• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ‌ ಕಸಾಯಿಖಾನೆ ತೆರವುಗೊಳಿಸುವಂತೆ ಆಗ್ರಹ

March 18, 2020 by Yogaraj SK Leave a Comment

Kasayikhane submitted memorandum

ಹಳಿಯಾಳ:- ದಶಕಗಳಿಂದ ಹಳಿಯಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಕಸಾಯಿಖಾನೆಯನ್ನು ಶೀಘ್ರವೆ ತೆರವುಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಯವರು, ಸಾರ್ಜಜನಿಕರು ತಾಲೂಕಾಡಳಿತ ಹಾಗೂ ಪುರಸಭೆಗೆ ಲಿಖಿತ ಮನವಿ ಸಲ್ಲಿಸಿದರು.
ಪಟ್ಟಣದ ಕಸಾಯಿಖಾನೆ ಬಾಧಿತ ಪ್ರದೇಶದ ಮೇದಾರಗಲ್ಲಿಯ ಜನತೆ, ಕರ್ನಾಟಕ ರಕ್ಷಣಾ ವೇದಿಕೆ, ವಿಶ್ವ ಹಿಂದೂ ಪರಿಷದ್ ಭಜರಂಗದಳ, ಮೇದಾರ ಸಮಾಜ, ಗೊಂಧಳಿ ಸಮಾಜ ಸೇರಿದಂತೆ ಅನೇಕರು ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಹಶೀಲ್ದಾರ್ ವಿದ್ಯಾಧರ ಗುಳೆಗುಳೆ ಅವರಿಗೆ ಬಳಿಕ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಹಾಗೂ ಹಳಿಯಾಳ ಕ್ರೈಂ ಪಿಎಸ್‍ಐ ರಾಜಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೊರೊನಾ(ಕೋವಿಡ್-19) ಮಾರಕ ಸಾಂಕ್ರಾಮಿಕ ರೋಗ ಸೇರಿದಂತೆ ಮಲೆರಿಯಾ, ಕಾಲರಾ, ಡೆಂಗ್ಯೂ, ಚಿಕನ್ ಗುನ್ಯಾ, ಹಂದಿಜ್ವರ ಸೇರಿದಂತೆ ಸಾಕಷ್ಟು ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದು ಕೇಳಿ ಬರುತ್ತಿದೆ. ಆದರೇ ರೋಗರುಜಿನಗಳ ಹರಡುವ ತಾಣವಾಗಿರುವ ಅನಧಿಕೃತ ಕಸಾಯಿಖಾನೆ ಮಾತ್ರ ತನ್ನ ಕಾರ್ಯವನ್ನು ಯಾವುದೇ ಆತಂಕವಿಲ್ಲದೇ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಕಲ್ಮಶ, ಗಬ್ಬು ದುರ್ವಾಸನೆಯ ಬಿಡಾಗಿರುವ ಇಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಇಲ್ಲಿಯ ಸುತ್ತಮುತ್ತಲ ಪರಿಸರದಲ್ಲಿ ವಾಸಿಸುವುದೇ ಕಷ್ಟವಾಗಿದೆ ಎಂದಿರುವ ಜನತೆ ಈ ಬಗ್ಗೆ ಹಿಂದೆಯೂ ಹತ್ತಾರು ಬಾರಿ ಪ್ರತಿಭಟನೆಗಳನ್ನು ಮಾಡಿ ಲಿಖಿತ ಮನವಿಗಳನ್ನು ಸಲ್ಲಿಸಲಾಗಿದೆ. ಆದರೂ ಕೂಡ ಈವರೆಗೆ ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂಬುದು ತೀರಾ ಬೇಸರವನ್ನುಂಟು ಮಾಡಿದೆ ಎಂದಿದ್ದಾರೆ.

