ಸಿದ್ದಾಪುರ. ;
ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆಗೆ ರಾಷ್ಟ್ರೀಯ ಸಮಾಜ ಪಕ್ಷದಿಂದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ರಾಷ್ಟ್ರಿಯ ಸಮಾಜ ಪಕ್ಷ(ಆರ್ ಎಸ್ ಪಿ)ಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ತಿಳಿಸಿದ್ದಾರೆ. ಇಂದು ಪಟ್ಟಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಇವರು ಅನರ್ಹ ಶಾಸಕ ಶಿವರಾಮ ಹೆಬ್ಬಾರರು ಸ್ಪರ್ಧೆ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಯಲ್ಲಾಪುರ ಕ್ಷೇತ್ರದ ಮತದಾರರು ಹೆಬ್ಬಾರರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟು ಎರಡನೆ ಭಾರಿ ಆಯ್ಕೆ ಮಾಡಿದ್ದರು ಆದರೆ ಹಣದ ಆಮಿಷಕ್ಕೆ ಒಳಗಾಗಿಯೋ, ಅಧಿಕಾರದ ಆಮಿಷಕ್ಕೆ ಒಳಗಾಗಿಯೋ, ಅಥವಾ ಭಯದಿಂದಲೋ ಒಟ್ಟಿನಲ್ಲಿ ರಾಜಿನಾಮೆ ಕೊಟ್ಟು ಮತದಾರರ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ಇವರಿಗೆ ಕ್ಷೇತ್ರದ ಮತದಾರರು ಈ ಉಪ ಚುನಾವಣೆಯಲ್ಲಿ ಬುದ್ದಿ ಕಲಿಸಲಿದ್ದಾರೆ ಎಂದರು. ಇನ್ನು ಕಾಂಗ್ರೇಸ್ ಪಕ್ಷಕ್ಕೆ ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯ ಅಭ್ಯರ್ಥಿಗಳೆ ಇಲ್ಲದಂತ ಸ್ಥಿತಿ ಇದೆ. ಮತದಾರರಿಗೆ ಕಾಂಗ್ರೇಸ್, ಬಿಜೆಪಿ, ಜೆಡಿಎಸ್ ಪಕ್ಷದ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ರಾಷ್ಟ್ರದಲ್ಲಿರುವ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣುವ ಹಾಗೂ ಸರ್ವರ ಅಭಿವ್ರಧ್ಧಿ ಬಯಸುವ ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯನ್ನು ಈ ಭಾರಿ ಯಲ್ಲಾಪುರ ಕ್ಷೇತ್ರದ ಮತದಾರರು ಆಯ್ಕೆ ಮಾಡಲಿದ್ದಾರೆ ಎಂದರು. ನನಗೆ ಸ್ಪರ್ಧಿಸಲು ಪಕ್ಷದಿಂದ ಸೂಚಿಸಿದ್ದರು ಆದರೆ ಹಣಕಾಸಿನ ಕೊರತೆಯಿಂದ ನಾನು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಈಗಾಗಲೆ 4 ಜನರ ಹೆಸರನ್ನು ಪಕ್ಷದ ನಾಯಕರುಗಳಿಗೆ ಕಳುಹಿಸಲಾಗಿದೆ. 27ನೆ ತಾರೀಖಿನಂದು ಬೆಳಗಾವಿಯಲ್ಲಿ ಪಕ್ಷದ ನಾಯಕರ ಸಭೆ ನಡೆಯಲಿದೆ. ಈ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸಿದ್ದಪ್ಪ ಅಕ್ಕಿಸಾಗರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನಕುಮಾರ್ ಮುಂಬೈನಿಂದ ಆಗಮಿಸಲಿದ್ದಾರೆ. ರಾಷ್ಟ್ರೀಯ ಕಾರ್ಯದರ್ಶಿಗಳಾದ ನಿವೇದಿತಾ ಕುಕ್ರೇಜ, ರಾಜ್ಯ ಸಂಚಾಲಕರಾದ ಧರ್ಮಣ್ಣ ತುಂಟಾಪುರ ಹಾಗೂ ಮುಂತಾದ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದರು. ಉಪ ಚುನಾವಣೆಯಲ್ಲಿ ಹಣದ ಹೋಳೆಯೆ ಹರಿಯುವ ಲಕ್ಷಣ ಕಂಡುಬರುತ್ತಿದ್ದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಕ್ರಮಗಳು ನಡೆಯದಂತೆ ತಡೆಯ ಬೇಕೆಂದು ಆಗ್ರಹಿಸಿದರು.
Leave a Comment