ಜೋಯಿಡಾ –
ದೇಶದಾದ್ಯಂತ ಕೋವಿಡ್ ೧೯ ಕರೋನಾ ವೈರಸ್ ಹರಡಿರುವುದರಿಂದ ದೇಶದಲ್ಲಿ ಜನತಾ ಕರ್ಪ್ಯೂ ಜಾರಿ ಇರುವ ಹಿನ್ನಲ್ಲೇಯಲ್ಲಿ ರಾಜ್ಯದ ಕೆಲ ಕರ್ತವ್ಯ ನಿರತ ಪೋಲಿಸರಿಗೆ ಸರಿಯಾಗಿ ಆಹಾರ ಸಿಗದೇ ಉಪವಾಸ ಬೀಳುವಂತಾಗಿದ್ದು ಇದರಿಂದಾಗಿ ತಮ್ಮ ತಾಲೂಕಿನ ಪೋಲಿಸ್ ಅಧಿಕಾರಿಗಳು ಉಪವಾಸ ಬೀಳುವಂತೆ ಆಗಬಾರದು ಎಂದು ಜೋಯಿಡಾ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಜೋಯಿಡಾ ತಾಲೂಕಿನ ಜೋಯಿಡಾ ಮತ್ತು ರಾಮನಗರ ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿಗಳಿಗೆ ಆಹಾರ ಒದಗಿಸುವ ಕೆಲಸವನ್ನು ಮಾಡಿದ್ದಾರೆ.
ಕರೋನಾ ವೈರಸ್ ಆವರಿಸಿದ್ದರಿಂದ ಈಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ದೇಶದ ಪೋಲಿಸರು ಪ್ರಾಣವನ್ನು ಮುಡಿಪಾಗಿಟ್ಟು ಜನರಿಗಾಗಿ ಸೇವೆಯನ್ನು ಮಾಡುತ್ತಿದ್ದಾರೆ.ಅಷ್ಟೇ ಅಲ್ಲದೆ ಜನರಿಂದ ಹೊಡೆತಗಳನ್ನು ತಿಂದಿದ್ದಾರೆ. ಜನರಿಗೆ ಎಷ್ಟೇ ಬುದ್ದಿ ಹೇಳಿದರು ಮನೆಯಿಂದ ಆಚೆ ಬಂದು ಪೋಲಿಸರ ಪಿತ್ತ ನೆತ್ತಿಗೆರಿಸುವ ಕೆಲಸವನ್ನು ಜನರು ಮಾಡುತ್ತಿದ್ದಾರೆ. ಜೋಯಿಡಾ ಭಾಗದ ಪೋಲಿಸ್ ಅಧಿಕಾರಿಗಳು ಕರೋನಾ ಹರಡದಂತೆ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ತಿರುಗಾಡಿ ಜನರು ಮನೆಯಲ್ಲಿಯೇ ಇರುವಂತೆ ನೋಡಿಕೊಂಡಿದ್ದಾರೆ. ಅಂತ ಪೋಲಿಸರಿಗೆ ಊಟ ವಾದರೂ ಸರಿಯಾದ ಸಮಯಕ್ಕೆ ಸಿಗಲಿ ಎನ್ನುವ ಕಾರಣಕ್ಕೆ ಜೋಯಿಡಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ , ಗಜಾನನ ದೇಸಾಯಿ,ವಿನಯ ದೇಸಾಯಿ, ರಮೇಶ ನಾಯ್ಕ, ಶ್ರೀಧರ ದಬ್ಗಾರ, ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೋಯಿಡಾ ಪೋಲಿಸ್ ಠಾಣೆಯ ಪಿ.ಎಸ್.ಐ ಲಕ್ಷಣ ಪೂಜಾರ ,ಎ.ಎಸ್.ಐ ನರೇಂದ್ರ ಆಚಾರಿ,ಪ್ರಶಾಂತ ಸಾವಂತ, ಹಾಗೂ ರಾಮನಗರ ಪಿ.ಎಸ್.ಐ. ಮಂಜುಳಾ ರಾವುಜಿ ಆಹಾರ ಸಾಮಗ್ರಿ ವಿತರಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
Leave a Comment