• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಂಸ್ಕøತ ಪುನಶ್ಚೇತನ ಶಿಬಿರ ಆತ್ಮ ಶಿಕ್ಷಣ ನೀಡುವ ಸಂಸ್ಕøತ ಭಾಷೆಯಿಂದ ಸುಸಂಸ್ಕøತ ಸಮಾಜ

July 25, 2019 by Gaju Gokarna Leave a Comment

Sanskrit

ಹೊನ್ನಾವರ , ವೃತ್ತಿಗಳಲ್ಲಿ ಶ್ರೇಷ್ಠವಾದ ವೃತ್ತಿ ಶಿಕ್ಷಕ ವೃತ್ತಿ. ಉತ್ತಮ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದ ಸಾಧ್ಯ. ಸಂಸ್ಕøತ ಶಿಕ್ಷಕರಿಂದ ಸಂಸ್ಕಾರಯುಕ್ತ ಸಮಾಜನಿರ್ಮಾಣ ಸಾಧ್ಯ. ಸಂಸ್ಕøತ ಶಿಕ್ಷಕರು ವಿಶ್ವಮಾನ್ಯರಾಗಿ ಜಗತ್ತನ್ನು ಬೆಳಗಬೇಕು ಎಂದು ಪ.ಪೂ. ಮಾರುತಿ ಗುರೂಜಿಯವರು ನುಡಿದರು. ಅವರು ಬಂಗಾರಮಕ್ಕಿಯಲ್ಲಿ ಸಂಸ್ಕøತ ವಿಶ್ವವಿದ್ಯಾಲಯ, ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ ಹಾಗೂ ಸಂಸ್ಕøತ ಭಾರತೀ ಸಹಯೋಗದಿಂದ ಆಯೋಜಿಸಲ್ಪಟ್ಟ ಸಂಸ್ಕøತ ಶಿಕ್ಷಕರ ಪುನಃಶ್ಚೇತನ ಶಿಬಿರದಲ್ಲಿ ಸಾನ್ನಿಧ್ಯ ವಹಿಸಿ ಅನುಗ್ರಹಿಸಿದರು.
ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜಾತಿ-ಮತ-ಪಂಥ ತೊರೆದು ಸಂಸ್ಕøತಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ದೇಶಾಭಿಮಾನ, ಭಾಷಾಭಿಮಾನದಿಂದ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕು ಎಂದು, ಸರ್ವರ ಹಿತ ಮಾನವನ ಮೊದಲ ಮತ ಆಗಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ Àನಂತರ ವಿಶ್ರಾಂತ ಕುಲಪತಿ ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಪುನಃಶ್ಚೇತನ ಶಿಬಿರದಿಂದ ಶಿಕ್ಷಕರ ಪರಸ್ಪರ ಚಿಂತನೆ, ಚರ್ಚೆ ಮೂಲಕ ಹೊಸ ವಿಚಾರತರಂಗಗಳು ಮೂಡಿ ಬರುತ್ತವೆ, ತನ್ಮೂಲಕ ಶಿಕ್ಷಕರ ನವೋತ್ಸಾಹ ವರ್ಧನೆಗೆ ಈ ಚಿಂತನೆ ಪರಿಣಾಮಕಾರಿಯಾಗುತ್ತದೆ ಎಂದರು. ವಿಶ್ವವಿದ್ಯಾಲಯದ ಈ ಕ್ರಮ ಆಂತರಂಗಿಕ ಬೆಳವಣಿಗೆಗೆ ಮಹತ್ವದ ಮೈಲಿಗಲ್ಲು ಎಂದರು.
