ಜೋಯಿಡಾ –
ಜೋಯಿಡಾ ತಾಲೂಕಿನಲ್ಲಿ ಯುವ ಶಕ್ತಿಯಿಂದ ಕೆಲಸಗಳು ಆಗಬೇಕು, ತಾಲೂಕಿನಲ್ಲಿ ಯುವಕರು ಮುಂದೆ ಬರಬೇಕು ಎನ್ನುವ ದೃಷ್ಟಿಯಿಂದ ತಾಲೂಕಿನ ಯುವಕರನ್ನು ಒಗ್ಗೂಡಿಸಿ ಯುವ ಒಕ್ಕೂಟವನ್ನು ನವೀಕರಿಸಲಾಯಿತು.
ಯುವ ಒಕ್ಕೂಟದ ಅದ್ಯಕ್ಷರಾಗಿ ವಿಶ್ವನಾಥ ನಾಯ್ಕ, ವಿಘ್ನೇಶ ಕಾಮತ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೋನಿಯಾ ಗೋಡಗೆ, ಮಹದೇವ ಮಿರಾಶಿ ಸಹ ಕಾರ್ಯದರ್ಶಿ,ಸಂದೇಶ ದೇಸಾಯಿ ಸಂಘಟನಾ ಕಾರ್ಯದರ್ಶಿ,ಸಂಜಯ ಹರಿಜನ ಕ್ರೀಡಾಕಾರ್ಯದರ್ಶಿ,ಅಭಿಷೇಕ ನಾಯ್ಕ ಸಾಂಸ್ಕ್ರತಿಕ ಕಾರ್ಯದರ್ಶಿ,ಬಾಲಕೃಷ್ಣ ಶೀತನವರ ಸಂಚಾಲಕರು,ಶುಭೋದ ಕಾಂಬಳೆ,ಪಾಂಡುರಂಗ ಹಣಬರ,ಅಜಿತ ಹರಿಜನ,ವೈಭವ ನಾಯ್ಕ ಯುವ ಒಕ್ಕೂಟದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಯುವ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಶ್ವನಾಥ ನಾಯ್ಕ ನಗರಿ ಮಾತನಾಡಿ ಸಂಘಟನೆಯಲ್ಲಿ ಹೆಚ್ಚಿನ ಯುವಕರನ್ನು ಸೇರಿಸುವ ಉದ್ದೇಶ ಹೊಂದಿದ್ದೇನೆ, ಅಲ್ಲದೇ ತಾಲೂಕಿನ ಯಾವುದೇ ಯುವಕರಿಗೂ ಅನ್ಯಾಯ ಆಗದಂತೆ, ಯುವಕರು ಸಾಂಸ್ಕ್ರತಿಕ ಮತ್ತು ಕ್ರೀಡೆಯಲ್ಲಿ ನಮ್ಮ ತಾಲೂಕಿನ ಯುವಕರು ಮುಂದೆ ಬರುವಂತೆ ಮಾಡುವುದು ನಮ್ಮ ಕರ್ತವ್ಯ ಎಂದರು.
Leave a Comment