ಹಳಿಯಾಳ:- ತಾಲೂಕಿನ ಶಿವಪುರ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮಾರುತಿ ದೇವಸ್ಥಾನಕ್ಕೆ ಶಾಸಕ ಆರ್.ವಿ.ದೇಶಪಾಂಡೆ ಅವರ ಪುತ್ರ ಪ್ರಶಾಂತ ದೇಶಪಾಂಡೆ ಅವರು 3 ಲಕ್ಷ ರೂ.ಗಳ ಧನ ಸಹಾಯ ಮಾಡಿದ್ದಾರೆ.
ಹಳಿಯಾಳದ ವಿ.ಆರ್.ದೇಶಪಾಂಡೆ ಮೇಮೋರಿಯಲ್ ಟ್ರಸ್ಟ್ ಧರ್ಮದರ್ಶಿಯಾಗಿರುವ ಅವರು ಇತ್ತೀಚೆಗೆ ಶಿವಪುರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ದೇವಸ್ಥಾನ ನಿರ್ಮಾಣಕ್ಕೆ ಧನ ಸಹಾಯ ಮಾಡುವಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅವರು 3 ಲಕ್ಷ ರೂ.ಗಳ ಧನ ಸಹಾಯದ ಚೆಕ್ ಅನ್ನು ನೀಡಿದ್ದಾರೆ. ದೇಶಪಾಂಡೆ ರುಡಸೆಟ್ನ ಸಿಬ್ಬಂದಿ ಮಾನಗೆ, ಮುರ್ಕವಾಡದ ಪ್ರಮುಖ ಸಂಜು ಮಿಶ್ಯಾಳೆ ಅವರು ಶಿವಪುರ ಗ್ರಾಮಸ್ಥರಿಗೆ ಇಂದು ಚೆಕ್ ಹಸ್ತಾಂತರಿಸಿದರು.
Leave a Comment