ಹಳಿಯಾಳ:- ವಿದ್ಯಾರ್ಥಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ನಿವೃತ್ತಿ ವರೆಗೆ ಸೇವೆಯಲ್ಲಿ ಮುಂದುವರೆಸಬೇಕು ಹಾಗೂ ಅವರ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿ ಮಾಡುವ ಕುರಿತು ಚರ್ಚಿಸಲು ಜಂಟಿ ಸಭೇಯೊಂದನ್ನು ಕರೆಯಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಹಳಿಯಾಳ ಘಟಕದವರು ಆಗ್ರಹಿಸಿದ್ದಾರೆ.
ಈ ಕುರಿತು ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹಾಗೂ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಸಂಘದವರು ಲಿಖಿತ ಪತ್ರದ ಮನವಿಯ ಮೂಲಕ ಆಗ್ರಹಿಸಿದ್ದಾರೆ.
ಮನವಿಯಲ್ಲಿ ಸರ್ಕಾರ ತುರ್ತಾಗಿ ತೀರ್ಮಾನ ಮಾಡಿ ನಮ್ಮನ್ನು ವಿವೃತ್ತಿವರೆಗೆ ಕೆಲಸದಲ್ಲಿ ಮುಂದುವರೆಸದಿದ್ದರೆ ಕಳೆದ ಹತ್ತಾರು ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳ ಪಡೆದು ಪಿ.ಎಫ್, ಇ.ಎಸ್.ಆಯ್ ಸೌಲಭ್ಯದಿಂದ ವಂಚಿತರಾಗಿ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಸೇವೆ ಮಾಡಿರುವ ಸುಮಾರು 3000 ಹೊರಗುತ್ತಿಗೆ ಸಿಬ್ಬಂದಿಗಳು ನಿರ್ಗತಿಕರಾಗಿ ಬೀದಿಪಾಲಾಗಿದ್ದೇವೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಇದೊಂದು ಮಾನವೀಯತೆಯಿಂದ ನೋಡಬೇಕಾಗಿರುವ ವಿಷಯವಾಗಿದ್ದು ನಿಮ್ಮ ಮೇಲೆ ನಮಗೆ ವಿಶ್ವಾಸ ಇದೆ. ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗದಂತೆ ಈ ಸಮಸ್ಯೆಯನ್ನು ಹೇಗೆ ಇತ್ಯರ್ಥಪಡಿಸಬಹುದೆಂದು ಚರ್ಚಿಸಲು ಹಾಗೂ ನಾವು ಸಹ ಸಲಹೆಗಳನ್ನು ನೀಡುತ್ತೇವೆ ಎಂದಿರುವ ಅವರು ಎರಡನೇಯದಾಗಿ ಈ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಕಳೆದ 5-6 ತಿಂಗಳುಗಳಿಂದ ಕನಿಷ್ಠ ವೇತನವನ್ನು ಕೂಡ ಪಾವತಿ ಮಾಡಿಲ್ಲ. ಕೆಲಸ ಮಾಡುತ್ತಿದ್ದರೂ ಹಾಜರಿ ಇಡಲಾಗುತ್ತಿಲ್ಲ. ಅವರಿಗೆ ವೇತನ ಕೊಡದೇ ಪರದಾಡುವಂತೆ ಮಾಡಲಾಗಿದ್ದು ಕೂಡಲೇ ತುರ್ತಾಗಿ ಬಾಕಿ ವೇತನವನ್ನು ಪಾವತಿ ಮಾಡಬೇಕೆಂದು ವಿನಂತಿಸಿದ್ದಾರೆ.
ಆದ್ದರಿಂದ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳನ್ನು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಪ್ರತಿನಿಧಿಗಳಾದ ನಮ್ಮನ್ನು ಜಂಟಿ ಸಭೆ ಕರೆದು ತುರ್ತಾಗಿ ಚರ್ಚಿಸಿ ಸಕಾರಾತ್ಮಕವಾದ ಆದೇಶವನ್ನು ಹೊರಡಿಸಬೇಕೆಂದು ವಿನಂತಿಸಲಾಗಿದ್ದು ಅಲ್ಲಿಯವರೆಗೆ ಹೊರಗುತ್ತಿಗೆ ಸಿಬ್ಬಂದಿಯನ್ನು ಸೇವೆಯಿಂದ ತೆರವುಗೊಳಿಸಬಾರದೆಂದು ಕೊರಲಾಗಿದೆ.
ಈ ಕುರಿತು ಮಾತನಾಡಿದ ಹಳಿಯಾಳ ಸಂಘದ ಈರಣ್ಣಾ ಮೇತ್ರಿ ಹಳಿಯಾಳ-ದಾಂಡೇಲಿಯಲ್ಲಿ ಈ ಹಿಂದೆ 30 ಜನ ಕೆಲಸ ಮಾಡುತ್ತಿದ್ದರು ಆದರೇ ಈ ಹಿಂದೆ 17 ಜನರನ್ನು ಕೆಲಸದಿಂದ ತೆಗೆಯಲಾಗಿದ್ದು ಸದ್ಯ 13 ಜನ ಕೆಲಸ ಮಾಡುತ್ತಿದ್ದರು ಜೂನ್ ತಿಂಗಳಿಂದ ವೇತನ ನೀಡದೆ ಬದುಕು ದುಸ್ತರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಬಡವರಾದ ನಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಸರ್ಕಾರ ಪರಿಹರಿಸಲಿ ಎಂದು ಬೇಡಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಲಲಿತಾ ಕಾರಬಾರಿ, ಸಂಗೀತಾ ಬಾಲಣ್ಣವರ, ರೇಣುಕಾ ಪೂಜಾರಿ, ಸಂತನಾ ಡಿಸೋಜಾ, ದ್ರಾಕ್ಷಾಯಿನಿ ಗೌಡ್ರ, ಲಕ್ಷ್ಮೀ ಚಂದುರಿ, ಈಶ್ವರ ಕಾರಬಾರಿ ಇದ್ದರು.
Leave a Comment