
ಹಳಿಯಾಳ :- ಭಾರಿ ಮಳೆಯಿಂದ ಹಳಿಯಾಳದ ಹಳ್ಳಗಳಲ್ಲಿ ಉಂಟಾದ ಪ್ರವಾಹದಲ್ಲಿ ಮಂಗಳವಾಡ-ತೇರಗಾಂವ ಗ್ರಾಮ ಮಧ್ಯದ ಬಾಂದಾರನ ಪಕ್ಕದ ಮಣ್ಣು ದೊಡ್ಡ ಪ್ರಮಾಣದಲ್ಲಿ ಕೊಚ್ಚಿಕೊಂಡು ಹೋಗಿ ಹಾನಿ ಸಂಭವಿಸಿದ್ದು ಮುಂದೆ ರೈತರಿಗೆ ನೀರಾವರಿಗೆ ನೀರಿನ ಸಮಸ್ಯೆ ಎದುರಾಗಲಿದೆ.
ದುಸಗಿ ಮಾರ್ಗವಾಗಿ ಬರುವ ಹಳ್ಳ ತೇರಗಾಂವ ಹಾಗೂ ಮಂಗಳವಾಡ ಮೂಲಕ ಹರಿದು ಹೋಗುತ್ತದೆ ಈ ಮಧ್ಯೆ ತೇರಗಾಂವ ಹಾಗೂ ಮಂಗಳವಾಡ ಮಧ್ಯದಲ್ಲಿ ರೈತ ಸಂಜೀವ ಕರಡಿ ಎನ್ನುವವರ ಹೊಲದ ಹತ್ತಿರ ಹಳ್ಳಕ್ಕೆ ಅಡ್ಡವಾಗಿ ನಿರ್ಮಿಸಲಾಗಿದ್ದ ಬಾಂದಾರನ ಎರಡೂ ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಇದರಿಂದ ಈ ನೀರು ಬಾಂದಾರನಲ್ಲಿ ನಿಲ್ಲದೇ ಹರಿದು ಹೋಗುತ್ತಿದೆ. ಮಳೆಗಾಲದ ಬಳಿಕ ನೀರು ಹಳ್ಳದಲ್ಲಿ ನಿಲ್ಲದೇ ಖಾಲಿಯಾಗಲಿದ್ದು, ಈ ಭಾಗದ ರೈತರಿಗೆ ನೀರಾವರಿಗೆ ನೀರಿನ ಸಮಸ್ಯೆ ತಲೆದೊರಲಿದೆ.
ಇದೇ ರೀತಿ ಅನೇಕ ಬಾಂದಾರು, ಸಣ್ಣ ಚೆಕ್ಡ್ಯಾಮಗಳಿಗೂ ಹಾನಿಯಾಗಿದೆ ಎಂದು ವರದಿ ಇದ್ದು ಸಂಬಂಧಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ತೇರಳಿ ಪರಿಶೀಲನೆ ಮಾಡಿ ದುರಸ್ಥಿ ಕಾರ್ಯ ಕೈಗೊಂಡು ನೀರನ್ನು ಹಿಡಿದಿಟ್ಟುಕೊಳ್ಳಲು ವ್ಯವಸ್ಥೆ ಮಾಡದೆ ಅಸಡ್ಡೆ ತೊರುತ್ತಿದ್ದಾರೆಂದು ರೈತರು ದೂರುತ್ತಿರುವುದು ಕಂಡು ಬರುತ್ತಿದೆ.
Leave a Comment