ಸಂಸ್ಕøತ ನಿರ್ದೇಶನಾಲಯದ ನಿರ್ದೇಶಕರಾದ ಡಾ|| ಪ್ರಕಾಶ ಪಾಗೋಜಿ ಮಾತನಾಡಿ ವಿಶ್ವವಿದ್ಯಾಲಯದ ಪ್ರಗತಿಯ ಹೆಜ್ಜೆಗಳನ್ನು ವಿವರಿಸುತ್ತಾ, ಪಾಠಶಾಲಾ ಶಿಕ್ಷಕರ ಪೂರ್ವ ವ್ಯವಸ್ಥೆ, ಈಗಿನ ಬದಲಾವಣೆ, ಸರ್ವರೂ ತಮ್ಮ ಕರ್ತವ್ಯಪಾಲನೆಯಲ್ಲಿ ಚ್ಯುತಿ ಬರದ ರೀತಿಯಲ್ಲಿ ಸಂಸ್ಕøತ ಅಭಿವೃದ್ಧಿಗೆ ಶ್ರಮವಹಿ¸ ಬೇಕೆಂದ್ಟುರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಡಾ|| ಗಿರೀಶ್ಚಂದ್ರ ಮಾತನಾಡಿ, ಪವಿತ್ರವಾದ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಸ್ಕಾರ-ಸಂಸ್ಕøತಿ ಉಳಿಸಿ ಬೆಳೆಸುವ ಕಾರ್ಯ ಸಂಸ್ಕøತ ಶಿಕ್ಷಕರದ್ದು. ನಿರಂತರ ಚಿಂತನೆ, ಅಧ್ಯಯನ, ಅಧ್ಯಾಪನ, ಸಂಸ್ಕøತ ವಾತಾವರಣ ನಿರ್ಮಾಣ ಇವೆಲ್ಲವೂ ಭಕ್ತಿ-ಶ್ರದ್ಧೆಯಿಂದ ಕಾರ್ಯನಿರ್ವಹಿಸುವ ಮೂಲಕ ಸಾಧ್ಯ ಎಂದು ನುಡಿದರು. ಸಂಸ್ಕøತ ಭಾಷೆಯ ಮೂಲಕ ಆತ್ಮಗೌರವ ಹೇಗೆ ವೃದ್ಧಿಸುತ್ತದೆ ಎಂದು ಉದಾಹರಣೆ ಮೂಲಕ ವಿವರಿಸಿದರು.
] ಕರ್ನಾಟಕ ಉತ್ತರ ಪ್ರಾಂತಾಧ್ಯಕ್ಷ ವಿದ್ವಾನ್ ವಿ. ಜಿ. ಹೆಗಡೆ ಗುಡ್ಗೆ, ಮಾತನಾಡಿ ಈ ಸಂಸ್ಕøತ ಪುನಃಶ್ಚೇತನ ಶಿಬಿರ ಜ್ಞಾನದ ಪ್ರತೀಕ. ಜ್ಞಾನಯಜ್ಞದಲ್ಲಿ ಪಾಲ್ಗೊಂಡು ಸಂಸ್ಕøತ ವಾತಾವರಣ ನಿರ್ಮಾಣ ಮಾಡುವ ಮೂಲಕ ಜ್ಞಾನಗಂಗೆ ಸರ್ವತ್ರ ಹರಿಯಲಿ ಎಂದು ನುಡಿದು,
ಮಾರ್ಮಿಕವಾಗಿ ಎಲ್ಲರನ್ನೂ ಸ್ವಾಗತಿಸಿದರು. ಮಹಾಂತೇಶ ಗದಗ ಪ್ರಾರ್ಥನಾಗೀತೆ ಹಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ರಾಜಶೇಖರ ಕಾರ್ಯಕ್ರಮ ನಿರ್ವಹಿಸಿದರು. ಗಂಗಾಧರಯ್ಯ ವಂದನಾರ್ಪಣೆಗೈದರು.
ಈ ಸಂಸ್ಕøತ ವರ್ಗದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ 160 ಜನ ಪಾಠಶಾಲಾ ಶಿಕ್ಷಕರು ಭಾಗವಹಿಸಿದ್ದರು. ಸಂಸ್ಕøತ ಭಾರತಿಯ ಅಖಿಲ ಭಾರತೀಯ ಪ್ರಮುಖರು ಪ್ರಶಿಕ್ಷಕರಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಬಂಗಾರಮಕ್ಕಿಯ ವೇದಪಾಠಶಾಲಾ ವಿದ್ಯಾರ್ಥಿಗಳು ವೇದಘೋಷ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಡಾ|| ಭಾರತಿ ಹೆಗಡೆ ಗುಡ್ಗೆ-ಹಾರೂರಿ, ಧಾರವಾಡ ಇವರು ರಚಿಸಿದ ಉಪನಿಷತ್ ಕಥಾಸಾರ ಪುಸ್ತಕದ ಲೋಕಾರ್ಪಣ ಕಾರ್ಯಕ್ರಮ ನಡೆಯಿತು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಆತ್ಮ ಶಿಕ್ಷಣ, ದತ್ತಿ ಸಂಸ್ಥೆ ಹಾಗೂ ಸಂಸ್ಕøತ ಭಾರತೀ ಸಹಯೋಗ, ನೀಡುವ, ವೀರಾಂಜನೇಯ ಶೈಕ್ಷಣಿಕ, ಸಂಸ್ಕøತ ಪುನಶ್ಚೇತನ ಶಿಬಿರ, ಸಂಸ್ಕøತ ಭಾಷೆಯಿಂದ, ಸುಸಂಸ್ಕøತ ಸಮಾಜ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...