ಗೋಕರ್ಣ: ಇಲ್ಲಿಯ ಮೊಡರ್ನ ಎಜ್ಯುಕೇಶನ ಟ್ರಸ್ಟನ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತಿ ಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರಕನ್ನಡ ಹಾಗೂ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಕಿರಿಯರ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಣವಕುಮಾರ ಗಜಾನನ ಬಾಗವತ ಮತ್ತು ಲಹರಿ ಎಸ್ ನಾಯಕ ಇವರು ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಹಾಗೂ ಹಿರಿಯರ ವಿಭಾಗದಲ್ಲಿ ಮಾಣಿಕ್ಯ ಎಮ್ ನಾಯಕ ಮತ್ತು ಅಮಿತ ಎನ್ ಭಟ್ಟ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ. ಈ ಸಾಧನೆಗೈದ ಎಲ್ಲಾ ಮುದ್ದು ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ನಾಯಕ ತೊರ್ಕೆ, ಉಪಾಧ್ಯಕ್ಷರಾದ ನಾಗೇಂದ್ರ ಶೇಟ್, ಮೆನೆಜಿಂಗ್ ಟ್ರಸ್ಟಿಗಳಾದ ಡಾ. ಎಂ.ಡಿ.ನಾಯ್ಕ, ಶಾಲಾ ಮುಖ್ಯಾಧ್ಯಾಪಕ ರಾಜೇಶ ಗೋನ್ಸಾಲ್ವೀಸ್, ಶಿಕ್ಷಕವೃಂದದವರು, ಹಾಗೂ ಪಾಲಕರು ಅಭಿನಂದಿಸಿರುತ್ತಾರೆ.
Leave a Comment