• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಸಾಯಿಖಾನೆ ಹಾಗೂ ಮಾಂಸದ ಅಂಗಡಿಗಳನ್ನು ಬಂದ್ ಮಾಡುವಂತೆ ಹಳಿಯಾಳ ಬಿಜೆಪಿ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

October 14, 2019 by Yogaraj SK Leave a Comment

Submitted memorandum to DC dr harish - BY X MLA sunil hegde and BJP haliyal

ಹಳಿಯಾಳ :- ತಾಲೂಕಾ ಕೇಂದ್ರವಾಗಿರುವ ಹಳಿಯಾಳ ಪಟ್ಟಣದ ಜನನಿಬಿಡ, ಜನವಸತಿ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆ(ಗೋ ವಧಾಲಯ), ಮಾಂಸದಂಗಡಿಗಳನ್ನು ಕೂಡಲೇ ಕೂಡಲೇ ಮುಚ್ಚಲು ಆದೇಶ ಹೊರಡಿಸಬೇಕೆಂದು ಹಳಿಯಾಳ ಬಿಜೆಪಿ ಘಟಕ ಉ.ಕ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಅವರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.
ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಹರೀಶ ಅವರನ್ನು ಬಿಜೆಪಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಹಳಿಯಾಳ ಬಿಜೆಪಿ ನಿಯೋಗ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಭೇಟಿ ಮಾಡಿ ಪಟ್ಟಣದ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಲಿಖಿತ ಮನವಿಯ ಮೂಲಕ ಕ್ರಮ ಜರುಗಿಸುವಂತೆ ಆಗ್ರಹಿಸಿದೆ.

IMG 20190926 WA0133


ಮನವಿಯಲ್ಲಿ ಹಳಿಯಾಳ ಪಟ್ಟಣದ ಮಧ್ಯ ಭಾಗದಲ್ಲಿ ಅನೇಕ ಪಶು ವಧಾಲಯಗಳು ಮತ್ತು ಮಾಂಸದ ವ್ಯಾಪಾರ ನಡೆಯುತ್ತಿದೆ ಇದು ಜನನಿಬಿಡ ಪ್ರದೇಶದಲ್ಲಿರುವುದರಿಂದ ಇಲ್ಲಿ ಉಂಟಾಗುವ ಅಸ್ವಚ್ಚತೆ ಹಾಗೂ ಪರಿಸರ ಮಾಲಿನ್ಯದ ಬಗ್ಗೆ ಜನರು ರೋಸಿ ಹೋಗಿದ್ದು ಅನೇಕ ಬಾರಿ ಪ್ರತಿಭಟನೆಯೂ ನಡೆದಿದೆ. ಜಿಲ್ಲಾಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಈ ವಧಾಲಯ ಹಾಗೂ ಮಾಂಸದ ಅಂಗಡಿಗಳನ್ನು ತುರ್ತಾಗಿ ಮುಚ್ಚಲು ಆದೇಶ ನೀಡುವ ಮೂಲಕ ಜನರಿಗೆ ಸ್ಪಂದಿಸಬೇಕಿದೆ. ಒಂದು ವೇಳೆ ಈ ವಧಾಲಯಗಳು ಮುಂದುವರೆದರೆ ಸಾರ್ವಜನಿಕರೊಡಗೂಡಿ ಬಿಜೆಪಿಯಿಂದ ಊಗ್ರ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಲಾಗಿದೆ.
ಪಟ್ಟಣದಲ್ಲಿ ಮೀನು ಹಾಗೂ ಮಾಂಸದ ಮಾರುಕಟ್ಟೆ ಇದ್ದರೂ ನಗರದ ಬೀದಿ ಕಾಲನಿ ಹಾಗೂ ಜನನಿಬಿಡ ಪ್ರದೇಶದಲ್ಲಿ ಮೀನು ಮಾಂಸ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದು ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಹಾಗೂ ಹಲವರ ಧಾರ್ಮಿಕ ಭಾವನೆಗೂ ಧಕ್ಕೆ ಉಂಟು ಮಾಡುತ್ತದೆ. ಈ ಬಗ್ಗೆ ಈಗಾಗಲೇ ಹಲವು ಭಾರಿ ಸಾರ್ವಜನಿಕರು ತಕರಾರು ನೀಡಿದರು ಪುರಸಭೆ ಮುಖ್ಯಾಧಿಕಾರಿಗಳು ಜಾಣಕುರುಡ ನೀತಿ ಅನುಸರಿಸುವ ಮೂಲಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಇನ್ನೂ ಹಳಿಯಾಳದಲ್ಲಿ 75 ಕೋಟಿರೂ ಅನುದಾನದಲ್ಲಿ ಒಳಚರಂಡಿ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದು ಈಗಾಗಲೇ ಟೆಂಡರ ಕರೆದು ಗುತ್ತಿಗೆದಾರರನ್ನು ನೇಮಿನಿ ಕಾಮಗಾರಿ ನಡೆಸಲು ಸರ್ವತಯಾರಿ ನಡೆದಿರುತ್ತದೆ. ಹಳಿಯಾಳ ಪಟ್ಟಣವು ಪುರಾತನವಾಗಿದ್ದು ನಗರವು ಯೋಜನಾಬದ್ದವಾಗಿ ರಚಿತವಾಗಿಲ್ಲಾ ಇಲ್ಲಿ ಒಳಚರಂಡಿ ಕಾಮಗಾರಿಯು ಅವಶ್ಯವಿದ್ದರೂ ವಾಸ್ತವಿಕವಾಗಿ ಪಟ್ಟಣ ಪ್ರದೇಶದ ಮೇಲ್ಮೈ ಲೆಕ್ಕಾಚಾರ ನೋಡಿದಲ್ಲಿ ಈ ಒಳಚರಂಡಿ ಕಾಮಗಾರಿಯಿಂದ ಜನರಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ.

