಗಿದೆ, ಹಲವಾರು ಬಾರಿ ಕಾರ್ಯನಿಮಿತ್ತ ತಹಶೀಲ್ದಾರರು ಹಳ್ಳಿಗಳಿಗೆ ಹೋದಾಗ ಈ ವಾಹನ ಕೈಕೊಟ್ಟು ಕೊಟ್ಟು ಬೇರೆ ವಾಹನಗಳಲ್ಲಿ ತಹಶೀಲ್ದಾರರುಗಳು ಕಚೇರಿ ತಲುಪಿದ ಘಟನೆ ಕುಡಾ ನಡೆದಿದ್ದಿದೆ, ಹೀಗಾಗಿ ಈ ವಾಹನದ ರಿಪೇರಿ ಕೂಡಾ ಮಾಡಿಸಲಾಗದೇ ಜೀಪ್ ಮೂಲೆ ಗುಂಪಾಗಿದೆ.
ಜೋಯಿಡಾ ತಾಲೂಕು ಅತ್ಯಂತ ವಿಸ್ತಿರ್ಣ ಹೊಂದಿದ್ದು ಅಲ್ಲಲ್ಲಿ ಏನೇ ಘಟನೆಗಳು ನಡೆದರೂ ದಂಡಾಧಿಕಾರಿಗಳು ಹೋಗಲೇ ಬೇಕು, ಸಚಿವರ ಸಭೆ,ಜಿಲ್ಲಾಸಭೆ, ಅಧಿಕಾರಿಗಳ ಸಭೆ ಹೀಗೆ ಎಲ್ಲಿಯೇ ಹೋಗಬೇಕಾದರೂ ವಾಹನವಿಲ್ಲದೇ ಪರದಾಡುತ್ತಿದ್ದಾರೆ,
ಈ ವಾಹನದ ಬದಲಿಗೆ ಬೇರೆ ವಾಹನ ಖರೀದಿಗಾಗಿ ಜಿಲ್ಲಾಕಾರಿಯವರಿಗೆ ಅನುಮತಿಗಾಗಿ ಪತ್ರ ಕಳಿಸಿದ್ದಾರೆ, ಜಿಲ್ಲಾಧಿಕಾರಿಯವರೂ ಕೂಡಾ ಸರ್ಕಾರಕ್ಕೆ ಪತ್ರ ಕಳಿಸಿರುತ್ತಾರೆ, ಆದರೆ ಯಾವುದೇ ಉತ್ತರ ಇನ್ನೂ ಬಂದಿಲ್ಲವಂತೆ.
ತಮ್ಮ ವಾಹನ –
ಮಳೆಗಾಲದ ಸಮಸ್ಯೆ ಇನ್ನೀತರ ಸಮಸ್ಯೆಗಳನ್ನು ಎದುರಿಸಲು ತೊಮದರೆಯಾಗಬಾರದೆಂದು ಈಗಿನ ತಹಶೀಲ್ದಾರ ಆದ ಸಂಜಯ ಕಾಂಬಳೆ ತಮ್ಮ ಸ್ವಂತ ವಾಹನದಲ್ಲಿಯೇ ಕಳೆದ ಕೆಲವು ತಿಂಗಳುಗಳಿಂದ ಓಡಾಡುತ್ತಿದ್ದಾರೆ, ಕೆಲವು ಗ್ರಾ,ಪಂ,ಗಳಿಗೆ ಅವರ ವಾಹನ ಕೂಡಾ ಹೋಗದೆ ಕಷ್ಟವಾಗಿದೆ, ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ತಾಲೂಕಿನ ದಂಡಾಧಿಕಾರಿ ಕಾರ್ಯಾಲಯಕ್ಕೆ ಹೊಸ ವಾಹನ ವ್ಯವಸ್ಥೆ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂಜಯ ಕಾಂಬಳೆ – ಜೋಯಿಡಾ ತಹಶೀಲ್ದಾರ
ಕಚೇರಿ ವಾಹನ ಕೆಟ್ಟು ರಿಪೇರಿಯಾಗದ ಪರಿಸ್ಥಿತಿಯಲ್ಲಿದೆ, ಹಾಗಾಗಿ ಓಡಾಟಕ್ಕೆ ತೊಂದರೆಯಾಗಿದೆ,ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಉತ್ತರಕ್ಕಾಗಿ ಕಾಯುತ್ತಿದ್ದೇನೆ.
Leave a Comment