
ಹಳಿಯಾಳ:- ಕಳೆದ 2 ದಿನಗಳಿಂದ ಹಳಿಯಾಳ, ಧಾರವಾಡ, ಖಾನಾಪುರ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಅಲ್ಲದೇ ಶನಿವಾರ ಸಾಯಂಕಾಲದಿಂದ ನಿರಂತರವಾಗಿ ಸುರಿದ ಭಾರಿ ಮಳೆಗೆ ಹಳಿಯಾಳದ ಹಳ್ಳಗಳು ಮತ್ತೇ ಮೈದುಂಬಿಕೊಂಡು ಹರಿಯುತ್ತಿದ್ದು ಮಳೆ ಹೀಗೆ ಮುಂದುವರೆದರೇ ಮತ್ತೊಮ್ಮೆ ಸೇತುವೆಗಳು ಜಲಾವೃತವಾಗುವ ಲಕ್ಷಣಗಳು ಗೊಚರಿಸುತ್ತಿವೆ.
ಕಳೆದ ಅಗಸ್ಟ್ ತಿಂಗಳಿನಲ್ಲಿ ದಿ.6ರಿಂದ 10 ವರೆಗೆ ಮೇಘಸ್ಪೊಟದಿಂದಾಗಿ ಹಳಿಯಾಳದ ಹಳ್ಳಗಳಲ್ಲಿ ಪ್ರವಾಹ ಉಂಟಾಗಿತ್ತು ಇದರಿಂದ ಕೊಟ್ಯಂತರ ರೂ. ಆಸ್ತಿಪಾಸ್ತಿ ಹಾನಿಗಿಡಾಗಿತ್ತು. ಅಲ್ಲದೇ ಸಪ್ಟೆಂಬರ್ ತಿಂಗಳಿನಲ್ಲಿ ಇದೆ ದಿನಾಂಕಗಳಲ್ಲಿ ಮತ್ತೇ ಹಳ್ಳಗಳು ತುಂಬಿ ಹರಿದಿದ್ದವು ಮತ್ತೇ ಈಗ ಹಳಿಯಾಳದ ದುಸಗಿ, ಯಡೋಗಾ, ಮಂಗಳವಾಡ, ಕೆಸರೊಳ್ಳಿ ಹಳ್ಳಗಳು ಮೈದುಂಬಿಕೊಂಡು ಹರಿಯುತ್ತಿವೆ.
ಅಳ್ನಾವರ ಹುಲಿಕೇರಿ, ಕಕ್ಕೇರಿ ಸುತ್ತಮುತ್ತ ಭಾರಿ ಮಳೆಯಾಗುತ್ತಿರುವ ಕಾರಣ ಕಳೆದ ಅಗಸ್ಟ್ ತಿಂಗಳಿನಲ್ಲಿ ಹಳಿಯಾಳದ ಹಳ್ಳಗಳಲ್ಲಿ ಪ್ರವಾಹ ಸೃಷ್ಟಿಗೆ ಕಾರಣವಾಗಿದ್ದ ಅಳ್ನಾವರದ ಹುಲಿಕೇರಿ ಗ್ರಾಮದ ಬಳಿಯ ಇಂದ್ರಮ್ಮನ(ಹುಲಿಕೇರಿ) ಮತ್ತೇ ರೌದ್ರಾವತಾರ ತಾಳಿದ್ದು 100 ಅಡಿಗೂ ಉದ್ದವಿರುವ ಕೆರೆಯ ಕೊಡಿಯ ಮೇಲಿಂದ ಸುಮಾರು 3 ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಗೆ ಹರಿಯುತ್ತಿದೆ.

ಇದಷ್ಟೇ ಅಲ್ಲದೇ ಅಳ್ನಾವರ ಸಮೀಪದ ಮತ್ತೇರಡು ಸಣ್ಣ ಹಳ್ಳಗಳು ಹಳಿಯಾಳದಿಂದ ಹರಿದು ಹೊಗುವ ಹಳ್ಳಗಳಿಗೆ ಕೂಡುವುದರಿಂದ ಈ ಭಾಗದಲ್ಲೆಲ್ಲ ಭಾರಿ ಮಳೆಯಾಗುತ್ತಿರುವ ಕಾರಣ ಬಾಂದಾರಗಳು, ಚೆಕ್ ಡ್ಯಾಂಗಳು ಹಾಗೂ ಹಳೆಯ ಸೇತುವೆಗಳು ಜಲಾವೃತಗೊಂಡಿದ್ದು ನೀರು ರುದ್ರರಮಣಿಯವಾಗಿ ಹರಿಯುತ್ತಿದೆ. ಮತ್ತೇ ಮಳೆ ಹೀಗೆ ಮುಂದುವರೆದರೇ ಮತ್ತೊಮ್ಮೆ ಪ್ರವಾಹ ಸೃಷ್ಠಿಯಾಗುವ ಭಯವು ನದಿ ಪಾತ್ರದ ಜನರಲ್ಲಿ ಮನೆ ಮಾಡಿದೆ.
ಶುಕ್ರವಾರ ಸಾಯಂಕಾಲ ಸುರಿದ ಮಳೆ ಶನಿವಾರ ಬೆಳಿಗ್ಗೆಯಿಂದ ಬಿಡುವು ನೀಡಿತ್ತು ಬಳಿಕ ಶನಿವಾರ ಸಾಯಂಕಾಲ ಪ್ರಾರಂಭವಾದ ಭಾರಿ ಮಳೆ ಬೆಳಗಿನ ಜಾವದ ವರೆಗೂ ಸುರಿದಿದ್ದು ಭಾನುವಾರ ಸಾಯಂಕಾಲದವರೆಗೆ ಮಳೆರಾಯ ಹಳಿಯಾಳಕ್ಕೆ ಬಿಡುವು ನೀಡಿದ್ದು ಹಳಿಯಾಳದಲ್ಲಿ ಭಾನುವಾರ ವಾರದ ಸಂತೆಯಾಗಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.


Leave a Comment