
ಜೋಯಿಡಾ ;
ತಾಲೂಕಿನ ಗಣೇಶಗುಡಿ ಕರ್ನಾಟಕ ಪವರ್ ಕಾರ್ಪೋರೇಷನ್ ಶಾಲೆಯ ಶಿಕ್ಷಕ ಎಸ್.ಆರ್. ನಾಯ್ಕ ವರ್ತನೆ ಸರಿಯಿಲ್ಲವೆಂದು ಪಾಲಕರ ದೂರಿನ ಅನ್ವಯ ದಲಿತ ಸಂಘರ್ಷ ಸಮತಿ ಕಾದ್ರೋಳ್ಳಿ ಬಣದಿಂದ ಜಿಲ್ಲಾಧಿಕಾರಿ ಹಾಗೂ ನಿಗಮದ ಎಮ್.ಡಿ ಬೆಂಗಳೂರು ರವರಿಗೆ ದೂರು ನೀಡಲಾಗಿತ್ತು. ಆದರೆ ಕೆಲವರು ದೂರು ನೀಡಿದ ಡಿ.ಎಸ್.ಎಸ್ ಸಂಘಟನೆಯ ಬಗ್ಗೆ ಇಲ್ಲ ಸಲ್ಲದ ಮಾತುಗಲನ್ನು ಆಡಿದ್ದು ಸಮಂಜಸವಲ್ಲ. ಈ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ಚಂದ್ರಕಾಂತ ಕಾದ್ರೊಳ್ಳಿ ಹೇಳಿದರು.
ಅವರು ಜೋಯಡಾದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತಿದ್ದರು. ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಬಗ್ಗೆ ಗೌರವವಿದೆ. ಯಾವತ್ತೂ ಉತ್ತಮ ಶಿಕ್ಷಕರನ್ನು ಸಂಘಟನೆ ಬೆಂಬಲಿಸುತ್ತದೆ. ಆದರೆ ಗಣೇಶಗುಡಿಯ ಶಿಕ್ಷಕ ಎಸ್.ಆರ್.ನಾಯ್ಕರ ವರ್ತನೆ ಸರಿಯಿಲ್ಲ. ಇವರು ಕೆಲವರನ್ನು ಮುಂದೆ ಮಾಡಿ ರಾಜಕೀಯ ಮಾಡಿಕೊಂಡು ಕಳೆದ 27 ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆಯಲ್ಲಿದ್ದ ಬಗ್ಗೆ ಪಾಲಕರಿಂದ ದೂರು ಇದ್ದ ಹಿನ್ನಲೆಯಲ್ಲಿ ದ.ಸಂ.ಸಮಿತಿಯಿಂದ ಜಿಲ್ಲಾಧಿಕಾರಿ ಹಾಗೂ ಎಮ್.ಡಿ.ಬೆಂಗಳೂರು ರವಿಗೆ ಕ್ರಮಕ್ಕೆ ಅಗ್ರಹಿಸಿ ದೂರು ನೀಡಲಾಗಿತ್ತು. ಆದರೆ ಕೆಲವರು ದ.ಸಂ.ಸಮಿತಿಯ ಬಗ್ಗೆ ಆಪಾದನೆ ಮಾಡಿದ್ದು ಇದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ ಎಂದರು.
ಡಿಸೆಂಬರ್ 17 ರಂದು ಖುದ್ದ ಬೆಂಗಳೂರಿಗೆ ತೆರಳಿ ಈ ಶಿಕ್ಷಕರ ವರ್ತನೆಯ ಬಗ್ಗೆ ನಿರ್ದೆಶಕರಿಗೆ ದಸಸಮಿತಿಯಿಂದ ದೂರು ನೀಡಲಾಗುವುದು. ಸಮಾಜಿಕ ಕಳಕಳಿಯನ್ನು ಹೊಂದಿದ ಸಮಿತಿಯ ಬಗ್ಗೆ ಯಾರು ಆಪಾದನೆ ಮಾಡಬಾರದೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಗಿರೀಶ ಎನ್.ಎಸ್, ಜಿಲ್ಲಾ ಕಾರ್ಯದರ್ಶಿ ಅಶೋಕ ಕಾಂಬಳೆ, ಜಿಲ್ಲಾ ಉಪಾದ್ಯಕ್ಷ ಗೋವಿಂದ ಮುನಿಸ್ವಾಮಿ, ಸುಮನಾ ಹರಿಜನ್ ಮುಂತಾದವರು ಇದ್ದರು.

Leave a Comment