
ಹಳಿಯಾಳ :- ಕಳೆದ 22 ವರ್ಷಗಳಿಂದ ಪತ್ರಿಕೋಧ್ಯಮದಲ್ಲಿ ಕಾರ್ಯಸಲ್ಲಿಸುತ್ತಿರುವ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಹಳಿಯಾಳದ “ವಿಜಯ ಸಂದೇಶ” ವಾರಪತ್ರಿಕೆಯ ಸಂಪಾದಕಿ ಸುಮಂಗಲಾ ಚಂದ್ರಕಾಂತ ಅಂಗಡಿ ಅವರನ್ನು ಹುಬ್ಬಳ್ಳಿಯಲ್ಲಿ “ಸುಮಂಗಲಾ ಬುರ್ಲಬಡ್ಡಿ ಸ್ಮಾರಕ ಪ್ರಶಸ್ತಿ” ಪ್ರಧಾನ ಮಾಡಿ ಗೌರವಿಸಲಾಗಿದೆ.
ಹುಬ್ಬಳ್ಳಿಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಬುರ್ಲಬಡ್ಡಿ ಫೌಂಡೇಶನ್ ಆಯೋಜಿಸಿದ್ದ ಸುಮಂಗಲಾ ಬುರ್ಲಬಡ್ಡಿ ಸ್ಮಾರಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಳಿಯಾಳದ ಸುಮಂಗಲಾ ಅವರಿಗೆ ಅವರು ಸಲ್ಲಿಸಿದ ಸಮಾಜ ಸೇವೆ ಹಾಗೂ ಕಳೆದ 18 ವರ್ಷಗಳಿಂದ ತಮ್ಮ ಸ್ವಂತ ಹಣದಲ್ಲಿ ಸಾವಿರಾರು ಓದುಗರಿಗೆ ಉಚಿತವಾಗಿ ಪತ್ರಿಕೆ ತಲುಪಿಸುತ್ತಿರುವ ಅವರ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಖ್ಯಾತ ಸಾಹಿತಿ ರಂಜಾನ ದರ್ಗಾ, ಫೌಂಡೇಶನನ ಅಧ್ಯಕ್ಷೇ ಅಶ್ವಿನಿ ಬುರ್ಲಬಡ್ಡಿ ಮೊದಲಾದವರು ವೇದಿಕೆಯಲ್ಲಿದ್ದರು.


Leave a Comment