IMG 20200316 WA0100


ಈಗಲಾದರೂ ಈ ಅಕ್ರಮ ಕಸಾಯಿಖಾನೆಯನ್ನು ತೆರವುಗೊಳಿಸಿ ಇಲ್ಲಿ ಸ್ವಚ್ಚತೆಯನ್ನು ಕಾಪಡುವಲ್ಲಿ ಪುರಸಭೆ ಮುಂದಾಗಬೇಕು. ಒಂದಾನುವೇಳೆ ಈಗಲೂ ಕಸಾಯಿಖಾನೆ ತೆರವುಗೊಳಿಸದೆ ಇದ್ದರೆ ಹಾಗೂ ಈ ಭಾಗದಲ್ಲಿ ಯಾರಿಗಾದರು ಸಾಂಕ್ರಾಮಿಕ ರೋಗ ತಗುಲಿ ಪ್ರಾಣಕ್ಕೆ ಸಮಸ್ಯೆಯಾದರೇ ಸಂಬಂಧಪಟ್ಟ ಇಲಾಖೆಯವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕೊಂಚ ಸಿಟ್ಟಿನಿಂದಲೇ ಕಸಾಯಿ ಖಾನೆ ನಡೆಸುವವರದ್ದು ದಂಧೆಯಾಗಿದೆ ಅವರು ಹೊಟ್ಟೆಪಾಡಿಗಾಗಿ ದುಡಿಯುತ್ತಾರೆ. ಅಲ್ಲಿ ಪರಿಶೀಲನೆ ಮಾಡುತ್ತೇವೆ ಸ್ವಚ್ಚತೆಯನ್ನು ಕಾಪಾಡಲು ಆದೇಶಿಸುತ್ತೇವೆ. ಅಲ್ಲಿ ತಪ್ಪು ನಡೆಯುತ್ತಿದ್ದರೇ ಕ್ರಮ ಜರುಗಿಸುತ್ತೇವೆ ಎಂದು ಕೋಪದಲ್ಲೇ ಹೇಳಿದ ಅವರು ಮುಂದಿನ 2-3 ದಿನಗಳಲ್ಲಿ ಪುರಸಭೆ ಅಧಿಕಾರಿಯೊಂದಿಗೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಮಾತನಾಡಿ ಕಸಾಯಿಖಾನೆಯನ್ನು ನೂತನ ಕಾರಾಗೃಹದ ಬಳಿ ಈಗಾಗಲೇ ಗುರುತಿಸಿರುವ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಇವರ ಸ್ಥಳಾಂತರ ಆಗುವವರೆಗೆ ಅಲ್ಲಿಯೇ ಕಸಾಯಿಖಾನೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಈ ಪ್ರದೇದ ರಹವಾಸಿ ಚಂದ್ರಕಾಂತ ದುರ್ವೆ ಮಾಧ್ಯಮದವರೊಂದಿಗೆ ಮಾತನಾಡಿ ನಮ್ಮ ಮನೆ ಹಾಗೂ ಅಕ್ಕಪಕ್ಕದ ಮನೆಯವರೆಲ್ಲ ಈ ಕಸಾಯಿಖಾನೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಮನೆಯಲ್ಲಿ ಎಲ್ಲರು ಸಾಕಷ್ಟು ಅಲರ್ಜಿ, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ನೂರಾರು ಬಾರಿ ಮನವಿ ಸಲ್ಲಿಸುವುದೇ ಆಗಿದೆ ಆದರೇ ಕ್ರಮಗಳೇನು ಈವರೆಗೆ ಆಗಿಲ್ಲ ಎಂದ ದುರ್ವೆ ಆಸ್ಪತ್ರೆ ಅಲೆದಾಟದ ದಾಖಲೆ ನೀಡುವುದಾಗಿ ಹೇಳಿದರು.
ಮನವಿ ಸಲ್ಲಿಸುವಾಗ ಭಜರಂಗದಳ ಅಧ್ಯಕ್ಷ ಸರ್ವೇಶ ಕಾಂಡೊಳಕರ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಚಂದ್ರಕಾಂತ ಗೊಂಧಳಿ, ಪ್ರಮುಖರಾದ ಶಿವರಾಯಪ್ಪ ನೆಸರಗಿ, ಪರಶುರಾಮ ಶಾಪುರಕರ, ಚೆನ್ನಪ್ಪಾ ಮಡ್ಡಿ, ಅಶೋಕ ಮಡ್ಡಿ, ವಿಶ್ವನಾಥ ಬುದಪ್ಪನವರ, ವಿನಾಯಕ ಮಡ್ಡಿ, ಸರೊಜಾ, ರೇಣುಕಾ ಬುದಪ್ಪನವರ, ಯಲ್ಲವ್ವಾ ಮೇದಾರ ಮೊದಲಾದವರು ಇದ್ದರು.

Kasayikhane submitted memorandum

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News, Other

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...