• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ತಾಲೂಕಿನ‌ ಸಹಕಾರಿ ಸಂಘ(ಸೊಸೈಟಿ) ಗಳಿಗೆ ನಡೆದ‌‌ ಚುನಾವಣೆ ಶಾಂತಿಯುತವಾಗಿ ಸಂಪನ್ನ.

January 19, 2020 by Yogaraj SK Leave a Comment

 haliyal SOCIETY ELECTION

ಹಳಿಯಾಳ:-

ಹಳಿಯಾಳದ ಆರ್‍ಎಸ್ ಎಸ್ ಬ್ಯಾಂಕ್ ಹಾಗೂ ಬೆಳವಟಗಿಯ ಬಸವೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಣ್ಣ-ಪುಟ್ಟ ಮಾತಿನ ಚಕಮಕಿ ನಡೆದಿದ್ದರೇ ಹೊರತು ಪಡಿಸಿದರೇ ತಾಲೂಕಿನ 11 ಸಹಕಾರಿ ಸಂಘ (ಸೊಸೈಟಿ)ಗಳಿಗೆ ಶನಿವಾರ ನಡೆದ ಚುನಾವಣೆ ಶಾಂತಿಯುತವಾಗಿ ಸಂಪನ್ನಗೊಂಡಿದೆ.
ಕೆಡಿಸಿಸಿ ಬ್ಯಾಂಕ್‍ಗೆ ನಿರ್ದೇಶಕರಾಗಿ ಆಯ್ಕೆಯಾಗಲು ಹಳಿಯಾಳದ ರೈತರ ಸೇವಾ ಸಹಕಾರಿ ಬ್ಯಾಂಕ್(ಆರ್‍ಎಸ್‍ಎಸ್) ಚುನಾವಣೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಸ್ಪರ್ದಿಸುವುದರಿಂದ ಈ ಬ್ಯಾಂಕ್ ಚುನಾವಣೆ ಅತ್ಯಂತ ತುರುಸಿನಿಂದ ಕೂಡಿರುತ್ತೇ ಅಲ್ಲದೇ ಇದು ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಪ್ರತಿಷ್ಠೆಯ ಕಣವಾಗಿ ತಾಲೂಕಿನ ಜನತೆಯ ಲಕ್ಷ್ಯವೆಲ್ಲ ಇದೆ ಸೊಸೈಟಿಯ ಬೆಳವಣಿಗೆಯ ಮೇಲಿರುತ್ತದೆ.

watermarked IMG 20200119 WA0006


ಈ ಬಾರಿ ಸಹಕಾರಿ ಸಂಘಗಳ ಕಾಯ್ದೆಯನ್ವಯ ಸಾವಿರಾರು ಶೇರುದಾರ ರೈತ ಸದಸ್ಯರು ತಮ್ಮ ಮತದಾನ ಹಕ್ಕು ಕಳೆದುಕೊಂಡಿದ್ದರಿಂದ ಕಾಂಗ್ರೇಸ್ ಹಾಗೂ ಬಿಜೆಪಿಯವರು ಹೈಕೊರ್ಟ ಮೊರೆ ಹೊಗಿದ್ದರಿಂದ ಕೈಬಿಟ್ಟ ಕೆಲವು ಮತದಾರರಿಗೆ ಮಾತ್ರ ಮತದಾನದ ಹಕ್ಕು ನೀಡಿ ಹೈಕೊರ್ಟ ತೀರ್ಪು ನೀಡಿತು.
ಹಳಿಯಾಳ ಆರ್‍ಎಸ್‍ಎಸ್ ಬ್ಯಾಂಕ್ ಸಾಲಗಾರರ ಕ್ಷೇತ್ರ ವಾರ್ಡ ನಂ1ರಲ್ಲಿ ಮೊದಲು 558 ಮತಗಳು ಇದ್ದವು ಬಳಿಕ ಹೈಕೊರ್ಟ ಆದೇಶದಿಂದ 119,149,188 ಹೀಗೆ 456 ಹೊಸ ಮತಗಳು, ಹವಗಿ ಕ್ಷೇತ್ರಕ್ಕೆ 176 ಮೊದಲು ಬಳಿಕ 54, ಕರ್ಲಕಟ್ಟಾ ಕ್ಷೇತ್ರಕ್ಕೆ ಮೊದಲು 141 ಬಳಿಕ 195 ಹೊಸದಾಗಿ, ಸಾಲಗಾರರಲ್ಲದ ಕ್ಷೇತ್ರ 163 ಮೊದಲು ಬಳಿಕ 171 ಆದ ಬಳಿಕ ಹಳಿಯಾಳ ಕ್ಷೇತ್ರಕ್ಕೆ ಮೊದಲು ಇದ್ದ 1038 ಮತದಾರರಲ್ಲಿ ಕೈಬಿಟ್ಟ 876 ಮತದಾರರು ಸೇರ್ಪಡೆಯಾಗಿ 1914 ಮತದಾರರ ಹೊಸ ಯಾದಿ ಶುಕ್ರವಾರ ಬೆಳಗಿನ ಜಾವದ ವರೆಗೆ ತಯಾರಿ ಮಾಡಲಾಯಿತು.

