ಹಳಿಯಾಳ :- ಕ್ಷುಲ್ಲಕ ಕಾರಣಕ್ಕೆ ಮನನೊಂದು ಮೇಕ್ಯಾನಿಕಲ್ ವೃತ್ತಿ ಮಾಡುತ್ತಿದ್ದ ಪಟ್ಟಣದ ಯುವಕನೊರ್ವ ತಮ್ಮ ಮನೆಯ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ.
ಮಂಜುನಾಥ ಮಾರುತಿ ಸೊಲ್ಲಾಪುರಿ(27) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾನೆ. ಪಟ್ಟಣದ ಯಲ್ಲಾಪುರ ನಾಕಾದಲ್ಲಿರುವ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಇವನು ಕಳೆದ ಕೆಲವು ದಿನಗಳಿಂದ ಏನನ್ನು ತಿನ್ನಲು, ಊಟ ಮಾಡಲು ಸೇರುತ್ತಿಲ್ಲ ಅಲ್ಲದೇ ತಾನು ಸಪೂರ ಆಗುತ್ತಿದ್ದೆನೆಂದು ಮನಸ್ಸಿಗೆ ಹಚ್ಚಿಕೊಂಡಿದ್ದನೆಂದು ಇದೆ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಆತನ ತಾಯಿ ಶಶಿಕಲಾ ಸೊಲ್ಲಾಪುರಿ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾಳೆ. ಹಳಿಯಾಳ ಪೋಲಿಸರು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
Leave a Comment