IMG 20190926 WA0134


ಅಲ್ಲದೇ ಈ ಕಾಮಗಾರಿಯಿಂದ ಸರ್ಕಾರದ ಹಣವು ಅಪಾರ ಪ್ರಮಾಣದಲ್ಲಿ ಪೋಲಾಗುವುದು ಮತ್ತು ಗುತ್ತಿಗೆದಾರರಿಗೆ, ಮಧ್ಯವರ್ತಿಗಳಿಗೆ ಲಾಭದಾಯಕವಾಗುವುದು. ಈ ಕಾಮಗಾರಿಗೆ ಟೆಂಡರ ಕರೆಯುವ ಪೂರ್ವದಲ್ಲಿ ನೀಲ ನಕ್ಷೆಯನ್ನು ತಯಾರಿಸಿ ಸಾರ್ವಜನಿಕರ ಸಭೆ ನಡೆಸಿ ಅವರ ತಕರಾರು ಅಹವಾಲುಗಳನ್ನು ಆಲಿಸಬೇಕಾಗಿತ್ತು. ಆದರೆ ಇದಾವುದನ್ನು ಮಾಡದೇ ನೇರವಾಗಿ ಟೆಂಡರ ಕರೆದು ಕಾಮಗಾರಿಯನ್ನು ಬಲವಂತವಾಗಿ ಪ್ರಾರಂಭಿಸುವ ಪ್ರಯತ್ನ ನಡೆಯುತ್ತಿವುದಕ್ಕೆ ಖಂಡನೆಯನ್ನು ವ್ಯಕ್ತಪಡಿಸಲಾಗಿದೆ.
ಹಳಿಯಾಳದ ಪುರಸಭಾ ಅಧಿಕಾರಿಗಳು ಹಾಗೂ ಕೆಲವು ಜನ ಪ್ರತಿನಿಧಿಗಳು ತಮ್ಮ ಲಾಭಕ್ಕೋಸ್ಕರ ಜನರ ಕೂಗನ್ನು ಆಲಿಸದೇ, ಅವರ ಸಮಸ್ಯೆಯನ್ನು ಬಗೆಹರಿಸದೇ ಕಾಮಗಾರಿ ಪ್ರಾರಂಭಿಸಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಸಿದ್ದರಾಗಿರುವುದು ಯಾವ ಪುರುಷಾರ್ಥಕ್ಕೆ ಎಂದಿರುವ ಮಾಜಿ ಶಾಸಕ ಸುನೀಲ್ ಹೆಗಡೆ ಈ ಕಾಮಗಾರಿಯನ್ನು ತುರ್ತಾಗಿ ತಡೆ ಹಿಡಿದು ಪ್ರತಿಯೊಂದು ವಾರ್ಡಿನಲ್ಲಿ ಸಾರ್ವಜನಿಕ ಸಭೆ ನಡೆಸಬೇಕು. ನೀಲ ನಕ್ಷೆಯನ್ನು ಸಾರ್ವಜನಿಕರಿಗೆ ತಿಳಿಸಿ ಒಪ್ಪಿಗೆ ಪಡೆದುಕೊಂಡ ಬಳಿಕ ಕಾಮಗಾರಿಯನ್ನು ಪ್ರಾರಂಭಿಸಲು ಆದೇಶ ನೀಡಬೇಕು ಹಾಗೂ ಈ ಕಾಮಗಾರಿಯನ್ನು ನೇರವಾಗಿ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿಯೇ ನಡೆಸಬೇಕು ಎಂದು ಆಗ್ರಹಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಕಸಾಯಿಖಾನೆ ಹಾಗೂ ಮಾಂಸದ ಅಂಗಡಿ, ಗೋ ವಧಾಲಯ, ಜನನಿಬಿಡ, ಜನವಸತಿ ಪ್ರದೇಶ, ಬಂದ್ ಮಾಡುವಂತೆ, ಮಾಂಸದ ಮಾರುಕಟ್ಟೆ, ಮಾಂಸದಂಗಡಿ, ಮೀನು, ಹಳಿಯಾಳ ಬಿಜೆಪಿ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...