
ಹಳಿಯಾಳ:- ಮೋಟಾರು ವಾಹನ ಕಾಯ್ದೆಯ ಕಲಂ ನಂ.147 ಹಾಗೂ ಇತರ ಕಲಂಗಳನ್ನು ತಿದ್ದುಪಡಿ ಮಾಡಿದ್ದನ್ನು ವಿರೋಧಿಸಿ ಹಳಿಯಾಳ ನ್ಯಾಯವಾದಿಗಳ(ವಕೀಲರ) ಸಂಘದವರು ಸೋಮವಾರದ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿದರು.

ನ್ಯಾಯಾಲಯದ ಕಲಾಪಕ್ಕೆ ಗೈರು ಹಾಜರಾದ ಹಳಿಯಾಳ ವಕೀಲರ ಸಂಘದ ಸರ್ವ ಸದಸ್ಯರು ನೇರವಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ರತ್ನಾಕರ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ವಾಹನ ಕಾಯ್ದೆ 1988 ಕಲಂ ನಂ.147 ಹಾಗೂ ಇತರ ಕಲಂಗಳ ತಿದ್ದುಪಡಿ ಮಾಡಿರುವುದನ್ನು ಹಳಿಯಾಳ ವಕೀಲರ ಸಂಘದ ಸರ್ವ ಸದಸ್ಯರು ಒಮ್ಮತದಿಂದ ವಿರೋಧಿಸಿ ಠರಾವು ಪಾಸು ಮಾಡಿದ್ದಾಗಿ. ಸದ್ರಿ ಠರಾವಿನ ಪ್ರತಿಯನ್ನು ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಸಲ್ಲಿಸುತ್ತಿರುವುದಾಗಿ ಹೇಳಿರುವ ಅವರು ತಿದ್ದುಪಡಿ ವಿರೋಧಿಸಿ ಸೋಮವಾರದ ಕಲಾಪದಿಂದ ದೂರ ಉಳಿದಿರುವುದಾಗಿಯೂ ತಿಳಿಸಿದ್ದಾರೆ. ಕೂಡಲೇ ಠರಾವಿನ ಬಗ್ಗೆ ಸರ್ಕಾರ ಗಮನ ಹರಿಸುವಂತೆ ವಿನಂತಿಸಲಾಗಿದೆ.
ಮನವಿ ಸಲ್ಲಿಸುವಾಗ ಹಳಿಯಾಳ ವಕೀಲರ ಸಂಘದ ಅಧ್ಯಕ್ಷ ಎಎಮ್ ಪಾಟೀಲ್, ಉಪಾಧ್ಯಕ್ಷ ಎಸ್.ವೈ.ಗುಪಿತ, ಸುರೇಖಾ ಗುನಗಾ, ವೈಎನ್ ಅರಿಶೀನಗೇರಿ, ಎಮ್.ಎನ್.ಜುಂಜವಾಡಕರ, ಎಸ್.ಎಲ್.ಸೋಮನ್ನವರ, ಪಿಬಿ ಅಂಗಡಿ, ಸಂತೋಷ ಹಬ್ಬು, ರೆಹಮಾನ್, ಮೇಘರಾಜ, ಎಮ್.ವಿ.ಅಷ್ಟೇಕರ, ಸುಪ್ರಿತ ಮೊದಲಾದವರು ಇದ್ದರು.

Leave a Comment