

ಹಳಿಯಾಳ: ಸಿದ್ದಾರೂಢ ಪರಂಪರೆಯ ಮಠವಾಗಿರುವ ಹಳಿಯಾಳ ತಾಲೂಕಿನ ಕೆ.ಕೆ. ಹಳ್ಳಿಯ ಶ್ರೀಗುರು ನಿತ್ಯಾನಂದ ಆಶ್ರಮದ ಜಾತ್ರಾ ಮಹೋತ್ಸವದ ಅಂಗವಾಗಿ ಆಶ್ರಮದ ಗುರುಗಳಾಗಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ಅವರನ್ನು ರಥದಲ್ಲಿ ಕುಳ್ಳಿರಿಸಿ ಸಾವಿರಾರು ಭಕ್ತರು ರಥವನ್ನು ಎಳೆದರು. ಸ್ವಾಮೀಜಿಯವರನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸುವುದು ಇಲ್ಲಿಯ ವಿಶೇಷತೆಯಾಗಿದೆ.
ಪ್ರತಿವರ್ಷದಂತೆ ಶಿವರಾತ್ರಿಯ ನಂತರ ಈ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸದ್ಗುರು ನಿತ್ಯಾನಂದ ಮಹಾಸ್ವಾಮಿಜಿಯವರ 35 ಪುಣ್ಯಾರಾಧನೆ ಮಹೋತ್ಸವ ಹಾಗೂ 40ನೇಯ ವೇದಾಂತ ಮಹಸಾಸಭಾ ಕಾರ್ಯಕ್ರಮವು ಸವದತ್ತಿಯ ಡಾ.ಶಿವಾನಂದ ಭಾರತಿ ಸ್ವಾಮಿಗಳ ಮಹಾ ಸನ್ನಿದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸದ್ಗುರು ವಾಸುದೇವಾನಂದ ಮಹಾಸ್ವಾಮಿಗಳು, ವಿರಕ್ತ ಮಠ ಕಟ್ನೂರು ತೀರ್ಥದ ಚನ್ನಬಸವ ದೇಶಿಕೇಂದ್ರ, ಸ್ವಾಮಿ, ಶಿವರಾಮ ಅವಧೂತ ಆಶ್ರಮಕೂಟದ ಹಂಪಿಯ ವಿದ್ಯಾನಂದ ಭಾರತಿ ಸ್ವಾಮಿಗಳು, ಜಡೆಸಿದ್ದಯೋಗಿಂದ್ರಮಠ ಹುಬ್ಬಳ್ಳಿಯ ರಾಮಾನಂದ ಭಾರಿತಿಸ್ವಾಮಿಗಳು, ಬಾಗಲಕೋಟ, ದಾವಣಗೇರಿ, ಬೆಂಗಳೂರು, ಪುಣೆ, ಕೊಡಗು, ಹೀಗೆ ಹಲವಾರು ಕ್ಷೇತ್ರದ ಮಹಾಸ್ವಾಮಿಗಳು ಪಾಲ್ಗೊಂಡು ವಿವಿಧ ಕಾರ್ಯಕ್ರಮಗಳ ಸಾನಿಧ್ಯವಹಿಸಿದ್ದರು.


ಮಾರ್ಚ 2 ರಿಂದ ದಿ. 6 ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ಮಹಾ ರುದ್ರಾಭಿಷೇಕ, ಧ್ವಜಾರೋಹಣ, ವೇದಾಂತ ಮಹಾಸಭೆ, ಪಲ್ಲಕ್ಕಿ ಉತ್ಸವ, ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಹಾಗೂ ಪ್ರತಿದಿನ ಪ್ರಾತಃಕಾಲ ಭಗವತ ಗೀತಾ ಪಾರಾಯಣ ನಡೆದವು.ಈ ಕಾರ್ಯಕ್ರಮಗಳಿಗೆ ಕೆ.ಕೆ.ಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ “ಶಿವಾಯ ನಮಃ” ಘೋಷಣೆಗಳೊಂದಿಗೆ ರಥವನ್ನು ಎಳೆದರು. ವಿಜೃಂಭಣೆ ಹಾಗೂ ಶೃದ್ದಾಭಕ್ತಿಯಿಂದ ಜಾತ್ರಾ ಮಹೋತ್ಸವ ಶಾಂತಿಯುತವಾಗಿ ಸಂಪನ್ನಗೊಂಡಿತು.
ಶುಕ್ರವಾರ ರಥೋತ್ಸವ ಹಿನ್ನೆಲೆ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಬಿಜೆಪಿ ಮುಖಂಡರೊಂದಿಗೆ ಕೆಕೆ ಹಳ್ಳಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮಿಜಿಗಳ ದರ್ಶನ ಪಡೆದರು.

Leave a Comment