
ಹಳಿಯಾಳ :- ಕಾರವಾರ, ಗೋಕರ್ಣ, ಹೊನ್ನಾವರ ಠಾಣೆಗಳಲ್ಲಿ ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ಶಹಬ್ಬಾಸಗಿರಿ ಪಡೆದು ಹಳಿಯಾಳ ಠಾಣೆಯಲ್ಲಿ ಕೂಡ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಕುಮಟಾ ಠಾಣೆಗೆ ವರ್ಗಾವಣೆಯಾಗಿರುವ ಸನ್ನಡತೆಯ ದಕ್ಷ ಅಧಿಕಾರಿ ಪಿಎಸ್ಐ ಆನಂದಮೂರ್ತಿ .ಸಿ ಯವರ ಕುರಿತು ಕಿರು ಲೇಖನ.
ಮೂಲತಃ ಚಾಮರಾಜನಗರ ಗುಂಡ್ಲುಪೇಟೆಯವರಾದ ಆನಂದಮೂರ್ತಿಯವರು 2007ರಲ್ಲಿ ಪೋಲಿಸ್ ಇಲಾಖೆಗೆ ಸೇರ್ಪಡೆಯಾಗಿದ್ದು ಮೊದಲು ಕಾಯ್ದಿಟ್ಟ ಪೋಲಿಸ್ ಪಡೆ(ರಿಸರ್ವ ಪೋಲಿಸ್) ಯಲ್ಲಿ ಆರ್ಎಸ್ಐ ಆಗಿ ಕಾರ್ಯನಿರ್ವಹಿಸಿ ಬಳಿಕ 2010ರಲ್ಲಿ ಸಿವಿಲ್ ಪೋಲಿಸ್ನಲ್ಲಿ ಪಿಎಸ್ಐ ಹುದ್ದೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಠಾಣೆಗೆ ವರ್ಗವಾಗಿ ಬಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ನಾಗರೀಕ ಸೇವೆ ಆರಂಭಿಸಿ ಹಾಗೇಯೇ ಗೊಕರ್ಣ, ಹೊನ್ನಾವರ ಬಳಿಕ ಹಳಿಯಾಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ಕುಮಟಾ ಠಾಣೆಗೆ ವರ್ಗವಾಗಿದ್ದಾರೆ.
ಸನ್ನಡತೆಯ, ಸರಳ ಸ್ವಭಾವದ, ದಕ್ಷ, ಪ್ರಾಮಾಣಿಕ ಹಾಗೂ ಜನಸ್ನೇಹಿ ಅಧಿಕಾರಿಯಾಗಿರುವ ಆನಂದಮೂರ್ತಿ ಅವರು ಕಾರವಾರದಲ್ಲಿ ಉದ್ಯಮಿ ಉಲ್ಲಾಸ ನೇತಲಕರ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್ಐ ಆನಂದಮೂರ್ತಿಯವರು ಆರೋಪಿಯು ಎರಡು ಲೋಡೆಡ್ ಗನ್ ಹೊಂದಿದ್ದರು ಸಹಿತ ಎದೆಗುಂದದೆ ಸಮುದ್ರ ತೀರದುದ್ದಕ್ಕೂ ಆರೋಪಿಯನ್ನು ಬೆನ್ನಟ್ಟಿ ಹಿಡಿದು ಸಾಹಸ ತೊರಿದ್ದರು.
ಕುಮಟಾದ ಬರ್ಗಿಯಲ್ಲಿ ನಡೆದ ಅನಿಲ ಟ್ಯಾಂಕರ್ ದುರಂತದಲ್ಲಿ ತಕ್ಷಣ ಸ್ಪಂದಿಸಿ ಘಟನಾ ಸ್ಥಳದಲ್ಲಿ ತನ್ನ ಜೀವದ ಹಂಗು ತೊರೆದು ಹಲವು ಜನರ ಪ್ರಾಣ ರಕ್ಷಿಸಿರುವುದು ಹಾಗೂ ಓಂ ಬಿಚನ ಸಮುದ್ರದಲ್ಲಿ ಬಂಡೆಗಳ ನಡುವೆ ಸಿಲುಕಿದ್ದ ಹೈದ್ರಾಬಾದ್ ಪ್ರವಾಸಿಗರ ರಕ್ಷಣೆ ಮಾಡಿದ ಕೀರ್ತಿಯು ಇವರ ಮುಡಿಗಿದೆ.
ಈಡಿ ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಹೊನ್ನಾವರದಲ್ಲಿ ಪರೇಶ ಮೆಸ್ತ್ ಪ್ರಕರಣವನ್ನು ಚಾಕಚಕ್ಯತೆಯಿಂದ ನಿಭಾಯಿಸಿ ಪೋಲಿಸ್ ಇಲಾಖೆಯ ಹಿರಿಯ, ವರಿಷ್ಠ ಅಧಿಕಾರಿಗಳಿಂದ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನೀಕರಿಂದ ಪ್ರಶಂಸೆಗೆ ಪಾತ್ರವಾಗಿದ್ದರು.

ಆನಂದಮೂರ್ತಿಯವರು ಪ್ರಮುಖವಾಗಿ ಹೆಚ್ಚು ಸಮಯ ಠಾಣೆಯಲ್ಲಿಯೇ ಕಳೆಯುವುದು, ಸಿಬ್ಬಂದಿಗಳಿಗೆ ಎಲ್ಲ ರೀತಿಯಿಂದಲೂ ಸಹಕರಿಸುವುದು, ಠಾಣೆಗೆ ಸಣ್ಣವರೇ ಬರಲಿ ದೊಡ್ಡವರೇ ಇರಲಿ ಗೌರವಯುತವಾಗಿ ಮಾತನಾಡುವುದು, ಬಡವರ ಬಗ್ಗೆ ಕಾಳಜಿ ಹೀಗೆ ತಮ್ಮ ವೃತ್ತಿಯನ್ನು ಯಾವುದೇ ಅಹಃಭಾವ ಇಲ್ಲದೇ ಅತ್ಯಂತ ಶೃದ್ದೆಯಿಂದ ನಿಭಾಯಿಸುವುದೇ ಅವರ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇನ್ನೂ ಹಳಿಯಾಳದಲ್ಲಿ ವಿಧಾನಸಭೆ, ಲೋಕಸಭೆ, ಪುರಸಭೆ ಚುನಾವಣೆಗಳನ್ನು ಶಾಂತಿಯುತವಾಗಿ ಮುಗಿಸಿದ್ದು. ಕಿಲ್ಲಾ ಶಿವಾಜಿ ಮೂರ್ತಿ ಪ್ರತಿಷ್ಠಾಪಣೆಯಲ್ಲಿ ನಡೆದ ಘಟನೆಯನ್ನು ಚಾಕಚಕ್ಯತೆಯಿಂದ ನಿಭಾಯಿಸಿದ್ದು. ಮಧ್ಯಪ್ರದೇಶದ ಖತರನಾಕ್ ಕಳ್ಳರ ಬಂಧನ, ರಾಜಕೀಯ ಹಾಗೂ ಧಾರ್ಮಿಕ ಸಮತೋಲನ, ಅಕ್ರಮ ಚಟುವಟಿಕೆಗಳ ಮೇಲೆ ಕಡಿವಾಣ, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ನಿರ್ದಾಕ್ಷೀಣ್ಯ ಕ್ರಮ ಅಲ್ಲದೇ ಹಳಿಯಾಳದ ಇತಿಹಾಸದಲ್ಲೇ ಪ್ರಥಮವಾಗಿ ಬಂದ ನೇರೆ ಹಾವಳಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು ನೀರಿನಲ್ಲಿ ಸಿಲುಕಿದ್ದ ಪೋಲಿಸ್ ಸಿಬ್ಬಂದಿ ಸೇರಿ ವಾಹನ ಚಾಲಕರ ರಕ್ಷಣೆ ಮಾಡಿದ್ದು ಹೀಗೆ ಆನಂದಮೂರ್ತಿಯವರು ಹಳಿಯಾಳದಲ್ಲೂ ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಕುಮಟಾ ಠಾಣೆಗೆ ವರ್ಗಾವಣೆಯಾಗಿದ್ದು ಅಲ್ಲಿಯೂ ಇದೇ ರೀತಿ ಜನಸ್ನೇಹಿ ಅಧಿಕಾರಿಯಾಗಿ ಸರ್ಕಾರಿ ಕೆಲಸ ನಿರ್ವಹಿಸಲಿ ಅವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಲಿ ಎಂಬುದು ಸಾರ್ವಜನೀಕರ ಆಶಯವಾಗಿದೆ.


Leave a Comment