ಹಳಿಯಾಳ ಹಳಿಯಾಳ_ವಿಧಾನಸಭಾ_ಕ್ಷೇತ್ರದಲ್ಲಿ ಸದ್ಯ ಅಕ್ರಮ_ಮರಳುಗಾರಿಕೆ ಮತ್ತು ಸಾಗಾಣಿಕೆ ದಂಧೆ ಜೋರಾಗಿ_ನಡೆದಿದೆ. ಪ್ರತಿನಿತ್ಯ_ಸಾವಿರಾರು ಟನ್_ಮರಳು_ಲೂಟಿಕೋರರ_ಪಾಲಾಗುತ್ತಿದೆ.
ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಕೊಟ್ಯಂತರ ರೂ. ರಾಜಧನ ಬರದೆ #ಸರ್ಕಾರಕ್ಕೂ ಇಲ್ಲಿ ವಂಚಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಇಲಾಖೆಯವರು ಕಣ್ಣು ಮುಚ್ಚಿ ಕುಳಿತಿದ್ದು ಜಾಣ_ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅಲ್ಲದೇ ಜನಪ್ರತಿನಿಧಿಗಳು, ಆಡಳಿತ ಮತ್ತು ವಿರೋಧ_ಪಕ್ಷದವರು ತುಟಿ ಬಿಚ್ಚದೆ ಇರುವುದು ಸಾಕಷ್ಟು ಉಹಾಪೋಹಗಳಿಗೆ , ಸಂದೇಹಗಳಿಗೆ ಎಡೆಮಾಡಿದೆ.
ಕಳೆದ ವರ್ಷ ಹಳಿಯಾಳ-ದಾಂಡೇಲಿ-ಜೋಯಿಡಾ ಮತ್ತು ರಾಮನಗರದ ಹಳ್ಳ,ತೊರೆ, ನದಿಗಳಲ್ಲಿ ಪ್ರವಾಹ ಉಂಟಾಗಿ ಕೋಟ್ಯಂತರ ಟನ್ ಉಸುಕು ಬಂದು ಬಿದ್ದಿದೆ.
ಸದ್ಯ ನಿಸರ್ಗದತ್ತವಾಗಿ ಬಂದು ಬಿದ್ದಿರುವ ಈ ಮರಳನ್ನು ಸರ್ಕಾರಕ್ಕೆ ರಾಜಧನ ತುಂಬದೆ ಯಾವುದೇ ಅನುಮತಿ ಪಡೆಯದೆ ಪ್ರತಿನಿತ್ಯ ಅಗೆದು ಬಗೆದು ಲೂಟಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅಲ್ಲದೇ ಇದರಲ್ಲಿ ಎಲ್ಲರೂ ಶಾಮಿಲಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ. ಸಂಬಂಧಪಟ್ಟವರಿಗೆ ಹಲವಾರು ಬಾರಿ ಮೌಖಿಕ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗುತ್ತಿದೆ.
ಹಳಿಯಾಳದಲ್ಲಿ ಪ್ರತಿನಿತ್ಯ 20 ರಿಂದ 25 ಲಾರಿ ಟಿಪ್ಪರಗಳು ರಾತ್ರಿವೇಳೆ ಅಕ್ರಮವಾಗಿ ಮರಳನ್ನು ಹಳಿಯಾಳ ಕ್ಷೇತ್ರದಿಂದ ಬೆರೆ ಜಿಲ್ಲೆಗಳಿಗೆ ಉಸುಕು ಸಾಗಿಸುತ್ತಿವೆ.
ಮಾತ್ರವಲ್ಲದೇ ಹಳಿಯಾಳದ ಹಲವು ಕಡೆ ಅಕ್ರಮವಾಗಿ ದಾಸ್ತಾನು ಕೂಡ ಮಾಡಲಾಗುತ್ತಿದೆ ಎನ್ನಲಾಗಿದೆ.
ದಾಂಡೇಲಿ, ಬರ್ಚಿ ಮೂಲಕ ಕರ್ಕಾದಲ್ಲಿರುವ ಅರಣ್ಯ ಇಲಾಖೆ ಚೆಕಪೊಸ್ಟ್ ಅನ್ನು ಸಲಿಸಾಗಿ ಪಾರು ಮಾಡಿ ಬರುವ ಮರಳು ತುಂಬಿದ ವಾಹನಗಳು ಜಾವಳ್ಳಿ, ಯಡೋಗಾ ಕ್ರಾಸ್ ಮಾರ್ಗವಾಗಿ ಹಾಗೂ ಕರ್ಕಾ, ಕೆಸರೊಳ್ಳಿ ಕ್ರಾಸ್ , ರುಡಸೆಟ್ ಎದುರಿನಿಂದ ಯಲ್ಲಾಪುರ ನಾಕೆ ಮಾರ್ಗವಾಗಿ ಹಳಿಯಾಳದಿಂದ ಧಾರವಾಡ, ಹುಬ್ಬಳ್ಳಿ, ಅಳ್ನಾವರ ಇತರೆಡೆ
ಈ ಉಸುಕು ಸಾಗಾಣೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಹಳಿಯಾಳದ ಎಲ್ಲ ಚೆಕ್ ಪೊಸ್ಟ್ ಗಳನ್ನು ಸಲಿಸಾಗಿ, ಆರಾಮವಾಗಿ ದಾಟಿಕೊಂಡು ಹೋಗುವ ಈ ಅಕ್ರಮ ಮರಳು ತುಂಬಿದ ಲಾರಿಗಳ ಬಗ್ಗೆ ಸಂಬಂಧಪಟ್ಟವರು ಯಾಕೆ ಕ್ರಮ ಜರುಗಿಸುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಈ ಬಗ್ಗೆ ಉತ್ತರ ಕನ್ನಡ ಖಡಕ್ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಅವರು ಹಾಗೂ ಸಂಬಂಧಿಸಿದ ಇಲಾಖಾ ಮೇಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದೆ ಇದ್ದರೇ ಇರುವ ಮರಳು ಲೂಟಿಕೊರರ ಪಾಲಾಗಿ , ಸರ್ಕಾರಕ್ಕೆ ರಾಜಧನವು ಸಿಗದೆ, ಬಳಿಕ ಜನರಿಗೆ ಮರಳು ದುಬಾರಿ ಬೆಲೆಯಲ್ಲಿ ಸಿಗಲಿದ್ದು ಸಾರ್ವಜನಿಕರಿಗೆ ಹೊರೆ ಆಗಲಿದೆ ಎಂಬುದು ಅಷ್ಟೇ ಕಟು ಸತ್ಯವಾಗಿದೆ.
Leave a Comment