
ಪ್ರಖರ ವಿಚಾರವಾದಿ, ಮೌಲಿಕ ಸಾಹಿತಿ, ಮಹಾನ್ ಚಿಂತಕರು ನಮ್ಮೂರಿನ ಗೌರೀಶ ಕಾಯ್ಕಿಣಿಯವರು, ಇವರ ಪತ್ನಿ ಶಾಂತಾ ಕಾಯ್ಕಿಣಿ ಇವರ ಸುಪುತ್ರ ಸಾಹಿತಿ, ಕಥೆಗಾರ, ಲೇಖಕರು ಆದ ಡಾ.ಜಯಂತ ಕಾಯ್ಕಿಣಿಯವರು.ಡಿಸೆಂಬರ್ 25 ರಂದು ಜಯಂತರು ತನ್ನ ತಾಯಿ ಶಾಂತಮ್ಮಳನ್ನು ಕಳೆದು ಕೊಂಡ ದಿನವಿದು, ಜಯಂತರು ಗೋಕರ್ಣಕ್ಕೆ ಬಂದಿರುವ ವಿಷಯವನ್ನರಿತು ನಾನು ಜಯಂತ ಕಾಯ್ಕಿಣಿಯವರನ್ನು ಮಾತನಾಡಿಸಲು ಅವರ ಮನೆಗೆ ಭೇಟಿ ನೀಡಿ ಜಯಂತರ ಬಳಿ “ಈಗ ಗೋಕರ್ಣಕ್ಕೆ ಕಳೆ ಬಂದತ್ತಿದೆ” ಎಂದೆ ಆಗ ಜಯಂತರು ನನ್ನ ಆತ್ಮೀಯವಾಗಿ ಸ್ವಾಗತಿಸಿ ಬಾರೋ ಕುಳಿತಿಕೋ ಹೇಗಿದ್ದೀಯಾ ಅಂತೆಲ್ಲಾ ನನ್ನ ಯೋಗ ಕ್ಷೇಮವನ್ನು ವಿಚಾರಿಸಿದರು.
ಮಮ್ಮಿಯನೆನಪಿನ ಬುತ್ತಿಯನ್ನು ತೆರೆದಿಟ್ಟರು. ಮನೆಯಲ್ಲೆ ತೆಗೆಯುತಿದ್ದ ಕಲವೃಕ್ಷದ ಎಳ್ನೀರನ್ನು ನೀಡಿ, ನನಗೆ ಕೆಲವೊಂದು ಸಾಹಿತ್ಯದ ರುಚಿಯ ಸಲಹೆಗಳನ್ನು ನೀಡಿದರು.

ಡಾ. ಗೌರೀಶ ಕಾಯ್ಕಿಣಿಯವರ ಮಾರ್ಗವಾಗಿ ಮುಖ್ಯ ಕಡಲತೀರಕ್ಜೆ ಚಲಿಸುತ್ತಿದ್ದ ಪ್ರವಾಸಿಗರು ಜಯಂತರನ್ನು ಕಂಡು “ಸರ್ ನಮಸ್ಕಾರ” ತುಂಬಾ ಚೆನ್ನಾಗಿ ಸಿನೆಮಾ ಹಾಡನ್ನು ಬರೆದಿದ್ದಿರಿ ಅಂತೆಲ್ಲಾ ಮಾತನಾಡಿಸಿ, ಪರಿಚಯಿಸಿಕೊಂಡು ಸಾಗಿದರು.
ಈ ಸಂದರ್ಭದಲ್ಲಿ ಕಾಯ್ಕಿಣಿಯವರ ಸ್ನೇಹಿತರಾದ ಇಲ್ಲಿಯ ಸಮೀಪದ ಊರಿನವರಾದ ಅಚುವೆಯ ಪಾಲ್ಗುಣ ಗೌಡ ಹಾಗೂ ಮೋಹನ ಗೌಡ ಅವರು ಸಹ ಕಾಯ್ಕಿಣಿಮನೆಗೆ ಆಗಮಿಸಿದರು. ಇವರೊಂದಿಗೂ ಜಯಂತರು ಅಮ್ಮನ ಸವಿ ನೆನಪನ್ನು ಹಂಚಿಕೊಂಡು, ಸುಮಾರು 2-3 ತಾಸುಗಳ ಕಾಲ ಕಳೆದು ನಮ್ಮನೆಲ್ಲಾ ಮನರಂಜಿಸಿ, ಜೀವನದ ಒಳ್ಳೆಯ ಹಾದಿಗಳನ್ನು ತಿಳಿಸುತ್ತಾ, ನೀವೆಲ್ಲರೂ ಮನೆಗೆ ಬಂದಿದ್ದು ತುಂಬಾ ಸಂತೋಷ ನಮ್ಮಮ್ಮ ಶಾಂತಮ್ಮ ಖುಷಿಪಡುತ್ತಾಳೆ ಎಂದು ನುಡಿದರು..




Leave a Comment