
ಜೋಯಿಡಾ –
ಜೋಯಿಡಾ ತಾಲೂಕಿನಲ್ಲಿ ಈ ವರ್ಷ ಆದ ಭಾರೀ ಮಳೆಯಿಂದಾಗಿ ತಾಲೂಕಿನ ಸ್ಥಿತಿ ಅಸ್ಥವ್ಯಸ್ಥವಾಗಿದೆ, ಗುಂದ ಅರಣ್ಯ ಇಲಾಕೆ ವ್ಯಾಪ್ತಿಗೆ ಸಂಭಂಧಪಡುವ ಜನರು ಕಾಡನ್ನು ವಿಕ್ಷಣೆ ಮಾಡಲೆಂದು ನಿರ್ಮಿಸಿದ ವಾಚ್ ಟಾವರ ಈಗ ಬಿರುಕು ಬಿಟ್ಟು ಅದರ ಮೇಲೆ ಹತ್ತುವುದನ್ನು ಅರಣ್ಯ ಇಲಾಖೆ ನಿಷೇದಿಸಿದೆ.
ಹತ್ತಾರು ವರ್ಷಗಳ ಹಿಂದೆ ಅರಣ್ಯ ಇಲಾಕೆ ವತಿಯಿಂದ ಪ್ರವಾಸಿಗರಿಗೆ ಹಚ್ಚ ಹಸಿರಾದ ಕಾಡನ್ನು ವಿಕ್ಷಣೆ ಮಾಡಲು ಈ ವಾಚ್ ಟವರ ಅನ್ನು ನಿರ್ಮಾಣ ಮಾಡಲಾಗಿತ್ತು, ಆದರೆ ಬಾರೀ ಗಾಳಿ ಮಳೆಯಿಂದಾಗಿ ವಾಚ್ ಟಾವರ ಬಿರುಕು ಬಿಟ್ಟಿದೆ, ಹೀಗಾಗಿ ಪ್ರವಾಸಿಗರು ಮೇಲೆ ಹತ್ತಬಾರದು ಎನ್ನುವ ಉದ್ದೇಶದಿಂದ ಅರಣ್ಯ ಇಲಾಕೆ ಈ ಕಾರ್ಯ ಮಾಡಿದೆ.
ಬೇಲಿ ನಿರ್ಮಿಸಿ ತಡೆ –
ಉಳವಿ ಒಂದು ಪ್ರಸಿದ್ದ ಪುಣ್ಯ ಕ್ಷೇತ್ರವಾದ್ದರಿಂದ ದಿನವೂ ಸಾವಿರಾರು ಭಕ್ತರು ಉಳವಿಯ ದೇವಸ್ಥಾನಕ್ಕೆ ಬರುತ್ತಾರೆ, ಉಳವಿಗೆ ಬರುವ ಅರ್ಧದಷ್ಟು ಪ್ರವಾಸಿಗರು ಇದೇ ರಸ್ತೆಯಲ್ಲಿ ಸಾಗಬೇಕಾದರೆ ಈ ವಾಚ್ ಟಾವರ್ ಸಿಗುತ್ತದೆ, ಹೀಗಾಗಿ ಪ್ರತಿಯೊಬ್ಬ ಪ್ರವಾಸಿಗರು ಇದರ ಮೇಲೆ ಹತ್ತಿ ಹಚ್ಚ ಹಸಿರ ಕಾಡಿನ ಸೌಂದರ್ಯ ಸವಿದೇ ಹೋಗುವುದಿಲ್ಲ, ಆದ್ದರಿಂದ ಬಂದ ಪ್ರವಾಸಿಗರು ಈ ಟವಾರ ಮೇಲೆ ಹತ್ತಿ ಟಾವರ ಕುಸಿದು ಬೀಳುವ ಮುನ್ನ ಅರಣ್ಯ ಇಲಾಕೆ ಎಚ್ಚೆತ್ತುಕೊಂಡು ಇದಕ್ಕೆ ತಾತ್ಕಾಲಿಕ ಬೇಲೆ ನಿರ್ಮಿಸಿ ಹತ್ತಬಾರದು ಎಂದು ಸೂಚನೆ ನೀಡಿದೆ. ಏನೇ ಆದರೂ ಪ್ರವಾಸಿಗರಿಗೆ ಮಾತ್ರ ಇದರಿಂದ ಬೇಸರ ಮೂಡಿದೆ ಎನ್ನಬಹುದು.
Leave a Comment