• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೆಂಕಟ್ರಮಣ ಹೆಗಡೆಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ

August 11, 2019 by Gaju Gokarna Leave a Comment

SRL GROUP proprietor,srl,ವೆಂಕಟ್ರಮಣ ಹೆಗಡೆ ,ಪುಟ್ಟು ಹೆಗಡೆ,ಎಸ್.ಆರ್.ಎಲ್. venkatraman hegde

ಹೊನ್ನಾವರ : ಎಸ್.ಆರ್.ಎಲ್. ಸಾರಿಗೆ ಸಮೂಹ ಸಂಸ್ಥೆಗಳ ಸ್ಥಾಪಕ ವೆಂಕಟ್ರಮಣ ಹೆಗಡೆ (ಪುಟ್ಟು ಹೆಗಡೆ) ಇವರಿಗೆ ಸಾರಿಗೆ ಕ್ಷೇತ್ರದ ಸಾಧನೆಗಾಗಿ ಈ ಸಾಲಿನ ಕೆಂಗಲ್ ಹನುಮಂತಯ್ಯ ರಾಜ್ಯಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನವು ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರನ್ನು ಗುರುತಿಸಿ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಗಣ್ಯರ ಎದುರು ಸನ್ಮಾನಿಸುವ ಸಂಪ್ರದಾಯವನ್ನು ಬಹುಕಾಲದಿಂದ ನಡೆಸುತ್ತಾ ಬಂದಿದೆ. ದಿನಾಂಕ 18 ರವಿವಾರ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಮುಂಜಾನೆ 10-30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಎನ್. ಕುಮಾರ ಉದ್ಘಾಟಿಸುವರು. ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವರುದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಬಿಜಾಪುರದ ಹಿರಿಯ ಸಮಾಜ ಸೇವಕ ಆಂಜನೇಯ ಸುಬ್ರಾಯಪ್ಪ, ನಾಡೋಜ ಡಾ. ಮಹೇಶ ಜೋಶಿ, ಕೆಂಗಲ್ ಹನುಮಂತಯ್ಯನವರ ಮೊಮ್ಮಗ ಶ್ರೀಪಾದ ರೇಣು ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೂ ಮೊದಲು ಖ್ಯಾತ ಗಾಯಕ ಬಿ.ರಾಜು ಅವರ ಸಂಗೀತ ಸೌರಭವಿದೆ. ಸಾಹಿತಿ ನಾ. ಡಿಸೋಜಾ, ಕ್ಯಾನ್ಸರ್ ತಜ್ಞೆ ಡಾ. ಜಯಂತಿ ತುಮ್ಸಿ ಸಹಿತ ಹಲವರು ವೆಂಕಟ್ರಮಣ ಹೆಗಡೆಯವರೊಂದಿಗೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವೆಂಕಟ್ರಮಣ ಹೆಗಡೆ :
ಉತ್ತರ ಕನ್ನಡ ಜಿಲ್ಲೆಯವರದಾದ ಯಾವುದೇ ಸಾರಿಗೆ ಇಲ್ಲದ ಕಾರಣ ವ್ಯಾಪಾರಸ್ಥರಿಗೆ ಸಮರ್ಪಕ ಸಾಮಗ್ರಿ ಸಾಗಾಣಿಕೆ ಕಷ್ಟವಾಗುತ್ತಿತ್ತು. ಆ ಕಾಲದಲ್ಲಿ ಒಂದು ಟೆಂಪೊದಿಂದ ಸಾರಿಗೆ ಆರಂಭಿಸಿದ ವೆಂಕಟ್ರಮಣ ಹೆಗಡೆ ನಂತರ ಲಾರಿ ಸೇವೆ ಆರಂಭಿಸಿದರು. ಇತ್ತೀಚಿನ ದಶಕದಲ್ಲಿ ರಾಜಧಾನಿಗೆ ಜಿಲ್ಲೆಯ ಎಲ್ಲಾ ಕೇಂದ್ರಗಳಿಂದ ಬಸ್ ಸಾರಿಗೆ ಆರಂಭಿಸಿ, ತೃಪ್ತಿಕರ ಸೇವೆ ನೀಡುತ್ತಿದ್ದಾರೆ. 100ಕ್ಕೂ ಹೆಚ್ಚು ಲಾರಿ, ಬಸ್ ವಾಹನಗಳನ್ನು ಹೊಂದಿದ ಇವರು ಜಿಲ್ಲೆಯ 500ಕ್ಕೂ ಹೆಚ್ಚು ಜನಕ್ಕೆ ಉದ್ಯೋಗಕೊಟ್ಟಿದ್ದಾರೆ. ಶರಾವತಿ ಸಾಂಸ್ಕøತಿಕ ಸಂಘ, ಹವ್ಯಕ ವಿಕಾಸ ವೇದಿಕೆಯಂತಹ ಸಂಘಟನೆಗಳನ್ನು ಆರಂಭಿಸಿದ ಇವರು ಬಿಜೆಪಿಯ ಸಕ್ರೀಯ ಕಾರ್ಯಕರ್ತರು. ಬಿಡುವಿನಲ್ಲಿ ಸಮಾಜಕ್ಕೆ ಉಪಯುಕ್ತ ಸೇವೆ ನೀಡುತ್ತಿದ್ದು ನೆರೆಹಾವಳಿ ಪೀಡಿತರಿಗೆ ಉಚಿತ ಸಾಮಗ್ರಿ ಸಾಗಿಸುತ್ತಿರುವುದು ಇಂದಿನ ಉದಾಹರಣೆ. ಇಂದು ಬೆಂಗಳೂರಿನಿಂದ ಅಂಕೋಲಾ, ಕುಮಟಾ, ಶಿರ್ಸಿ, ಹೊನ್ನಾವರಗಳ ನಿರಾಶ್ರಿತರಿಗೆ ಬೆಂಗಳೂರಿನಿಂದ 100ಕ್ಕೂ ಹೆಚ್ಚು ಬಂಡಲ್‍ಗಳು ಬಂದು ಮುಟ್ಟಿವೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಆ ಕಾಲದಲ್ಲಿ, ಉಚ್ಛ ನ್ಯಾಯಾಲಯ, ಉತ್ತರ ಕನ್ನಡ ಜಿಲ್ಲೆಯವರದಾದ, ಎಸ್.ಆರ್.ಎಲ್. ಸಾರಿಗೆ, ಎಸ್.ಆರ್.ಎಲ್. ಸಾರಿಗೆ ಸಮೂಹ ಸಂಸ್ಥೆಗಳ ಸ್ಥಾಪಕ ವೆಂಕಟ್ರಮಣ ಹೆಗಡೆ, ಒಂದು, ಕೆಂಗಲ್ ಹನುಮಂತಯ್ಯನವರ ಮೊಮ್ಮಗ ಶ್ರೀಪಾದ ರೇಣು ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೂ ಮೊದಲು ಖ್ಯಾತ ಗಾಯಕ ಬಿ.ರಾಜು ಅವರ ಸಂಗೀತ ಸೌರಭವಿದೆ. ಸಾಹಿತಿ ನಾ. ಡಿಸೋಜಾ, ಕ್ಯಾನ್ಸರ್ ತಜ್ಞೆ ಡಾ. ಜಯಂತಿ, ಟೆಂಪೊದಿಂದ ಸಾರಿಗೆ ಆರಂಭಿಸಿದ ವೆಂಕಟ್ರಮಣ ಹೆಗಡೆ ನಂತರ ಲಾರಿ ಸೇವೆ, ನಾಡೋಜ ಡಾ. ಮಹೇಶ ಜೋಶಿ, ನ್ಯಾಯಮೂರ್ತಿಗಳಾದ ಎನ್. ಕುಮಾರ, ಪುಟ್ಟು ಹೆಗಡೆ, ಬಸ್ ವಾಹನ, ಬಿಜಾಪುರದ ಹಿರಿಯ ಸಮಾಜ ಸೇವಕ ಆಂಜನೇಯ ಸುಬ್ರಾಯಪ್ಪ, ಬೆಂಗಳೂರಿನ ಚಾಮರಾಜ ಪೇಟೆ, ಬೆಂಗಳೂರಿನ ಪ್ರತಿಷ್ಠಿತ ಸಮರ್ಥ ಸಾಹಿತ್ಯ, ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಲಾರಿ, ವಿಶ್ರಾಂತ, ವೆಂಕಟ್ರಮಣ ಹೆಗಡೆ, ವ್ಯಾಪಾರಸ್ಥರಿಗೆ ಸಮರ್ಪಕ ಸಾಮಗ್ರಿ, ಸಾಗಾಣಿಕೆ ಕಷ್ಟವಾಗುತ್ತಿತ್ತು, ಸಾರಿಗೆ ಇಲ್ಲದ ಕಾರಣ, ಸಾಂಸ್ಕøತಿಕ ಪ್ರತಿಷ್ಠಾನ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...