ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಶೆಟ್ಟಿಗಲ್ಲಿಯಲ್ಲಿ ಸಿಡಿಲಿನ ಹೊಡೆತಕ್ಕೆ #ತೆಂಗಿನ ಮರ ಹಾಗೂ ಅದರ ತಳದಲ್ಲಿದ್ದ ಇನ್ನೊಂದು ಮರಕ್ಕೆ ಬೆಂಕಿ ತಗುಲಿ ಧಗದಗಿಸಿದವು.
ತಕ್ಷಣ ಹಳಿಯಾಳ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ಇನ್ನೂ ಸಿಡಿಲಿನ ಹೊಡೆತಕ್ಕೆ ಮೂರ್ನಾಲ್ಕೂ ಮನೆಗಳ ವಿದ್ಯುತ್ ಜೊಡಣೆ ಸುಟ್ಟು ಹಾನಿಯಾಗಿದೆ.
ಸ್ಥಳಕ್ಕೆ ಹಳಿಯಾಳ ಪಿಎಸ್ ಐ ರಾಜಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Leave a Comment