
ಹಳಿಯಾಳ:- ಕಾನೂನಿನ ಚೌಕಟ್ಟು ಮೀರಿ ಬೇನಾಮಿ ಹಣ ಗಳಿಸಲು ಅಕ್ರಮ ಚಟುವಟಿಕೆಗಳಿಗೆ ಮುಂದಾಗಿ, ಕಾನೂನು ಉಲ್ಲಂಘಿಸಿದರೇ ಯಾರಿಗೂ ಸುಮ್ಮನೆ ಬಿಡುವುದಿಲ್ಲ ಅಂತಹವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹಳಿಯಾಳ ಸಿಪಿಐ ಲೋಕಾಪುರ ಬಿಎಸ್ ಖಡಕ್ ಎಚ್ಚರಿಕೆ ನೀಡಿದರು.
ಇಲ್ಲಿಯ ಪೋಲಿಸ್ ಠಾಣೆಯಲ್ಲಿ ಹಳಿಯಾಳದ ಲಾಡ್ಜ್, ಮಧ್ಯದಂಗಡಿಗಳು, ಹೊಟೆಲ್ ಹಾಗೂ ರಿಕ್ರಿಯೇಷನ್ ಕ್ಲಬ್ ಮಾಲಿಕರನ್ನು ಕರೆದು ಸಭೆ ನಡೆಸಿದ ಅವರು ಮಂಗಳವಾರ ಲಾಡ್ಜ್ ಮೇಲೆ ದಾಳಿ ಮಾಡಿದಾಗ ಕಂಡ ದೃಶ್ಯ ನೀಜಕ್ಕೂ ಆಘಾತಕಾರಿ ಸಂಗತಿಯಾಗಿದೆ ಇದನ್ನು ಇಲಾಖೆ ತೀವೃವಾಗಿ ಖಂಡಿಸುತ್ತದೆ ಎಂದರು.
ಬಾರ್,ಲಾಡ್ಜ್, ರಿಕ್ರಿಯೇಷನ್ ಕ್ಲಬ್ಗಳು ಸರ್ಕಾರದ ನಿಯಮಾವಳಿಯಂತೆ ಸಮಯ ಪರಿಪಾಲನೆ ಮಾಡಬೇಕು. ಎಲ್ಲರೂ ಸಿಸಿ ಕ್ಯಾಮೇರಾ ಅಳವಡಿಸಬೇಕು. ಲಾಡ್ಜ್ಗಳವರು ಅಪ್ರಾಪ್ತರಿಗೆ ಹಾಗೂ ಕಾಲೇಜ್ ಯುವಕ-ಯುವತಿಯರಿಗೆ ಹಾಗೂ ಅಪರಿಚಿತರಿಗೆ ದಾಖಲೆ ಇಲ್ಲದೇ ರೂಮ ಭಾಡಿಗೆ ನೀಡಬಾರದು.
ಎಲ್ಲರಿಂದ ಕಡ್ಡಾಯವಾಗಿ ಐಡಿ ದಾಖಲೆ ಪಡೆಯಬೇಕು ಈ ಬಗ್ಗೆ ರೆಜಿಸ್ಟ್ರ್ ಹೊಂದಿರಬೇಕು. ಇದನ್ನು ಪ್ರತಿದಿನ ಪೋಲಿಸ್ ಠಾಣೆಗೆ ತಂದು ಮಾಹಿತಿ ನೀಡಬೇಕು. ಇಲ್ಲಿ ಮಾಂಸ ದಂಧೆ ನಡೆಸಲು ಮುಂದಾಗಿದ್ದು ಕಂಡು ಬಂದರೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಾರ್, ಲಾಡ್ಜ್ ಮಾಲಿಕರನ್ನು ತರಾಟೆಗೆ ತೆಗೆದುಕೊಂಡ ಅವರು ವನಶ್ರೀ ಲಾಡ್ಜ್ ಬಿಲ್ಡಿಂಗ್ ಮಾಲೀಕ ಎನ್.ಎಚ್.ಪಾಟೀಲ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಪಿಐ ಅವರು ಭಾಡಿಗೆ ನೀಡುವವರು ಅಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಬೇಕು. ದುಡ್ಡಿನ ಆಸೆಗಾಗಿ ಸುಮ್ಮನೆ ಕುಳಿತರೇ ಅಕ್ರಮಕ್ಕೆ ನಿಮ್ಮ ಸಹಕಾರವು ಇದೆ ಎಂದರ್ಥ ನಿಮ್ಮ ವಿರುದ್ದವು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಿಎಸ್ಐ ಯಲ್ಲಾಲಿಂಗ ಕೂನ್ನುರ, ಕ್ರೈಂ ಪಿಎಸ್ಐ ರಾಜಕುಮಾರ ಇದ್ದರು.

Leave a Comment