ಹಳಿಯಾಳ:- ದೆಹಲಿಯಲ್ಲಿ ಮಾರ್ಚ ತಿಂಗಳಿನಲ್ಲಿ ನಡೆದಧಾರ್ಮಿಕ ಸಭೆಯಲ್ಲಿ ಭಾಗಿಯಾದ ಮುಸ್ಲಿಂ ಭಾಂದವರು ದೇಶದ ನಾನಾ ಕಡೆಯಿಂದ ಬಂದಿರುತ್ತಾರೆ. ಈ ಸಭೆಯಲ್ಲಿ ಭಾಗವಹಿಸಿದವರು ಸ್ವಯಂ ಪ್ರೇರಿತರಾಗಿ ಆಯಾ ಭಾಗದ ತಹಶೀಲದಾರ ಅಥವಾ ಆರೋಗ್ಯ ಅಧಿಕಾರಿಗಳನ್ನು ಭೇಟಿಯಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕೆಂಬುದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸರಕಾರದ ತಪಾಸಣೆ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿರುವ ಅವರು ಕೊರೊನಾ ಮಹಾಮಾರಿಯನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ. ಇದು ನಮ್ಮ ದೇಶದ ಹಾಗೂ ನಮ್ಮೆಲ್ಲ ನಾಗರೀಕರ ಹಿತದೃಷ್ಟಿಯಿಂದ ಒಳ್ಳೆಯದು ಆದ ಕಾರಣ ಮುಸ್ಲಿಂ ಬಾಂಧವರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.
Leave a Comment