ಹಳಿಯಾಳ:- ಪಟ್ಟಣದ ಹೃದಯಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆಯನ್ನು ಒಂದು ವಾರದ ಅವಧಿಯಲ್ಲಿ ತೆರವುಗೊಳಿಸಬೇಕು ಇಲ್ಲದಿದ್ದರೇ ಊಗ್ರ ಹೋರಾಟ ನಡೆಸಲಾಗುವುದೆಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನೀಕರು ತಾಲೂಕಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.
ಪಟ್ಟಣದ ಮೇದಾರಗಲ್ಲಿ ಹಾಗೂ ದಲಾಯತಗಲ್ಲಿ ಮಧ್ಯದಲ್ಲಿ ರಸ್ತೆಯ ಮೇಲಿರುವ ಅನಧಿಕೃತ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ಗೋವಧಾಲಯವನ್ನು ನಡೆಸುತ್ತಾ ಬಂದಿದ್ದು ಇದನ್ನು ಬಂದ್ ಮಾಡುವಂತೆ ನೂರಾರು ಬಾರಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಪ್ರತಿಭಟನೆಗಳನ್ನು ಮಾಡಲಾಗಿದ್ದರು ಸಹಿತ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಪಾದಿಸಲಾಗಿದೆ.
ಮೇದಾರಗಲ್ಲಿ, ಬಸ್ ನಿಲ್ದಾಣ ನಿವಾಸಿಗಳು, ಸಾರ್ವಜನೀಕರು, ಕರ್ನಾಟಕ ರಕ್ಷಣಾ ವೇದಿಕೆ, ಬಿಜೆಪಿ ಪಕ್ಷದವರು, ಆರ್.ಎಸ್.ಎಸ್, ಭಜರಂಗದಳ, ಸನಾತನ ಸಂಸ್ಥೆ ಸೇರಿದಂತೆ ಅನೇಕರು ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ, ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಕೇಶವ ಚೌಗಲೆ ಬಳಿಕ ಪೋಲಿಸ್ ಠಾಣೆಗೆ ಆಗಮಿಸಿ ಪಿಎಸ್ಐ ಆನಂದಮೂರ್ತಿ ಅವರಿಗೆ ಕಸಾಯಿಖಾನೆ ಬಂದ್ ಮಾಡುವಂತೆ ಲಿಖಿತ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಪಟ್ಟಣದ ಬಸ್ ನಿಲ್ದಾಣದ ಸಮೀಪದ ಮೇದಾರಗಲ್ಲಿ ಹಾಗೂ ದಲಾಯತಗಲ್ಲಿಯ ಮಧ್ಯದ ರಸ್ತೆಯ ಮೇಲೆ ಅನಧಿಕೃತ ಕಟ್ಟಡದಲ್ಲಿ ಕಾನೂನು ಬಾಹಿರವಾಗಿ ಕಸಾಯಿಖಾನೆ ಕಾರ್ಯನಿರ್ವಹಿಸುತ್ತಿದೆ. ಗೋ, ದನಗಳ ಮಾಂಸದ ತ್ಯಾಜ್ಯದಿಂದ ಪರಿಸರವೆಲ್ಲ ದುರ್ವಾಸನೆ ಭರಿತವಾಗುತ್ತಿದೆ. ಮಾಂಸದ ತ್ಯಾಜ್ಯ ಹಾಗೂ ಎಲುಬುಗಳಿಗಾಗಿ ನಾಯಿಗಳು ಬೆನ್ನುಬಿದ್ದು ಅವುಗಳನ್ನು ಎಲ್ಲೆಂದರಲ್ಲಿ ಚೆಲ್ಲುತ್ತಿವೆ. ಗೋವಧಾಲಯದ ರಕ್ತ ಗಟಾರಗಳಲ್ಲಿ ಹರಿದು ರೋಗ ರುಜಿನಗಳ ಆವಾಸ ಸ್ಥಾನವಾಗಿ ಮಾರ್ಪಾಡಾಗಿದ್ದು ಇದರಿಂದ ಸುತ್ತಮುತ್ತಲ ನೂರಾರು ಕುಟುಂಬಗಳು ರೋಗ ಗ್ರಸ್ಥವಾಗುತ್ತಿದ್ದು ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಈ ಅಕ್ರಮ ಗೋ ವಧಾಲಯದ ಬಗ್ಗೆ ಈ ಹಿಂದೆ ನೂರಾರು ಬಾರಿ ಸ್ಥಳೀಯ ಶಾಸಕರು ಸೇರಿ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದೆ ಆದರೇ ಯಾವುದೇ ಕ್ರಮ ಜರುಗಿಸದೆ ಇರುವುದಕ್ಕೆ ಖಂಡನೆಯನ್ನು ವ್ಯಕ್ತಪಡಿಸಲಾಗಿದೆ.
ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ, ರೋಗರುಜಿನಗಳ ಆವಾಸಸ್ಥಾನವಾಗಿ, ದುರ್ವಾಸನೆ ಬಿರುತ್ತಿರುವ ಈ ಕಸಾಯಿಖಾನೆಯನ್ನು ಒಂದು ವಾರದ ಒಳಗೆ ತೆರವು ಗೊಳಿಸದೆ ಇದ್ದರೇ ಊಗ್ರ ಪ್ರತಿಭಟನೆಯನ್ನು ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ಲಿಖಿತ ಮನವಿಯ ಮೂಲಕ ನೀಡಿದ್ದಾರೆ.
ಗೋ ಹತ್ಯೆ ನಿಷೇಧವಿದ್ದರು ಸಹಿತ ಹಳಿಯಾಳದಲ್ಲಿ ಅನಧಿಕೃತ ಕಸಾಯಿಖಾನೆ ಪಟ್ಟಣದ ಬಸ್ ನಿಲ್ದಾಣದ ಸಮೀಪವೇ ಕಾರ್ಯನಿರ್ವಹಿಸುತ್ತಿದೆ. ಇದನ್ನು ಬಂದ್ ಮಾಡುವಂತೆ ಹಿಂದೆಯೂ ಅನೇಕ ಬಾರಿ ಮನವಿ ನೀಡಲಾಗಿದೆ. ಆದರೇ ಯಾವುದೇ ಕ್ರಮ ಜರುಗಿಸಲಾಗಿಲ್ಲ. ಈ ಬಾರಿ ಮನವಿ ಸಲ್ಲಿಸಿ ಗಡುವು ನೀಡಲಾಗಿದೆ. ಒಂದಾನುವೇಳೆ ಮತ್ತೇ ಹಳೆ ಚಾಳಿಯನ್ನೇ ಮುಂದುವರೆಸಿ ಅಕ್ರಮ ಕಸಾಯಿಖಾನೆ ವಿರುದ್ದ ಕ್ರಮ ಕೈಗೊಳ್ಳದೇ ಇದ್ದರೇ ಬಿಜೆಪಿ ಪಕ್ಷದಿಂದಲೂ ಹೋರಾಟ ನಡೆಸಲಾಗುವುದು – ಹಳಿಯಾಳ ಬಿಜೆಪಿ ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ.
ಮನವಿ ಸಲ್ಲಿಸುವಾಗ ಬಿಜೆಪಿ ಪುರಸಭೆ ಸದಸ್ಯರಾದ ಉದಯ ಹೂಲಿ, ಸಂಗೀತಾ ಜಾಧವ, ಶಾಂತಾ ಹಿರೇಕರ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಚಂದ್ರಕಾಂತ ದುರ್ವೆ, ಪ್ರಮುಖರಾದ ಅನಿಲ ಮುತ್ನಾಳ, ಶ್ರೀನಿವಾಸ ದೊಡ್ಮಣಿ, ವಿಜಯ ಬೋಬಾಟಿ, ಉಮೆಶ ದೇಶಪಾಂಡೆ, ರಾಜು ಹುಟಗಿಕರ, ಪ್ರೇಮಾ ಗೌಳಿ, ಯಲ್ಲವ್ವಾ ಮೇದಾರ, ಸರೋಜಾ ಬೂದಪ್ಪನವರ, ಸಿಎಚ್.ಮಡ್ಡಿ ಇತರರು ಇದ್ದರು.
Leave a Comment