ಖಾನಾಪುರ:- ತಾಲೂಕಿನ ಗೋಲಿಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಅವಾಂತರ ಸಂಭವಿಸಿದೆ.
ಮೂವರು ಪುಟಾಣಿ ಮಕ್ಕಳು ಮತ್ತು ಒಬ್ಬ ಕೆಲಸದ ಆಯಾಳ ಮೈಮೇಲೆ #ಬಿಸಿಯೂಟದ ಬಿಸಿ ಸಾರು ಬಿದ್ದು ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮಧ್ಯಾಹ್ನ #ಅಂಗನವಾಡಿ ಮಕ್ಕಳಿಗೆ ಊಟ ಬಡಿಸುವಾಗ ಕೈಯಲ್ಲಿಯ ಬಿಸಿಯೂಟದ ಬಿಸಿಯಾದ ಸಾರು ತುಂಬಿದ ದೊಡ್ಡ ಪಾತ್ರೆ ಜಾರಿ ಮೈಮೇಲೆ ಬಿದ್ದು ಗಂಭೀರ ಸುಟ್ಟ ಗಾಯಗಳಾಗಿದ್ದು #ಕರುಣಾಜನಕ ಘಟನೆ ಇದಾಗಿದೆ.
*ಮೂವರು ಹೆಣ್ಣು ಮಕ್ಕಳಾದ ಸಂಜನಾ( 5 ವರ್ಷ), ಸಾನ್ವಿ( 5 ವರ್ಷ), ಸಮೀಕ್ಷಾ( 5 ವರ್ಷ) ಹೆಣ್ಣುಮಕ್ಕಳು* ಈ ಅವಘಡದಲ್ಲಿ ಬೆಂದು ಹೋಗಿದ್ದಾರೆ.
ಆಯಾ ಲೀಲಾವತಿ( 55 ವರ್ಷ)ಯ ಮುಖ, ಕೈ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ.
ಹಾಸಿಗೆ ಮೇಲೆ ವಿಲವಿಲ ಒದ್ದಾಡುತ್ತ ಕಿರುಚಾಡುತ್ತಿರುವ ಮೂರು ಹೆಣ್ಣು ಮಕ್ಕಳು ಓರ್ವ ಆಯಾಗೆ ಗಂಭೀರ ಸುಟ್ಟ ಗಾಯಗಳನ್ನು ನೋಡಿದ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ನಾಲ್ವರನ್ನು #ಹೆಚ್ಚಿನ #ಚಿಕಿತ್ಸೆಗಾಗಿ ಬೆಳಗಾವಿ #ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ವಿಷಯ ತಿಳಿದು ಬಂದಿದೆ.
Leave a Comment