
ಹಳಿಯಾಳ:- ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಂದಿರ, ಪ್ರಾರ್ಥನಾ ಮಂದಿರ ಹಾಗೂ ಮನೆ ಮನೆಗೆ ತೆರಳಿ ಕರಪತ್ರ
ಹಂಚುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ
ಹಳಿಯಾಳ ಬಿಜೆಪಿಯಿಂದ ಚಾಲನೆ ನೀಡಲಾಯಿತು.
ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಸಿಎಬಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಬಿಜೆಪಿ ಪಕ್ಷದ ಅಧ್ಯಕ್ಷರು ಗಣಪತಿ ಕರಂಜೆಕರ್, ಹಿರಿಯ ಮುಖಂಡ ಮಂಗೇಶ್ ದೇಶಪಾಂಡೆ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರು ಕಮ್ಮಾರ, ಉದಯ ಹೂಲಿ, ಸಂಗೀತಾ ಜಾಧವ, ಶಾಂತಾ ಹಿರೇಕರ, ರೂಪಾ ಗಿರಿ, ಪ್ರಧಾನ ಕಾರ್ಯದರ್ಶಿ ಅನಿಲ ಮುತ್ನಾಳ, ವಾಸು ಪೂಜಾರಿ, ಉಮೇಶ ದೇಶಪಾಂಡೆ, ಶಿವಾಜಿ ನರಸಾನಿ, ವಿಜಯ ಬೋಬಾಟಿ, ಸಂತಾನ ಸಾವಂತ, ಯಲ್ಲಪ್ಪಾ ಹೊನ್ನೊಜಿ, ಹನುಮಂತ ಚಲವಾದಿ, ಜಯಲಕ್ಷ್ಮಿ ಚವ್ವಾಣ, ವಿಲಾಸ ಯಡವಿ, ಮಂಜುನಾಥ ಪಂಡಿತ ಇದ್ದರು.

Leave a Comment