haliyal SOCIETY ELECTION


ನ್ಯಾಯಾಲಯದಿಂದ ಆದೇಶ ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ಇರುವುದರಿಂದ ಚುನಾವಣಾಧಿಕಾರಿಗಳು ಶನಿವಾರ ಬೆಳಗಿನ ಜಾವ 4 ಗಂಟೆಯವರೆಗೆ ಅನರ್ಹರ ಪಟ್ಟಿ ಹಾಗೂ ನ್ಯಾಯಾಲಯದಿಂದ ಮತದಾನದ ಹಕ್ಕು ಪಡೆದ ಬಂದವರ ಪಟ್ಟಿಯನ್ನು ಪರಿಶೀಲಿಸಿ ಎರಡರಲ್ಲೂ ತಾಳೆ ಮಾಡಿ ಗಣನೆಗೆ ತೆಗೆದುಕೊಂಡು ಮತಗಟ್ಟೆವಾರು ಮತದಾನಕ್ಕೆ ವಿಂಗಡಿಸಲಾಯಿತು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ಹಳಿಯಾಳದ ಆರ್‍ಎಸ್‍ಬ್ಯಾಂಕ್ ಮತಗಟ್ಟೆ ಎದುರು ಮತದಾರರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನದ ವಿಚಾರವಾಗಿ ವಿಪ ಸದಸ್ಯರು ಹಾಗೂ ಚುನಾವಣಾ ಅಭ್ಯರ್ಥಿಯು ಆಗಿರುವ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಸಮ್ಮುಖದಲ್ಲಿಯೇ ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಭಾರಿ ಮಾತಿನ ಚಕಮಕಿ, ವಾದ ವಿವಾದ ನಡೆಯಿತು. ಬಳಿಕ ಪೋಲಿಸರು ಮಧ್ಯ ಪ್ರವೇಶಿಸಿ ಹದಗೆಡುತ್ತಿದ್ದ ವಾತಾವರಣವನ್ನು ತಹಬದಿಗೆ ತಂದರು.
ಇನ್ನೂ ತಾಲೂಕಿನ ಬೆಳವಟಗಿಯ ಬಸವೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕೂಡ ಕೊರ್ಟನಿಂದ ಮತದಾನದ ಹಕ್ಕು ಪಡೆದು ಬಂದು ಮತದಾನಕ್ಕೆ ಬಂದವರ ಯಾದಿಯ ಕುರಿತು ಗೊಂದಲ ಉಂಟಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ. ಬಾಕಿ ಉಳಿದಂತೆ ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ.
ಆರ್‍ಎಸ್‍ಎಸ್ ಬ್ಯಾಂಕ್‍ನ ಮತಗಟ್ಟೆಯಲ್ಲಿ ಚುನಾವಣಾ ಅಭ್ಯರ್ಥಿಯು ಆಗಿರುವ ವಿಪ ಸದಸ್ಯ ಘೊಟ್ನೆಕರ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ಅವರು ಅಂಜುಮನ್ ಶಾಲೆಯಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಶನಿವಾರ ಸಾಯಂಕಾಲ ಮತದಾನ ಪ್ರಕ್ರಿಯೇ ಮುಗಿದಿದ್ದು ಇದೆ ದಿನ ರಾತ್ರಿಯವರೆಗೆ ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

 haliyal SOCIETY ELECTION

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಕೆಡಿಸಿಸಿ ಬ್ಯಾಂಕ್‍ಗೆ ನಿರ್ದೇಶಕ, ಗಳಿಗೆ, ಚುನಾವಣೆ ಶಾಂತಿಯುತವಾಗಿ, ನಡೆದ‌‌, ಬೆಳವಟಗಿಯ ಬಸವೇಶ್ವರ, ಶೇರುದಾರ ರೈತ, ಸಂಪನ್ನ, ಸಹಕಾರಿ ಬ್ಯಾಂಕ್ ಚುನಾವಣೆ, ಸೊಸೈಟಿ, ಹಳಿಯಾಳ ತಾಲೂಕಿನ‌ ಸಹಕಾರಿ ಸಂಘ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...