ಖಾನಾಪುರ: ಭಾರತ ದೇಶವನ್ನು ಬರುವ 2022ರ ಒಳಗಾಗಿ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಜಾತೀಯತೆಯಿಂದ ಮುಕ್ತಗೋಳಿಸೊಣ ಎಂದು ಶಾಲಾ ವಿಧ್ಯಾರ್ಥಿಗಳು ನವಭಾರತದ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಿ, ಜೋತೆಗೆ ನೆರೆಯಿಂದ ಸಂತ್ರಸ್ಥರಾದವರಿಗೆ ಸಹಾಯ ಮಾಡೋಣ ಎಂದು 73ನೇ ಸ್ವಾತಂತ್ರ್ಯದಿನದ ಸಂಭ್ರಮಾರಣೆಯನ್ನು ಮಾಡಿದರು.
ತಾಲೂಕಿನ ಗಡಿಗ್ರಾಮವಾದ ಲಿಂಗನಮಠ ಗ್ರಾಮದಲ್ಲಿ ವಿವಿಧೆಡೆ 71ನೇ ಸ್ವಾತಂತ್ರ್ಯದಿನದ ಧ್ವಜಾರೋಹಣವನ್ನು ನೆರೆವೆರುಸುವುದರ ಮೂಲಕ ಸಂಭ್ರಮನ್ನಾಚರಿಸಿದರು. ಪ್ರಾಥಮಿಕ ಕನ್ನಡ ಹಾಗೂ ಉರ್ದು ಶಾಲೆಯ ಮತ್ತು ಪ್ರೌಢ ಶಾಲೆಯ ಮಕ್ಕಳು ಭಾಷಣ, ದೇಶಭಕ್ತಿಗೀತೆಗಳನ್ನು ಹಾಡಿದರು.
ಲಿಂಗನಮಠ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ:
ಎಸ್.ಡಿ.ಡಮ್.ಸಿ ಅಧ್ಯಕ್ಷ ಪಾಂಡುರಂಗ ಮಿಟಗಾರ ಧ್ವಜಾರೋಹಣ ನೆರೆವೆರೆಸಿದರು. ಈ ಸಂಧರ್ಭದಲ್ಲಿ ಉರ್ದು ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯ ಶಾಮೀರ ಹಟ್ಟಿಹೋಳಿ, ತವನಪ್ಪಾ ರಪಾಟಿ, ಮಹಾಂತೇಶ ಸಂಗೋಳ್ಲಿ, ಬಸವರಾಜ ಮುಗಳಿಹಾಳ, ನಿವೃತ್ತ ಸೈನಿಕರಾದ ಆನಂದ ಮಾಟೋಳ್ಳಿ, ಶಿವಾನಂದ ಬಾಗೇವಾಡಿ, ಸುಭಾಷ ಖೋಡಿ, ಅಶ್ಪಾಕ ಹಟ್ಟಿಹೊಳಿ, ರಾಜು ರಪಾಟಿ, ಸುರೇಶ ಮುಗಳಿಹಾಳ, ರಮೆಶ ಮಾಟೋಳಿ, ಸುರೇಶ ಕರ್ಕಿ, ಸುರೇಖಾ ಮಿಟಗಾರ, ಗೀತಾ ತಿಗಡೊಳ್ಳಿ, ಸ್ಪೂರ್ತಿ ಪಾಟೀಲ, ಎಸ್.ಡಿ.ಎಮ್.ಸಿ ಸದಸ್ಯರು, ಕನ್ನಡ ಮತ್ತು ಉರ್ದು ಶಾಲೆಯ ಸಿಬ್ಬಂಧಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಲಿಂಗನಮಠ ಗ್ರಾಮ ಪಂಚಾಯತನಲ್ಲಿ:
ಅಧ್ಯಕ್ಷ ಡಾ-ಕೆ.ಬಿ.ಹಿರೇಮಠ ಧ್ವಜಾರೋಹಣ ನೆರೆವೆರೆಸಿದರು. ಗ್ರಾಪಂ ಸದಸ್ಯರಾದ ಮಾರುತಿ ಸತ್ಯನ್ನವರ, ಮುಸ್ತಫಾ ದಾದೂನವರ, ರೇಖಾ ಪಾರಿಶ್ವಾಡ, ಶಿವಶಂಕರ ಗೊಶೆನಟ್ಟಿ, ಪಾರ್ವತಿ ಮಾಟೋಳ್ಳಿ, ಶೋಭಾ ಕಮ್ಮಾರ, ಪಿಡಿಓ ಕಾವೇರಿ ಹಿಮಕರ, ಇನ್ನೂಳಿದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರಾದ ಅಶೋಕ ಮಾಟೋಳ್ಳಿ, ಮಹಾಂತೇಶ ಸಂಗೋಳ್ಲಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಲಿಂಗನಮಠ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ:
ಮುಖ್ಯಾಧ್ಯಾಪಕಿ ಶ್ರೀಮತಿ ಜೆ.ಎಲ್.ಭಂಡಾರಿ ಧ್ವಜಾರೋಹಣ ನೆರೆವೆರೆಸಿದರು. ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮದ ಮಕ್ಕಳು ಹಾಗೂ ಎಸ್.ಡಿ.ಎಮ್.ಸಿ ಸದಸ್ಯರಾದ ಬಸನಗೌಡ ಪಾಟೀಲ, ಗ್ರಾಮಸ್ಥರಾದ ದೆವೆಂದ್ರ ಕುಕಡೋಳ್ಳಿ, ಸಿಬ್ಬಂಧಿ ವರ್ಗ, ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಲಿಂಗನಮಠ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಶಾಖೆಯಲ್ಲಿ:
ಶಾಖಾಧಿಕಾರಿ ಶಿಲ್ಪಾ ಉಳ್ಳಾಗಟ್ಟಿಮಠ ಧ್ವಜಾರೋಹಣ ನೆರೆವೆರೆಸಿದರು. ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರಾದ ಬಸ್ಸಪ್ಪಾ ಮಿರಾಶಿ, ಗಫಾರಸಾಬ ಕಟ್ಟಿಮನಿ, ಬ್ಯಾಂಕ ಸಿಬ್ಬಂಧಿ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಲಿಂಗನಮಠ ಗ್ರಾಮದ ಪಿ.ಕೆ.ಪಿ.ಎಸ್ ಸಂಘದಲ್ಲಿ:
ಸಂಘದ ಅಧ್ಯಕ್ಷರಾದ ಶ್ರೀಶೈಲ ಮಾಟೋಳ್ಳಿ ಧ್ವಜಾರೋಹಣ ನೆರೆವೆರೆಸಿದರು. ಜೋತೆಗೆ ಪಿ.ಕೆ.ಪಿ.ಎಸ್ ವಿಠ್ಠಲ ಮಿಟಗಾರ, ಸದಸ್ಯರಾದ ಮುಗುಟಸಾಬ ಹಟ್ಟಿಹೊಳಿ, ರಮೇಶ ಕುನ್ನುರಕರ, ಯಲ್ಲಾರಿ ನಿಲಜಕರ, ಕಾರ್ಯದರ್ಶಿ ಶೋಭಾ ಬೆಳಗಾವಿ, ನಿಲಕಂಠ ಉಳವಿ, ಬಾಬು ಅಂಬಡಗಟ್ಟಿ, ಸಿಬ್ಬಂದಿ ವರ್ಗ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment