ಹಳಿಯಾಳ:- ಹಳಿಯಾಳ ತಾಲೂಕಿನ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿರಸಿಯ ಆವಮರಿಯಾ ಶಾಲೆಯಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ನಾಟಕ ಸ್ಪರ್ದೆಯಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯ ಮಟ್ಟದ ಸ್ಪರ್ದೆಗೆ ಆಯ್ಕೆಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಶಾಲೆಯ ಶಿಕ್ಷಕ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರು ಆಗಿರುವ ಸಿದ್ದಪ್ಪಾ ಬಿರಾದಾರ “ಗಾಂಧಿ ಮತ್ತು ವಿಜ್ಞಾನ” ವಿಭಾಗ ಮಟ್ಟದ ನಾಟಕ ಸ್ಪರ್ದೆಯಲ್ಲಿ ಹಳಿಯಾಳ ತಾಲೂಕಿನ ಚಿಬ್ಬಲಗೇರಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ಪ್ರೀತಿ ಶಿಂಧೆ, ರಕ್ಷೀತಾ ಮಾವಿನಕರ, ಚಾಮುಂಡಿ, ಮನಿಷಾ ಕಮ್ಮಾರ, ವರ್ಷಾ ಚೊರ್ಲೆಕರ, ಶಶಾಂಕ ಹರಿಜನ, ಅಜಯ ಹುಂಡೇಕರ, ಪ್ರೀಯಾಂಕಾ ಬುಟ್ಟೇವಾಡಕರ ಅವರು ಭಾಗವಹಿಸಿದ್ದು ರಾಜ್ಯ ಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾರೆಂದರು.
Leave a Comment