ಹಳಿಯಾಳ :- ಹಳಿಯಾಳ ಪಟ್ಟಣದ ಸಿದ್ದರಾಮೇಶ್ವರ ಗಲ್ಲಿ ರಹವಾಸಿ ಎನ್ನಲಾದ ಉದ್ಯೋಗಕ್ಕಾಗಿ ಮಹಾರಾಷ್ಟ್ರ ರಾಜ್ಯಕ್ಕೆ ತೆರಳಿ ವಾಪಸ್ಸಾಗಿದ್ದ ಮಹಿಳೆಯಲ್ಲಿ ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ
ಮಹಿಳೆಯನ್ನು ಆರೋಗ್ಯ_ಇಲಾಖೆ_ಸಿಬ್ಬಂದಿಗಳು
ಸಂಪೂರ್ಣ_ಸುರಕ್ಷಾ_ವಿಧಾನಗಳನ್ನು_ಬಳಸಿ ಅಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗೆ_ರವಾನಿಸಿದರು.
ಹಳಿಯಾಳದ ಈ ಪ್ರದೇಶಕ್ಕೆ ಭೇಟಿ ನೀಡಿದ ಕಾರವಾರ ಸಹಾಯಕ_ಕಮಿಷನರ್ ಎಂ_ಪ್ರಿಯಾಂಗ ಅವರು ಮಹಿಳೆಯ ನಿವಾಸಕ್ಕೆ ಹಾಗೂ ಬಡಾವಣೆಯಲ್ಲಿ ಸೊಂಕು ನಿವಾರಕ ರಾಸಾಯನಿಕ ಔಷಧಿಗಳನ್ನು ಸಿಂಪಡಿಸುವಂತೆ ಸೂಚಿಸಿದ್ದಾರೆ.
ಈಗಾಗಲೇ ಮಹಿಳೆಯ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾದ ಇಲ್ಲಿಯ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸಾಂಸ್ಥಿಕ ಕ್ವಾರಂಟೈನ್ ಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಸಧ್ಯ ಸಿದ್ದರಾಮೇಶ್ವರ ಗಲ್ಲಿಯನ್ನು ಸೀಲ್ ಡೌನ್ ಮಾಡಲಾಗಿದೆ. ಸ್ಥಳಕ್ಕೆ ಹಳಿಯಾಳ ತಹಶಿಲ್ದಾರ್ ವಿದ್ಯಾಧರ ಗುಳಗುಳೆ, ಸಿಪಿಐ ಲೋಕಾಪುರ,ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.
Leave a Comment